ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಜೂ. 7ರಿಂದ 13ರ ವರೆಗೆ ನಡೆಯಲಿರುವ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹದ ಉದ್ಘಾಟನೆ ಮತ್ತು ಗ್ರಂಥರಾಜ ಜ್ಞಾನೇಶ್ವರಿಯ ಬಿಡುಗಡೆ ಸೋಮವಾರ ನಡೆಯಿತು.
ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಅರಿತುಕೊಂಡು ನಮ್ಮಲ್ಲಿರುವ ಆತ್ಮ ಒಂದೇ ಎಂಬ ಭಾವನೆಯಿಂದ ಬದುಕಿ ಮತ್ತೊಬ್ಬರ ಬಗ್ಗೆ ಚಿಂತನೆ ದ್ವೇಷ ಬಿಟ್ಟು ಬಾಳಿದಾಗ ನೆಮ್ಮದಿ ಸಾಧ್ಯ. ಪಾಂಡುರಂಗ ಭಜನೆಯ ಶಕ್ತಿಯಿಂದ ಇಲ್ಲಿ ಆಗಮಿಸಿದ ಪಂಡರಾಪುರ ಭಕ್ತ ವೃಂದ, ಶಿಷ್ಯರು ಧನ್ಯರು, ಭಜನೆ, ಧ್ಯಾನದಿಂದ ನಮ್ಮಲ್ಲಿನ ದುಃಖವನ್ನು ನಿವಾರಿಸುವ ಶಕ್ತಿ ಇದೆ ಎಂದು ಅವರು ಹೇಳಿದರು.
ಆರ್ಎಸ್ಎಸ್ ಹಿರಿಯ ಪ್ರಮುಖ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ಜಗತ್ತಿನಲ್ಲಿ ಉಳಿಸಿ ಬೆಳೆಸಿದೆ. ನಾವೆಲ್ಲ ಒಟ್ಟಾಗಿ ಪಾರಾಯಣದ ಮೂಲಕ ಅನುಷ್ಠಾನ ಮಾಡಿದಾಗ ನೆಮ್ಮದಿ ಸಿಗುವುದು ಎಂದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಫಂಡರಾಪುರದ ವಿಠಲ ಕನ್ಯಾಡಿಗೆ ಬಂದು ಭಕ್ತ ವೃಂದದ ಮೂಲಕ ಶಕ್ತಿ ನೀಡುವ ಕಾರ್ಯ ಆಗಿದೆ. ಇದರಿಂದ ಹಿಂದೂ ಸಂಸ್ಕೃತಿ, ಸಂಸ್ಕಾರ ಉಳಿಯಲು ಸಾಧ್ಯ. ಹಿಂದೂ ಸಮಾಜಕ್ಕೆ ಇಲ್ಲಿ ನಡೆಯುವ ಪಾರಾಯಣ ಸಪ್ತಾಹ ಒಂದು ದೊಡ್ಡ ಯಜ್ಞವಾಗಿದೆ. ನಮಗೂ ಪಂಡರಾಪುರದ ಭಕ್ತರೊಂದಿಗೆ ಸೇರುವ ಅವಕಾಶ ಸಿಕ್ಕಿದೆ ಎಂದರು.ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ದೇವರ ಎದುರು ಎಲ್ಲರೂ ಸಮಾನರು ಅಧಿಕ ಮಾಸದ ನಿಮಿತ್ತ ಮಾಡಿರುವ ಪಾರಾಯಣ ಎಲ್ಲರಲ್ಲಿ ಭಕ್ತಿಯನ್ನು ತೋರಿಸುತ್ತದೆ ಎಂದರು.ಗುರುದೇವ ಮಠದ ಟ್ರಸ್ಟಿ ಸುಜಿತಾ ವಿ. ಬಂಗೇರ, ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ್, ನಾನಾ ಮಠಗಳ ಸ್ವಾಮೀಜಿಗಳಾದ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಮಹಾರಾಜ್, ಶ್ರೀ ಚೈತನ್ಯ ಸದ್ಗುರು ಗೋಪಾಲ ಕಾಕಾ ಮಕಾಶಿರ, ಹಿರೇಮಠದ ಡಾ. ಕಲ್ಲೇಶ್ವರ ಮಹಾ ಸ್ವಾಮೀಜಿ, ದಾದಾನಪಿ ಶಿವಾನಂದ ಮಠದ ಶ್ರೀ ನಿಜಾನಂದ ಸ್ವಾಮೀಜಿ, ವೀರಾನಂದ ಆಶ್ರಮದ ಚೆನ್ನಮಲ್ಲಯ್ಯ ಸ್ವಾಮೀಜಿ, ವೀರಮಲ್ಲೇಶ್ವರ ಸ್ವಾಮೀಜಿ, ಬಸವರಾಜ್ ಸ್ವಾಮೀಜಿ ಅಂದ್ರಲಾ, ಸ್ವಾಮಿ ಬೋಳಗಿರಿ ಉಪಸ್ಥಿತರಿದ್ದರು.ಫಂಡರಾಪುರ ಶಿವೂರಕರ ಸಂಸ್ಥೆ ವತಿಯಿಂದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಗ್ರಂಥವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.