ಮೂಲೆ ನಿವೇಶನ ಮಾರಾಟಕ್ಕೆ ಬಿಡಿಎ ನಿರ್ಧಾರ

KannadaprabhaNewsNetwork |  
Published : Mar 27, 2024, 02:01 AM ISTUpdated : Mar 27, 2024, 02:50 PM IST
ಬಿಡಿಎ | Kannada Prabha

ಸಾರಾಂಶ

ನಗರದ ವಿವಿಧೆಡೆ ಮೂಲೆ ನಿವೇಶನಗಳನ್ನು ಆಯಾ ಬಡಾವಣೆಗಳಲ್ಲಿರುವ ಸ್ಥಿತಿಯಲ್ಲಿಯೇ ಹರಾಜು ಮಾಡಲು ಬಿಡಿಎ ನಿರ್ಧರಿಸಿದ್ದು, ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬನಶಂಕರಿ, ಅಂಜನಾಪುರ, ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಹುಕೋಟಿ ಮೌಲ್ಯದ 68 ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲು ಬಿಡಿಎ ನಿರ್ಧರಿಸಿದೆ.

ಮೂಲೆ ನಿವೇಶನಗಳು, ಮಧ್ಯಂತರ ನಿವೇಶನಗಳು ಮತ್ತು ಇತರೆ ಹರಾಜು ಮಾಡಬಹುದಾದ ನಿವೇಶನಗಳ ವಿಲೇವಾರಿ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗುವುದು. ನಿವೇಶನಗಳನ್ನು ಆಯಾ ಬಡಾವಣೆಗಳಲ್ಲಿರುವ ಸ್ಥಿತಿಯಲ್ಲಿಯೇ ಹರಾಜು ಮಾಡುವುದಾಗಿ ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವವರು ಮಾ.30ರಂದು ಸಂಜೆ 5 ಗಂಟೆಯೊಳಗೆ ನೋಂದಾಯಿಸಬೇಕು. ಏಪ್ರಿಲ್‌ 1ರಂದು ಬೆಳಗ್ಗೆ 10ಕ್ಕೆ ಇ- ಹರಾಜಿನ ನೇರ ಬಿಡ್ಡಿಂಗ್‌ ಆರಂಭವಾಗಿ ಏ.2ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. 

ಆರಂಭಿಕ ಬಿಡ್‌ ದರ ಚದರ ಮೀಟರ್‌ಗೆ ₹60 ಸಾವಿರಗಳಿಂದ ಆರಂಭಗೊಂಡು ಗರಿಷ್ಠ 1.27 ಲಕ್ಷ ರು.ಗಳವರೆಗೆ ದರ ನಿಗದಿಪಡಿಸಲಾಗಿದೆ.

ಕೆಲವು ಬಡಾವಣೆಗಳಲ್ಲಿ ಒಂದು ನಿವೇಶನ, ಕೆಲವು ಬಡಾವಣೆಗಳಲ್ಲಿ 14 ನಿವೇಶನಗಳವರೆಗೆ ಇ-ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ನಿವೇಶನಕ್ಕೆ ಇಎಂಡಿ ₹4 ಲಕ್ಷಗಳನ್ನು ನಿಗದಿಪಡಿಸಲಾಗಿದೆ. ಈ ಮೊತ್ತ ಹಾಗೂ ಇ-ಹರಾಜಿನ ಶುಲ್ಕವನ್ನು ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ನಲ್ಲಿರುವಂತೆ ಪಾವತಿಸಬೇಕಿದೆ.

ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಿ ಸಂಪನ್ಮೂಲಕ ಕ್ರೋಢೀಕರಿಸುವ ಉದ್ದೇಶ ಹೊಂದಲಾಗಿದೆ. 

ನಿವೇಶನಗಳ ಇ-ಹರಾಜಿನಿಂದ ಬಂದ ಮೊತ್ತವನ್ನು ಬಿಡಿಎ ಬಡಾವಣೆಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.

ಎಲ್ಲೆಲ್ಲಿ ನಿವೇಶನ ಲಭ್ಯ?:

ನಿವೇಶನಗಳು: ಬನಶಂಕರಿ 6ನೇ ಹಂತ 1ನೇ ಬ್ಲಾಕ್‌ನಲ್ಲಿ 5 ನಿವೇಶನಗಳು, 2ನೇ ಬ್ಲಾಕ್‌ನಲ್ಲಿ 14 ನಿವೇಶನಗಳು, ಕುಮಾರಸ್ವಾಮಿ ಲೇಔಟ್ 1ನೇ ಹಂತದಲ್ಲಿ 2 ನಿವೇಶನ, ಮುಂದುವರೆದ ಅಂಜನಾಪುರ 11ನೇ ಬ್ಲಾಕ್‌ 17 ನಿವೇಶನಗಳು, ಬನಶಂಕರಿ 6ನೇ ಹಂತ 4ನೇ ಬಿ ಬ್ಲಾಕ್‌ನಲ್ಲಿ 14 ಮತ್ತು 4ನೇ ಎಚ್‌ ಬ್ಲಾಕ್‌ನಲ್ಲಿ 1 ನಿವೇಶನ.

ಅಂಜನಾಪುರ 7ನೇ ಬ್ಲಾಕ್‌ನಲ್ಲಿ 1 ಮತ್ತು ಮುಂದುವರೆದ ಸರ್‌ಎಂವಿ ಬಡಾವಣೆಯ 7ನೇ ಬ್ಲಾಕ್‌ನಲ್ಲಿ 1 ನಿವೇಶನ ಇ-ಹರಾಜಿಗೆ ಇದೆ. ಸರ್‌ ಎಂ ವಿಶ್ವೇಶ್ವರಯ್ಯ 9ನೇ ಬ್ಲಾಕ್‌ನಲ್ಲಿ 3, 1ನೇ ಬ್ಲಾಕ್‌ನಲ್ಲಿ 1 ಹಾಗೂ 4 ಮತ್ತು 5ನೇ ಬ್ಲಾಕ್‌ನಲ್ಲಿ ತಲಾ 4, 8ನೇ ಬ್ಲಾಕ್‌ನಲ್ಲಿ 1 ನಿವೇಶನ ಸೇರಿದಂತೆ ಒಟ್ಟು 68 ನಿವೇಶನಗಳನ್ನು ಇ-ಹರಾಜು ಪ್ರಕ್ರಿಯೆ ಮೂಲಕ ಬಿಡಿಎ ಮಾರಾಟ ಮಾಡಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ