ಹುಬ್ಬಳ್ಳಿ:
ಇಲ್ಲಿನ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಸೋಮವಾರ ಭಗವದ್ಗೀತೆಯ 9ನೇ ಅಧ್ಯಾಯದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಹುಬ್ಬಳ್ಳಿಯಿಂದಲೇ ಆರಂಭವಾಗಿರುವ ಭಗವದ್ಗೀತಾ ಅಭಿಯಾನ, ರಾಜ್ಯಾದ್ಯಂತ ವಿಸ್ತರಿಸಿದೆ. ಕಾರ್ತಿಕ ಮಾಸದಲ್ಲಿ ಪಠಿಸುವ ಮಂತ್ರ, ಮಾಡುವ ಜಪ ಹಾಗೂ ಸಮರ್ಪಿಸುವ ಪೂಜೆ- ಪುನಸ್ಕಾರಗಳು ದ್ವಿಗುಣ ಫಲ ನೀಡುತ್ತವೆ. ಹೀಗಾಗಿ ಸದ್ಯ ವಿಜಯಪುರ ಜಿಲ್ಲೆಯನ್ನು ಕೇಂದ್ರೀಕರಿಸಿಕೊಡು ಗೀತಾಭಿಯಾನ ಆಯೋಜಿಸಲಾಗುತ್ತಿದೆ ಎಂದರು.ಗೀತೆಯಿಂದ ಮಾನಸಿಕ ಧೈರ್ಯ:
ದಿನ ಕಳೆದಂತೆ ಅಧೈರ್ಯ, ಚಿಂತೆ ಎಂಬ ಕಸ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ. ಅದನ್ನು ನಿತ್ಯವೂ ಜಪ, ತಪ, ಪೂಜೆ-ಪುನಸ್ಕಾರಗಳಿಂದ ಹೊರ ಹಾಕಬೇಕು. ಮನದ ಕಸವನ್ನು ಹೊರ ಹಾಕುವುದರಿಂದ ಆಯುಸ್ಸು ಹೆಚ್ಚಾಗಿ, ಸಾಧನೆಗೆ ಪ್ರೇರಣೆಯಾಗುತ್ತದೆ. ಭಗವದ್ಗೀತೆಯನ್ನು ಪಠಿಸುವುದಿರಲಿ, ಅದನ್ನು ಕೇಳದ ದೊಡ್ಡ ಸಮುದಾಯವೇ ಇದೆ. ಆ ಸಮುದಾಯಕ್ಕೆ ಭಗವದ್ಗೀತೆಯ ಉಪಾಸನೆ ಮಾಡುವುದನ್ನು ಹಚ್ಚುವುದೇ ಭಗವದ್ಗೀತಾ ಅಭಿಯಾನದ ಮುಖ್ಯ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಸುದರ್ಶನ ಹೇಮಾದ್ರಿ, ಶ್ರೀಕಾಂತ ಹೆಗಡೆ, ವಿ.ಎಂ. ಭಟ್ಟ, ಎ.ಸಿ. ಗೋಪಾಲ, ಶಾಂತಾರಾಮ ಭಟ್ಟ, ಗೋಪಾಲಕೃಷ್ಣ ಹೆಗಡೆ, ವೀಣಾ ಹೆಗಡೆ, ಅರುಣಕುಮಾರ ಹಬ್ಬು, ಜಿ.ಆರ್. ಭಟ್ಟ ಹಾಗೂ ಮನೋಹರ ಪರ್ವತಿ ಸೇರಿದಂತೆ ಹಲವರಿದ್ದರು.