26ಕ್ಕೆ ಕಬ್ಬಳ ಕತ್ತಿಕಲ್ಲಾಂಭ ದೇವಿ ಬ್ರಹ್ಮರಥೋತ್ಸವ

KannadaprabhaNewsNetwork |  
Published : Feb 23, 2025, 12:32 AM IST
ಪೋಟೋ  22ಎಚ್‌ಎಸ್‌ಡಿ2 : ಹೊಸದುರ್ಗ ತಾಲೂಕಿನ ಕಬ್ಬಳ ಗ್ರಾಮದ ಶ್ರೀ ಕತ್ತಿಕಲ್ಲಾಂಭ ದೇವಿ. | Kannada Prabha

ಸಾರಾಂಶ

ತಾಲೂಕಿನ ಕಬ್ಬಳ ಗ್ರಾಮ ದೇವತೆ ಶ್ರೀಕತ್ತಿಕಲ್ಲಾಂಭ ದೇವಿ ರಥದ ಪ್ರತಿಷ್ಠಾಪನೆ ಹಾಗೂ ಬ್ರಹ್ಮರಥೋತ್ಸವ ಫೆ.26ರಂದು ಬೆಳಿಗ್ಗೆ 5ಕ್ಕೆ ನಡೆಯಲಿದೆ.

ಹೊಸದುರ್ಗ: ತಾಲೂಕಿನ ಕಬ್ಬಳ ಗ್ರಾಮ ದೇವತೆ ಶ್ರೀಕತ್ತಿಕಲ್ಲಾಂಭ ದೇವಿ ರಥದ ಪ್ರತಿಷ್ಠಾಪನೆ ಹಾಗೂ ಬ್ರಹ್ಮರಥೋತ್ಸವ ಫೆ.26ರಂದು ಬೆಳಿಗ್ಗೆ 5ಕ್ಕೆ ನಡೆಯಲಿದೆ.ನೂತನ ರಥ ಪ್ರತಿಷ್ಠಾಪನೆ ಅಂಗವಾಗಿ ಫೆ.20ರ ಗುರವಾರ ಕತ್ತಿಕಲ್ಲಾಂಭ ದೇವಿಯೊಂದಿಗೆ ಗ್ರಾಮದ ಲಕ್ಕಮ್ಮ ದೇವಿ, ಕಾಲಭೈರವೇಶ್ವರ ಸ್ವಾಮಿ, ಸೋಮೇಶ್ವರ ಸ್ವಾಮಿ, ಪಾಂಡುರಂಗ ರುಕ್ಮೀಣಿ ದೇವಿ ಹೊಳೆ ಪೂಜೆ ನಡೆಯಿತು. ಫೆ.21ರಂದು ರಾಜ ಬೀದಿ ಉತ್ಸವ, ಫೆ,22ರಂದು ಗ್ರಾಮದ ಎಲ್ಲಾ ದೇವರಗಳ ಸಮ್ಮುಖದಲ್ಲಿ ಗುಡ್ಡದ ರಂಗನಾಥಸ್ವಾಮಿ ದೇವರಿಗೆ ಬಿಲ್ಗೂಡು ಹಾಗೂ ದೊಡ್ಡ ಎಡೆ ಸೇವೆ ನಂತರ ದೇವರುಗಳ ಕೂಡುಬೇಟಿ ಕಾರ್ಯಕ್ರಮ ನಡೆಯಿತು.

ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಾಂಡು ರಂಗ ರುಕ್ಮಿಣಿ ದೇವಿಯ ದಿಂಡಿ ಉತ್ಸವ ನಾನಾ ಜಾನಪದ ಕಲಾಮೇಳದೊಂದಿಗೆ ಜರಗಲಿದ್ದು, ಮಡ್ಲಕ್ಕಿ ಸಂಗ್ರಹ ಕಾರ್ಯಕ್ರಮ ನಡೆಯಲಿದೆ. ಫೆ,24ರಂದು ಬೆಳಿಗ್ಗೆ 8 ಗಂಟೆಗೆ ಗ್ರಾಮದ ಹೊರವಲಯದಲ್ಲಿರುವ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಅಮ್ಮನವರ ಭೇಟಿ ಹಾಗೂ ವಿಶೇಷ ಪೂಜೆ ನಡೆಯಲಿದ್ದು, ನಂತರ ಗ್ರಾಮದ ದೇವಾಲಯದಲ್ಲಿ ದೇವಿ ಮದವಣಗಿತ್ತಿ ಪೂಜೆ ಹಾಗೂ ಧ್ವಜರೋಹಣ ನಡೆಯಲಿದ್ದು, ರಾತ್ರಿ ಉಯ್ಯಾಲೋತ್ಸವ ನಂತರ ಮಾಂಗಲ್ಯಧಾರಣೆ ನಡೆಯಲಿದೆ.

ಫೆ.25ರಂದು ಬೆಳಿಗ್ಗೆ 6ಕ್ಕೆ ಅಮ್ಮನವರ ಅರತಿಯೊಂದಿಗೆ ಜಾಲಿಯಮ್ಮನವರ ದೇವಸ್ಥಾನಕ್ಕೆ ತೆರಳಿ ಪಂಚಾಮೃತ ಅಭಿಷೇಕ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ನೂತನ ರಥ ಕಳಸ ಹಾಗೂ ಗಂಗಾ ಪೂಜೆ ರಾತ್ರಿ ಗ್ರಾಮದಲ್ಲಿ ಸುಗ್ಗಿ ಮಹೋತ್ಸವ ನಡೆಯಲಿದೆ. ಫೆ.26 ರಂದು ಬೆಳಿಗ್ಗೆ 5 ಗಂಟೆಯ ಮಕರ ಲಗ್ನದಲ್ಲಿ ಕತ್ತಿಕಲ್ಲಾಂಭ ದೇವಿಯ ನೂತನ ರಥ ಪ್ರತಿಷ್ಠಾಪನೆ ನಂತರ ದೇವಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ