ವನ್ಯಜೀವಿ ದಾಳಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ : ಕಳೆದ ವರ್ಷ 50,237, ಈ ಬಾರಿ 35,580 ಕೇಸ್‌

Published : Apr 19, 2025, 10:25 AM IST
tiger

ಸಾರಾಂಶ

ರಾಜ್ಯದಲ್ಲಿ ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುವ ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2023-24ಕ್ಕೆ ಹೋಲಿಸಿದರೆ 2024-25ರಲ್ಲಿ 15 ಸಾವಿರ ಪ್ರಕರಣಗಳು ಕಡಿಮೆಯಾಗಿವೆ.

 ಬೆಂಗಳೂರು : ರಾಜ್ಯದಲ್ಲಿ ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುವ ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2023-24ಕ್ಕೆ ಹೋಲಿಸಿದರೆ 2024-25ರಲ್ಲಿ 15 ಸಾವಿರ ಪ್ರಕರಣಗಳು ಕಡಿಮೆಯಾಗಿವೆ.

ಆಹಾರ ಅರಸಿ ನಾಡಿಗೆ ಬರುವ ವನ್ಯಜೀವಿಗಳು ಬೆಳೆಗಳನ್ನು ಹಾಳು ಮಾಡುವ ಜತೆಗೆ, ಕೆಲವೊಮ್ಮೆ ಜೀವ ಹಾನಿಗೂ ಕಾರಣವಾಗುತ್ತವೆ. 2023-24ರವರೆಗೆ ವರ್ಷದಿಂದ ವರ್ಷಕ್ಕೆ ವನ್ಯಜೀವಿ ದಾಳಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲಿತ್ತು. ಅದೇ 2024-25ನೇ ಸಾಲಿನಲ್ಲಿ ವನ್ಯಜೀವಿ ದಾಳಿ ಪ್ರಕರಣ ಗಣನೀಯವಾಗಿ ಇಳಿಕೆಯಾಗಿದೆ. ಅದರಂತೆ 2022-23ರಲ್ಲಿ 47,287 ವನ್ಯಜೀವಿ ದಾಳಿ ಪ್ರಕರಣ ದಾಖಲಾಗಿದ್ದರೆ, 2023-24ರಲ್ಲಿ 50,237 ಪ್ರಕರಣ ಪತ್ತೆಯಾಗಿದೆ.

ಅದೇ 2024-25ರಲ್ಲಿ 35,580ಕ್ಕಿಳಿದಿದೆ. ಈ ಪ್ರಕರಣಗಳ ಪೈಕಿ ಕಾಡಾನೆ ದಾಳಿಯಿಂದ ಬೆಳೆ ನಾಶವಾದ ಪ್ರಕರಣಗಳೇ ಹೆಚ್ಚಿವೆ. ಹೀಗೆ 2024-25ರಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ 20,417 ಪ್ರಕರಣಗಳಿಗೆ ಪರಿಹಾರ ನೀಡಲು ಅನುಮೋದಿಸಿ, ಪರಿಹಾರವನ್ನೂ ನೀಡಲಾಗಿದೆ. ಉಳಿದಂತೆ 14,245 ಪ್ರಕರಣಗಳು ಪರಿಶೀಲನಾ ಹಂತದಲ್ಲಿದ್ದು, 918 ಪ್ರಕರಣಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಲಾಗಿದೆ.

3 ವರ್ಷದಲ್ಲಿ ₹107 ಕೋಟಿ:

ವನ್ಯಜೀವಿಗಳ ದಾಳಿಯಿಂದ ಉಂಟಾಗುವ ಹಾನಿಗೆ ಬದಲಾಗಿ ಅರಣ್ಯ ಇಲಾಖೆ ಸಹಾಯಧನ ರೂಪದಲ್ಲಿ ಹಣ ನೀಡಲಿದೆ. ಅರಣ್ಯ ಇಲಾಖೆ ಮಾಹಿತಿಯಂತೆ 2022-23ರಿಂದ 2024-25ರವರೆಗೆ ಸುಮಾರು ₹107 ಕೋಟಿ ಪರಿಹಾರ ನೀಡಲಾಗಿದೆ. 2022-23ರಲ್ಲಿ ₹35.55 ಕೋಟಿ, 2023-24ರಲ್ಲಿ ₹50.14 ಕೋಟಿ ಹಾಗೂ 2024-25ರಲ್ಲಿ ₹21.61 ಕೋಟಿ ಪರಿಹಾರ ನೀಡಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ