;Resize=(412,232))
ಬೆಂಗಳೂರು : ರಾಜ್ಯದಲ್ಲಿನ 69,922 ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಶಿಕ್ಷಣ ಕಿಟ್ ಒದಗಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಶಾಲಾ ಪೂರ್ವ ಶಿಕ್ಷಣ ಕಿಟ್ ಒದಗಿಸಲು ತೀರ್ಮಾನಿಸಲಾಗಿದೆ. 69,922 ಅಂಗನವಾಡಿ ಕೇಂದ್ರಗಳಿಗೆ 3,000 ರು. ಘಟಕ ವೆಚ್ಚದಂತೆ ಒಟ್ಟು 20.98 ಕೋಟಿ ರು. ವೆಚ್ಚ ಮಾಡಿ ಶಾಲಾ ಪೂರ್ವ ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ. ಶಾಲಾ ಪೂರ್ವ ಮಕ್ಕಳ ಉನ್ನತ ಅಭ್ಯಾಸಕ್ಕೆ ಇದು ನೆರವಾಗಲಿದೆ ಎಂದರು.
ಇದೇ ವೇಳೆ ಎನ್.ಸುಶೀಲಮ್ಮ, ಚನ್ನಪ್ಪ, ಸೀಮಾನಾಯಕ್, ಎಚ್.ಆರ್.ಶಿವಕುಮಾರ್ ಅವರಿಗೆ ಕೆಎಎಸ್ನಿಂದ ಐಎಎಸ್ಗೆ ಬಡ್ತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೆಲ ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಪರಿಶೀಲನೆ ನಡೆಸಲು ವಿಷಯ ಮುಂದೂಡಲಾಗಿದೆ.