ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ

Published : Aug 29, 2025, 11:40 AM IST
Pro Kabaddi League

ಸಾರಾಂಶ

ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಗೆ ಶುಕ್ರವಾರ ಇಲ್ಲಿನ ವಿಶ್ವನಾಥ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಚಾಲನೆ ದೊರೆಯಲಿದೆ. 7 ವರ್ಷಗಳ ಬಳಿಕ ನಗರದಲ್ಲಿ ಪಿಕೆಎಲ್‌ ನಡೆಯಲಿದೆ.

ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಗೆ ಶುಕ್ರವಾರ ಇಲ್ಲಿನ ವಿಶ್ವನಾಥ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಚಾಲನೆ ದೊರೆಯಲಿದೆ. 7 ವರ್ಷಗಳ ಬಳಿಕ ನಗರದಲ್ಲಿ ಪಿಕೆಎಲ್‌ ನಡೆಯಲಿದೆ.

ಈ ಸಲವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಕೆಲ ಬದಲಾವಣೆಯೊಂದಿಗೆ ಟೂರ್ನಿ ನಡೆಯಲಿದೆ. ಲೀಗ್‌ ಹಂತದಲ್ಲಿ ಈ ಬಾರಿ 108 ಪಂದ್ಯಗಳು ಇರಲಿದ್ದು, ಪ್ಲೇ-ಇನ್‌ನಲ್ಲಿ 2, ಪ್ಲೇ-ಆಫ್‌ನಲ್ಲಿ ಫೈನಲ್‌ ಸೇರಿ 7 ಪಂದ್ಯಗಳು ಇರಲಿವೆ. ಒಟ್ಟಾರೆ 119 ಪಂದ್ಯಗಳು ಈ ಆವೃತ್ತಿಯ ಚಾಂಪಿಯನ್‌ ತಂಡವನ್ನು ನಿರ್ಧರಿಸಲಿದೆ.

ಶುಕ್ರವಾರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಹಾಗೂ ತಮಿಳ್‌ ತಲೈವಾಸ್‌ ಮುಖಾಮುಖಿಯಾಗಲಿವೆ. ದಿನದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಪುಣೇರಿ ಪಲ್ಟನ್‌ ಸವಾಲನ್ನು ಎದುರಿಸಲಿದೆ.

ವಿಶಾಖಪಟ್ಟಣಂನಲ್ಲಿ ಆ.29ರಿಂದ ಸೆ.11ರ ವರೆಗೂ ಆರಂಭಿಕ ಚರಣ ನಡೆಯಲಿದೆ. ಬಳಿಕ ಲೀಗ್‌ ಜೈಪುರಕ್ಕೆ ಕಾಲಿಡಲಿದ್ದು, ಅಲ್ಲಿ ಸೆ.12ರಿಂದ ಸೆ.28ರ ವರೆಗೂ ಪಂದ್ಯಗಳು ನಡೆಯಲಿವೆ. ಸೆ.29ರಿಂದ ಅ.10ರ ವರೆಗಿನ ಪಂದ್ಯಗಳಿಗೆ ಚೆನ್ನೈ ಆತಿಥ್ಯ ನೀಡಲಿದ್ದು, ಅ.11ರಿಂದ 23ರ ವರೆಗೂ ನವದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ಲೇ-ಆಫ್‌, ಫೈನಲ್‌ಗೆ ಆತಿಥ್ಯ ವಹಿಸುವ ನಗರಗಳ ವಿವರ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಪ್ರತಿ ದಿನ 2 ಪಂದ್ಯಗಳು ಇರಲಿದ್ದು, ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ ರಾತ್ರಿ 9ಕ್ಕೆ ಆರಂಭಗೊಳ್ಳಲಿದೆ. ಅ.15ರಿಂದ ಲೀಗ್‌ ಹಂತ ಮುಗಿಯುವ ವರೆಗೂ ಪ್ರತಿ ದಿನ 3 ಪಂದ್ಯಗಳು ಇರಲಿವೆ.

ಬೆಂಗಳೂರಿಗೆ ಮೊದಲ

ಪಂದ್ಯದಲ್ಲೇ ಕಠಿಣ ಸವಾಲು

ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಈ ಬಾರಿ ಸಂಪೂರ್ಣ ಹೊಸ ಆಟಗಾರರೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ತಾರಾ ಕೋಚ್‌, ಕನ್ನಡಿಗ ಬಿ.ಸಿ.ರಮೇಶ್‌, ಕಳೆದ 2 ತಿಂಗಳಿಂದ ತಂಡವನ್ನು ವಿಶೇಷ ಶಿಬಿರದ ಮೂಲಕ ಸಿದ್ಧಗೊಳಿಸಿದ್ದಾರೆ. ಅವರು ಈ ಹಿಂದಿನ ಆವೃತ್ತಿಗಳಲ್ಲಿ ಕೋಚ್‌ ಆಗಿದ್ದ ಪುಣೇರಿ ಪಲ್ಟನ್‌ ವಿರುದ್ಧ ಬುಲ್ಸ್‌ ಶುಕ್ರವಾರ ತನ್ನ ಮೊದಲ ಪಂದ್ಯವನ್ನಾಡಲಿದೆ. ಬುಲ್ಸ್‌ ತಂಡವನ್ನು ಈ ವರ್ಷ ಅಂಕುಶ್‌ ಠಾಠಿ ಮುನ್ನಡೆಲಿದ್ದಾರೆ.

ಇಂದಿನ ಪಂದ್ಯಗಳು:

ತಲೈವಾಸ್‌ vs ಟೈಟಾನ್ಸ್‌, ರಾತ್ರಿ 8ಕ್ಕೆ, ಬುಲ್ಸ್‌ vs ಪುಣೇರಿ, ರಾತ್ರಿ 9ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ