ಭಾರತ ಸೇವಾದಳದ ಶತಮಾನೋತ್ಸವ: ಮಕ್ಕಳ ರಾಷ್ಟ್ರೀಯ ಭಾವೈಕ್ಯತೆ ಮೇಳ

KannadaprabhaNewsNetwork |  
Published : Dec 29, 2023, 01:30 AM ISTUpdated : Dec 29, 2023, 01:31 AM IST
28ಎಮ್‌ಡಿಎಲ್‌ಜಿ4 | Kannada Prabha

ಸಾರಾಂಶ

ಭಾರತ ಸೇವಾದಳದ ಶತಮಾನೋತ್ಸವದ ಸವಿ ನೆನಪಿಗಾಗಿ ಮಕ್ಕಳ ರಾಷ್ಟ್ರೀಯ ಭಾವೈಕ್ಯತ ಮೇಳ ಕಾರ್ಯಕ್ರಮ ಮೂಡಲಗಿ ತಾಲೂಕು ಸೇವಾದಳ ಸಮಿತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರಭಾತಪೇರಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡಲಗಿ

ಭಾರತ ಸೇವಾದಳದ ಶತಮಾನೋತ್ಸವದ ಸವಿ ನೆನಪಿಗಾಗಿ ಮಕ್ಕಳ ರಾಷ್ಟ್ರೀಯ ಭಾವೈಕ್ಯತ ಮೇಳ ಕಾರ್ಯಕ್ರಮ ಮೂಡಲಗಿ ತಾಲೂಕು ಸೇವಾದಳ ಸಮೀತಿಯಿಂದ ಗುರುವಾರ ಮೂಡಲಗಿಯಲ್ಲಿ ಜರುಗಿತು.

ಶತಮಾನೋತ್ಸವ ಅಂಗವಾಗಿ ಭಾರತದ ಸೇವಾದಳದ ಶಿಬಿರಾರ್ಥಿಗಳಿಂದ ಪಟ್ಟಣದಲ್ಲಿ ಪ್ರಭಾತಪೇರಿ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಿಂದ ಆರಂಭವಾಗಿ ಕಲ್ಮೇಶ್ವರ ವೃತ್ತದವರಿಗೆ ಮರಳಿ ಮೂಡಲಗಿ ಶಿಕ್ಷಣ ಸಂಸ್ಥೆವರಿಗೆ ಜರುಗಿತು.

ಎಸ್.ಎಸ್.ಆರ್ ಪ್ರೌಢ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಸೇವಾದಳದಲ್ಲಿ ಮಕ್ಕಳು ಭಾಗವಹಿಸವದರಿಂದ ಮಕ್ಕಳಲ್ಲಿ ಸೇವಾ ಮನೋಭಾವನೆ ಮತ್ತು ಶಿಸ್ತು, ನಾಯಕತ್ವದ ಗುಣಗಳು ಬೆಳೆಯುತ್ತದೆ ಎಂದರು.

ಎಸ್.ಎಸ್.ಆರ್ ಪ್ರೌಢಶಾಲೆಯ ಉಪಪ್ರಾಚಾರ್ಯ ಬಿ.ಕೆ.ಕಾಡಪ್ಪಗೋಳ ಮಾತನಾಡಿ, 1923 ಡಿಸೆಂಬರ್ 28ರಂದು ಡಾ.ಎನ್.ಎಸ್ ಅರ್ಡೇಕರ್ ಅವರು ಆರಂಭ್ದಿ ಸೇವಾದಳ ಇಂದು ದೇಶಾದ್ಯಂತ ಶಾಲಾ-ಕಾಲೇಜು ಘಟಕಗಳು ಪ್ರಾರಂಭವಾಗಿ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆ ಕಾಣಲು ಸಹಾಯವಾಗಿದೆ ಎಂದ ಅವರು ಸೇವಾದಳ ಕಾರ್ಯ ವೈಖರಿಯನ್ನು ವಿವರಿಸಿದರು

ಜಿಲ್ಲಾ ಸೇವಾದಳದ ಸಂಘಟಕಿ ಅಶ್ವಿನಿ ಆಯಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಜುನೇದಿ ಪಟೇಲ್, ಮೂಡಲಗಿ ತಾಲೂಕ ಭಾರತ ಸೇವಾದಳದ ಸಂಘಟಕ ವಿಲಾಸ್ ಹೊನಕುಪ್ಪಿ, ಶಿಕ್ಷಕರಾದ ಚಂದ್ರು ಮೊಟೆಪ್ಪಗೋಳ, ರಾಮಲಿಂಗ ಕಳಸನ್ನವರ್, ಉಪಸ್ಥಿತರಿದ್ದರು.

ಶಿಕ್ಷಕರಾದ ಕೆ.ಎಚ್.ಪಾಟೀಲ ಸ್ವಾಗತಿಸಿ ನಿರೂಪಿಸಿದರು, ಎಂ ಎಸ್ ಮುತ್ತಣ್ಣವರ ವಂದಿಸಿದರು. ಮಕ್ಕಳಿಂದ ಸೇವಾದಳ ಪ್ರದರ್ಶಣ ವ್ಯಾವ್ಯಾಮ ಮತ್ತು ಸಾಭಿನಯ ಗೀತೆಗಳು ಮುಡಿಬಂದವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!