ಭೀಮ ಹೆಜ್ಜೆ-100ರ ಸಂಭ್ರಮ ರಥಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Apr 14, 2025, 02:00 AM IST
ಹುಬ್ಬಳ್ಳಿಯ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಭೀಮ ಹೆಜ್ಜೆ 100 ರ ಸಂಭ್ರಮ ರಥಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿ ವರೆಗೆ ಏ. 11ರಿಂದ 14ರ ವರೆಗೆ ಹಮ್ಮಿಕೊಂಡಿರುವ "ಭೀಮ ಹೆಜ್ಜೆ- 100ರ ಸಂಭ್ರಮ " ರಥಯಾತ್ರೆ ಮತ್ತು ಬೈಕ್ ರ್ಯಾ ಲಿಗೆ ಭಾನುವಾರ ನಗರದ ಡಾ. ಅಂಬೇಡ್ಕರ್ ಮೂರ್ತಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿ ವರೆಗೆ ಏ. 11ರಿಂದ 14ರ ವರೆಗೆ ಹಮ್ಮಿಕೊಂಡಿರುವ "ಭೀಮ ಹೆಜ್ಜೆ- 100ರ ಸಂಭ್ರಮ " ರಥಯಾತ್ರೆ ಮತ್ತು ಬೈಕ್ ರ‍್ಯಾಲಿಗೆ ಭಾನುವಾರ ನಗರದ ಡಾ. ಅಂಬೇಡ್ಕರ್ ಮೂರ್ತಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.

ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಡಾ. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ರಥಯಾತ್ರೆಗೆ ಚಾಲನೆ ನೀಡಿದ ಸಚಿವರು ರಥಯಾತ್ರೆಯ ವಾಹನ ಏರಿ ಸ್ವಲ್ಪ ದೂರ ಸಾಗಿ ಕೆಳಗಿಳಿದರು. ರಥಯಾತ್ರೆ ಮುಂದೆ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಚೆನ್ನಮ್ಮ ವೃತ್ತದ ವರೆಗೂ ಸಾಗಿದರು.

ರಥಯಾತ್ರೆಯಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಮುಖಂಡರಾದ ಲಿಂಗರಾಜ್ ಪಾಟೀಲ್, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹೇಂದ್ರ ಕೌತಾಳ, ದೀಪಕ್ ದೊಡ್ಡಯ್ಯ, ಡಾ. ಕ್ರಾಂತಿಕಿರಣ, ಬಸವರಾಜ ಅಮ್ಮಿನಭಾವಿ, ಲಕ್ಷ್ಮಣ್ ಬೀಳಗಿ, ಪ್ರಕಾಶ್ ಕ್ಯಾರಕಟ್ಟಿ, ಪರಶುರಾಮ್ ಪೂಜಾರ, ರಾಜು ಕಾಳೆ, ಮಂಜುನಾಥ ಕಾಟ್ಕರ, ನಾರಾಯಣ ಜರತಾರಘರ, ಅಶೋಕ್ ವಾಲ್ಮೀಕಿ, ಸಿದ್ದು ಮೊಗಲಿಶೆಟ್ಟರ್, ಶಿವು ಮೆಣಸಿನಕಾಯಿ, ಅನುಪ ಬಿಜವಾಡ, ಪ್ರಭು ನವಲಗುಂದಮಠ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ