ಬೆಳ್ತಂಗಡಿ: ಮಳೆಗಾಲ ಆರಂಭವಾಗಲು ಇನ್ನು ಕೆಲವೇ ದಿನಗಳಿದ್ದು ತಾಲೂಕಿನ ಕೆಲವು ಕಡೆ ಮುಖ್ಯರಸ್ತೆಗಳಿಗೆ ನಿರ್ಮಾಣವಾಗುತ್ತಿರುವ ಕಿರು ಸೇತುವೆಗಳ ಕೆಲಸ ಪೂರ್ಣಗೊಳ್ಳಬೇಕಿದೆ.
ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆ ಧರ್ಮಸ್ಥಳ, ಕೊಕ್ಕಡ ನಿಡ್ಲೆ, ಮುಂಡಾಜೆ, ಚಾರ್ಮಾಡಿ ಮೊದಲಾದ ಭಾಗಗಳಿಗೆ ತೀರಾ ಸಮೀಪದ ಸಂಪರ್ಕವಾಗಿದೆ. ಸುಮಾರು 6 ಕಿ.ಮೀ ವ್ಯಾಪ್ತಿಯನ್ನು ಕಡಿಮೆಗೊಳಿಸುವ ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಪ್ರವಾಸಿ ವಾಹನಗಳಲ್ಲದೇ ಸ್ಥಳೀಯವಾಗಿ ಹೆಚ್ಚಿನ ವಾಹನಗಳ ಓಡಾಟವಿದೆ. ಈ ರಸ್ತೆಯ ಆರು ಕಡೆ ಅಪಾಯಕಾರಿ, ಅಗಲ ಕಿರಿದಾದ, ಶಿಥಿಲಾವಸ್ಥೆ ತಲುಪಿರುವ ಕಿರು ಸೇತುವೆಗಳಿದ್ದು ಈಗ ಮೂರು ಕಡೆ ಹೊಸ ಸೇತುವೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಅಂಬಡಬೆಟ್ಟು ಸೇತುವೆ: ಉಜಿರೆಯಿಂದ ನಿಡಿಗಲ್ ಮೂಲಕ ನಡ, ಇಂದಬೆಟ್ಟು, ಕೊಲ್ಲಿ, ಗುರಿಪ್ಪಳ್ಳ, ಪಡ್ಪು ಮೊದಲಾದ ಪ್ರದೇಶಗಳ ಸಾವಿರಾರು ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಅಂಬಡಬೆಟ್ಟು ಕಿರು ಸೇತುವೆ 2.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು 15 ದಿನಗಳ ಹಿಂದಷ್ಟೇ ಕಾಮಗಾರಿ ಆರಂಭವಾಗಿದೆ.ಈ ಕಿರು ಸೇತುವೆ ಕಾಮಗಾರಿ ಮಳೆಗಾಲದೊಳಗೆ ಪೂರ್ಣಗೊಳ್ಳದಿದ್ದರೆ ಹಲವಾರು ಅಡಚಣೆಗಳು ಉಂಟಾಗಲಿವೆ.ಹಳ್ಳದ ನೀರು ಸರಿಯಾಗಿ ಹರಿಯದೆ ಕೃತಕನರೆ ಸೃಷ್ಟಿಯಾಗುವ ಜತೆ ರಸ್ತೆ ಸಂಪರ್ಕವು ಕಡಿತಗೊಳ್ಳಬಹುದು. ಅಲ್ಲದೆ ಸೇತುವೆ ರಚನೆಗಾಗಿ ಅಗೆದು ಹಾಕಲಾಗಿರುವ ರಸ್ತೆಯು, ಕುಸಿದು ಬೀಳಬಹುದು, ಸಂಪರ್ಕ ಕಡಿತಗೊಂಡರೆ ಇಲ್ಲಿನ ಹಲವಾರು ಪ್ರದೇಶಗಳ ಜನರು ಹಲವು ಕಿ.ಮೀ. ದೂರದ ಸುತ್ತು ಬಳಸು ರಸ್ತೆಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ.
ಬಹು ವರ್ಷದ ಬೇಡಿಕೆ: ಮುಂಡಾಜೆ- ಧರ್ಮಸ್ಥಳ ರಸ್ತೆಯ ಮೂರು ಹಾಗೂ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣವಾಗುತ್ತಿರುವ ಕಿರು ಸೇತುವೆಗಳಿಗೆ ಸ್ಥಳೀಯರು ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ಇದೀಗ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 2024ರ ಮಳೆಗಾಲದಲ್ಲಿ ಈ ಎರಡು ರಸ್ತೆಗಳಲ್ಲಿ ಜನ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿಷೇಧವನ್ನು ಹೇರಿದ್ದರು. ಮುಂಡಾಜೆ- ಧರ್ಮಸ್ಥಳ ರಸ್ತೆಯಲ್ಲಿ ಡಿಸಿಯವರ ಆದೇಶ ದಾಖಲೆಗಳಿಗೆ ಮಾತ್ರ ಸೀಮಿತವಾಗಿದ್ದರೆ, ಉಜಿರೆ-ಇಂದಬೆಟ್ಟು ರಸ್ತೆಯಲ್ಲಿ ಘನವಾಹನ ಸಂಚಾರವಿರಲಿಲ್ಲ.ಕೋಟ್1
ಬಕ್ಕಪ್ಪ ಎಇಇ, ಪಿಡಬ್ಲ್ಯೂಡಿ, ಬೆಳ್ತಂಗಡಿ
ಕಲ್ಮಂಜ ರಸ್ತೆಗೆ ಆರು ಕಿರು ಸೇತುವೆಗಳ ಅಗತ್ಯವಿದ್ದು ಈಗ ಮೂರು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.ಇದು ಮಳೆಗಾಲದೊಳಗೆ ಪೂರ್ಣಗೊಳ್ಳುವುದು ಅಗತ್ಯವಾಗಿದೆ. ಕಾಮಗಾರಿ ಪೂರ್ಣಗೊಳ್ಳದಿದ್ದರೆ ಸಂಚಾರ ಸಮಸ್ಯೆ ಉಂಟಾಗಲಿದೆ.
ಕೋಟ್ 3
ರಾಧಾಕೃಷ್ಣ ವಾಹನ ಸವಾರ ಇಂದಬೆಟ್ಟು