ಕನ್ನಡಪ್ರಭ ವಾರ್ತೆ ಬೆಂಗಳೂರು
ಎರಡು ತಿಂಗಳ ಹಿಂದಷ್ಟೇ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ನಗರಾದ್ಯಂತ ಎಲ್ಲ ರಸ್ತೆಗಳ ಪಾಟ್ಹೋಲ್ ಮುಚ್ಚುವ ಟಾಸ್ಕನ್ನು ಬಿಬಿಎಂಪಿ ನಡೆಸಿತ್ತು. ಇದಕ್ಕಾಗಿ ಪ್ರತಿ ವಾರ್ಡ್ಗೆ ₹15 ಲಕ್ಷ ಬಿಡುಗಡೆ ಮಾಡಲಾಗಿದೆ. ಅದರ ಭಾಗವಾಗಿ ಇಲ್ಲಿಯೂ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ, ಕಾಟಾಚಾರಕ್ಕಾಗಿ, ಕಳಪೆಯಾಗಿ ಗುಂಡಿ ಮುಚ್ಚಲಾಗಿದೆ. ಸೆಪ್ಟೆಂಬರ್ ಕೊನೆಯ ವಾರ ಸುರಿದ ಮಳೆಗೆ ರಸ್ತೆ ಗುಂಡಿ ಮುಚ್ಚಿದ ಕಾಮಗಾರಿಯ ಗುಣಮಟ್ಟ ಬಯಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಇಎಲ್ ಸರ್ಕಲ್ ಸೇರಿದಂತೆ ಎಚ್ಎಂಟಿ ರಸ್ತೆ, ಗಂಗಮ್ಮ ಸರ್ಕಲ್, ಎಂ.ಎಸ್.ಪಾಳ್ಯಕ್ಕೆ ಹೋಗುವ ಮುಖ್ಯ ರಸ್ತೆಗುಂಟ ಗುಂಡಿಗಳು ಉಂಟಾಗಿವೆ. ಜಾಲಹಳ್ಳಿ, ಜಾಲಹಳ್ಳಿ ಏರ್ಪೋರ್ಟ್ ಸ್ಟೇಷನ್, ಅಬ್ಬಿಗೆರೆ, ರಾಮಚಂದ್ರಾಪುರ, ಎಚ್ಎಂಟಿ ಸೇರಿ ಮತ್ತಿತರೆಡೆ ಬರುವವರು ಪರದಾಡುವಂತಾಗಿದೆ.ಗುಂಡಿಗಳಿಂದ ಜಲ್ಲಿಕಲ್ಲುಗಳು, ಟಾರ್ ತುಂಡುಗಳು ರಸ್ತೆಯ ತುಂಬೆಲ್ಲ ಹರಡಿಕೊಂಡಿವೆ. ಅಡಿಗಳಷ್ಟು ಆಳದ ಗುಂಡಿಗಳಲ್ಲಿ ವಾಹನಗಳು ಹತ್ತಿಳಿಯುವುದರಿಂದ ಸವಾರರು ಪರದಾಡುತ್ತಿದ್ದಾರೆ. ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದೇ ಸವಾಲಾಗಿದೆ. ಒಳ ರಸ್ತೆ, ಬಡಾವಣೆಗಳಲ್ಲೂ ಇದೇ ಪರಿಸ್ಥಿತಿಯಿದೆ.
ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ದುರಸ್ತಿ ಮಾಡಿದ ರಸ್ತೆ ಒಂದೇ ಮಳೆಗೆ ಪುನಃ ಕಿತ್ತು ಹೋಗುತ್ತಿದೆ ಎಂದರೆ ಏನರ್ಥ? ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಮಾತ್ರವಲ್ಲ, ಕಾಮಗಾರಿ ಗುಣಮಟ್ಟ ಹೇಗಿದೆ ಎಂಬುದನ್ನೂ ಮೇಲ್ವಿಚಾರಣೆ ಮಾಡಬೇಕು ಎಂದು ಸ್ಥಳೀಯ ನಿವಾಸಿ ಭರತ್ ಹೇಳಿದರು.
-ಬಿ.ಎಸ್.ಪ್ರಹ್ಲಾದ್, ಬಿಬಿಎಂಪಿ, ರಸ್ತೆ ಮುಖ್ಯ ಎಂಜಿನಿಯರ್.
-ಪವನ್ ಮತ್ತಿಕೆರೆ, ಸ್ಥಳೀಯ ನಿವಾಸಿ.