ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಗವದ್ಗೀತೆ ಅಭಿಯಾನ ನಡೆಯುತ್ತಿರುವುದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿ. ಇದು ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ನಡೆಯಬೇಕಿದೆ ಎಂದರು.
ಸಮಾಜದಲ್ಲಿ ತಪ್ಪುಗಳು ಹೆಚ್ಚುತ್ತಾ ಹೋದಾಗ ಭಗವಂತ ಸಾಧು ಸಂತರ ರೂಪದಲ್ಲಿ ಮಾರ್ಗದರ್ಶನ ಮಾಡುತ್ತಾ ಹೋಗುತ್ತಾರೆ. ಈಗಲೂ ಗೀತೆಯಲ್ಲಿ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಇದೆ. ಮಾನವ ಜೀವನ ಕಲ್ಯಾಣಕ್ಕೆ ಇದರ ಅಗತ್ಯವೂ ಇದೆ. ಇದರಿಂದ ಏನಾದರೊಂದು ಮಾರ್ಗದರ್ಶನ ಸಿಗುತ್ತದೆ. ಸಮಾಜದಲ್ಲಿ ಧರ್ಮ ಹಿಂದೆ ಸರಿದಾಗ ಭಗವಂತನ ದರ್ಶನ ಆಗುತ್ತದೆ. ಅದು ಶಂಕರಾಚಾರ್ಯ, ಬಸವೇಶ್ವರ, ಸಾಧು ಸಂತರ ರೂಪದಲ್ಲಿ ಆಗಬಹುದು ಎಂದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ವರ್ಣವಲ್ಲಿಪ್ರಭಾ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಒಂದು ರೀತಿಯ ಅಜಾಗರೂಕತೆ ವಾತಾವರಣ ಕಾಣುತ್ತಿದ್ದೇವೆ. ಹಲವಾರು ಕಡೆಗಳಲ್ಲಿ ಹಿಂಸೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಪ್ರತಿ ಶಾಲೆಯಲ್ಲಿಯೂ ಭಗವದ್ಗೀತೆ ಅಧ್ಯಯನ ನಡೆಯಬೇಕು ಎಂದರು. ಹಿಂದೆ ಶಾಲಾ ಪಠ್ಯಗಳಲ್ಲಿ ರಾಮಾಯಣ, ಮಹಾಭಾರತದ ಪಠ್ಯಗಳು ಇರುತ್ತಿದ್ದವು. ಈಗ ಅದೆಲ್ಲಾ ಮರೆತೇಹೋದ ಸ್ಥಿತಿ ಇದೆ. ಸಮಾಜ ಆಧುನಿಕತೆ ವೇಗದಲ್ಲಿ ಸಾಗುತ್ತಿದೆ. ಅದಕ್ಕೆ ನಿಯಂತ್ರಣ ಬೇಕಾಗಿದೆ ಎಂದರು.
ಸಮಾಜದಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿದೆ, ಶಿಕ್ಷಣ ಪಡೆದವರೇ, ಡಾಕ್ಟರ್ ಆದವರೂ ಇದರಲ್ಲಿ ಸಿಲುಕಿದ್ದಾರೆ. ಯಾವುದೋ ಸಂಸ್ಕಾರದ ಕೊರತೆ ಇದಕ್ಕೆ ಕಾರಣ. ಗೀತಾ ಪಠಣ ಈ ಸಮಸ್ಯೆಗೆ ಪರಿಹಾರ ಎಂದರು.
-----
------
-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ.
ಆರೋಗ್ಯಯುತ ಸಮಾಜ ನಿರ್ಮಾಣವೇ ಗೀತೆಯ ಗುರಿ. ಈ ಭೌತಿಕ ದೇಹದಲ್ಲಿ ಆತ್ಮ ರೂಪದಲ್ಲಿ ಪರಮಾತ್ಮ ಇದ್ದಾನೆ. ಹುಟ್ಟು ಸಾವಿನ ನಡುವೆ ಆತ್ಮ ಭಗವಂತನ ಕಡೆ ಸಾಗಲು ಧರ್ಮ ಮಾರ್ಗದಲ್ಲಿ ನಡೆಯಬೇಕು. ಅದಕ್ಕೆ ಸಾಧನವೇ ಭಗವದ್ಗೀತೆ.
-----
ಈ ದೇಹ ನಶ್ವರ ಆಗಿದ್ದರೂ ಶಾಶ್ವತವಾಗಿ ಉಳಿಯುವ ಭ್ರಮೆಯಲ್ಲಿ ಅನಾಹುತ, ಅಪಸವ್ಯಗಳನ್ನು ಮಾಡುತ್ತಿದ್ದೇವೆ. ಭ್ರಮೆಯ ಕೋಟೆ ಕಟ್ಟಿಕೊಂಡಿದ್ದೇವೆ. ಹಿಂದೆ ಕೌರವ-ಪಾಂಡವರ ನಡುವೆ ಯುದ್ಧ ನಡೆಯುತ್ತಿತ್ತು. ಆದರೆ ಈಗ ಮನುಷ್ಯನ ಒಳಗೇ ಯುದ್ಧ ನಡೆಯುತ್ತಿದೆ. ಯುದ್ಧವನ್ನು ನಮ್ಮ ಮೇಲೆ ನಾವೇ ಮಾಡಿಕೊಂಡು ಜಯ ಸಾಧಿಸಲು ಭಗವದ್ಗೀತೆ ದಾರಿದೀಪವಾಗಿದೆ.-ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ
------ಬಹುತ್ವ ಸಂಸ್ಕೃತಿಯನ್ನು ಒಪ್ಪಿಕೊಂಡಿರುವ ವಿಶ್ವದ ಏಕಮಾತ್ರ ದೇಶ ನಮ್ಮದು. ಶ್ರೀಕೃಷ್ಣ ಸತ್ಯ ಒಂದೇ, ಮಾರ್ಗ ಹಲವು ಎಂದು ಹೇಳಿದ್ದಾರೆ. ಆದರೆ ವಿದೇಶಿಯರು ಸತ್ಯ ಒಂದೇ, ಮಾರ್ಗವೂ ಒಂದೇ, ನಾನೇ ಸತ್ಯ ಎಂದು ಹೇಳುತ್ತಾರೆ. ಯಾರು ಯಾವ ಉಪಾಸನಾ ಮಾರ್ಗದಲ್ಲಿ ಶ್ರದ್ಧೆ ಹೊಂದಿರುತ್ತಾರೋ, ಅದೇ ಮಾರ್ಗದಲ್ಲಿ ಅನುಗ್ರಹ ಮಾಡುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದಾರೆ. ಸಮನ್ವಯ ಸೂತ್ರಕಾರನೇ ಶ್ರೀಕೃಷ್ಣ.
-ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ.