ಕನ್ನಡಪ್ರಭ ವಾರ್ತೆ ಬಾದಾಮಿ
ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಬುಧವಾರ 2026-27ನೇ ಸಾಲಿನ ದಾಖಲಾತಿ ಆಂದೋಲನ ಪೂರ್ವಭಾವಿ ಸಭೆಯಲ್ಲಿ ಪ್ರಚಾರ ಸಾಮಗ್ರಿ ಹಾಗೂ ಕೆಜಿಬಿವಿ ಸಮೀಕ್ಷಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಶಾಲೆಯಿಂದ ಹೊರಗುಳಿದ 11 ರಿಂದ 14 ವಯೋಮಾನದ 6 ರಿಂದ 8ನೇ ತರಗತಿಯ ಬಾಲಕಿಯರಿಗಾಗಿ ಉಚಿತ ಸೌಲಭ್ಯದೊಂದಿಗೆ ಸ್ಥಾಪಿತವಾದ ಏಕೈಕ ವಸತಿ ಶಾಲೆ ಇದಾಗಿದೆ. ಶಾಲೆಬಿಟ್ಟ, ಶಾಲೆಗೆ ದಾಖಲಾಗದ ಬಾಲಕಿಯರು, ಎಸ್.ಸಿ, ಎಸ್.ಟಿ. ಅಲ್ಪಸಂಖ್ಯಾತರ ಮಕ್ಕಳು, ಅನಾಥ ಮಕ್ಕಳು, ಯಾವುದೇ ಸಮಸ್ಯೆಯಿಂದ ಶಾಲೆಗೆ ಹೋಗದ ಮಕ್ಕಳನ್ನು ದಾಖಲಿಸಲು ಅನುಷ್ಠಾಧಿಕಾರಿಗಳು ತಮ್ಮ ಕ್ಷೇತ್ರಮಟ್ಟದಲ್ಲಿ ವ್ಯಾಪಕ ಮಾಹಿತಿ ನೀಡಬೇಕು. ಅರ್ಹ ಹೆಣ್ಣುಮಕ್ಕಳು ಮೇ 26 ರಿಂದ ಜೂನ್ 1ರೊಳಗೆ ಆನ್ ಲೈನ್ ಮೂಲಕ ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ಮುಖ್ಯಶಿಕ್ಷಕಿ ಬಸಮ್ಮಾ ನರಸಾಪೂರ ಮೊ;9449142409 ಸಂಪರ್ಕಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಮಾತನಾಡಿ, ಕೆಜಿಬಿವಿ ಶಾಲೆಯಲ್ಲಿ ಸರಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಬಸಮ್ಮಾ ನರಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕರಾದ ಎಂ.ಸಿ. ನಾಲತವಾಡ, ವೈ.ಬಿ.ಚಲವಾದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಾವೇದ ಶೇಖ, ಎಸ್.ಎಸ್. ಯಲಿಗಾರ ಸೇರಿದಂತೆ ತಾಲೂಕಿನ ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.