ಇಮ್ಮಡಿ ಶ್ರೀಗಳ ಸಹಾಯದಿಂದ ಭೋವಿ ಸಮಾಜ ಮುನ್ನೆಲೆಗೆ

KannadaprabhaNewsNetwork |  
Published : Sep 09, 2026, 03:00 AM IST
(ಫೋಟೊಬಿಕೆಟಿ1, ನವನಗರದಲ್ಲಿರುವ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭೇಟಿ ನೀಡಿದ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಎಂ.ರಾಮಪ್ಪ ಭೋವಿ ವಡ್ಡರ ಸಮಾಜದ ವತಿಯಿಂದ ಗೌರವಿಸಲಾಯಿತು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಭೋವಿ (ವಡ್ಡರ) ಸಮುದಾಯವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಭೋವಿ ಅಭಿವೃದ್ಧಿ ನಿಗಮವು ಸಂಪೂರ್ಣ ಸಹಕಾರ ನೀಡುತ್ತಿದ್ದರೆ, ಮತ್ತೊಂದೆಡೆ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಮಾಜವನ್ನು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಶಕ್ತಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ರಾಮಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭೋವಿ (ವಡ್ಡರ) ಸಮುದಾಯವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಭೋವಿ ಅಭಿವೃದ್ಧಿ ನಿಗಮವು ಸಂಪೂರ್ಣ ಸಹಕಾರ ನೀಡುತ್ತಿದ್ದರೆ, ಮತ್ತೊಂದೆಡೆ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಮಾಜವನ್ನು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಶಕ್ತಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ರಾಮಪ್ಪ ಹೇಳಿದರು.

ನವನಗರದಲ್ಲಿರುವ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭೇಟಿ ನೀಡಿದ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ರಾಮಪ್ಪ ಭೋವಿ ವಡ್ಡರ ಸಮಾಜವನ್ನು ಉದ್ದೇಶಿಸಿ ಮಾತನಾಡಿದರು.

ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಸಹ ಸಮಾಜದ ಮುಖ್ಯವಾಹಿನಿಗೆ ತರಲು ಭೋವಿ ಗುರುಪೀಠದ ಶ್ರೀಗಳು ಹಗಲಿರಳು ಶ್ರಮಿಸುತ್ತಿದ್ದಾರೆ. ಧಾರ್ಮಿಕತೆಯ ಭದ್ರಬುನಾದಿಯ ಮೇಲೆ ನಮ್ಮ ಸಮಾಜ ಸದೃಢ ಹಾಗೂ ಸಂಘಟಿತ ಶಕ್ತಿಯಾಗಿ ಬೆಳೆಸಿದ ಶ್ರೀಗಳ ಮಾರ್ಗದರ್ಶನ ಮತ್ತು ಸೇವೆಯ ಕುರಿತು ಇಡೀ ಸಮುದಾಯ ಸದಾ ಋಣಿಯಾಗಿದೆ ಎಂದು ಶ್ರೀಗಳ ಕೊಡುಗೆಯನ್ನು ಸ್ಮರಿಸಿದರು.

ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಉತ್ತಮ ನಾಯಕತ್ವದಿಂದ ಮಾತ್ರ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ನಾಯಕ ಯಾವ ರೀತಿ ಇರುತ್ತಾನೋ ಸಮಾಜವೂ ಅದೇ ರೀತಿ ರೂಪುಗೊಳ್ಳುತ್ತದೆ. ಉತ್ತಮ ನಾಯಕತ್ವದಿಂದ ಮಾತ್ರ ಅತ್ಯುತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ನಾಯಕನಲ್ಲಿ ಸ್ಪಷ್ಟ ಗುರಿ, ವಿವೇಕ ಹಾಗೂ ವಿವೇಚನೆ ಸರಿಯಾಗಿದ್ದಾಗ ಮಾತ್ರ ಇಡೀ ಸಮಾಜ ಘನತೆ ಮತ್ತು ಗೌರವದತ್ತ ಸಾಗಲು ಸಾಧ್ಯ. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ರಾಮಪ್ಪ ಅವರಲ್ಲಿ ಇಂತಹ ಎಲ್ಲಾ ಸದ್ಗುಣಗಳು ಹಾಗೂ ನಾಯಕತ್ವದ ಲಕ್ಷಣಗಳು ಎದ್ದು ಕಾಣುತ್ತಿದ್ದು, ಅವರು ಸಮಾಜದ ಹಿತಕ್ಕಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ನಿಗಮದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಮತ್ತು ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಡಾ.ಎಂ. ರಾಮಪ್ಪ ಅವರು ಶ್ರಮಿಸುತ್ತಿದ್ದಾರೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆ ಜತೆಗೆ ಸರ್ಕಾರದ ಯೋಜನೆಗಳ ಸರಿಯಾದ ಬಳಕೆ ಸಮಾಜದ ಆರ್ಥಿಕ ಪ್ರಗತಿಗೆ ಪೂರಕವಾಗಲಿದೆ ಎಂದರು.

ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀ, ಜೇವರ್ಗಿ ಸಿದ್ದಬಸವ ಕಬೀರ ಶ್ರೀ, ಹೆಳವ ಗುರುಪೀಠದ ಬಸವಬೃಂಗೇಶ್ವರ ಶ್ರೀ, ಇರಕಲ್ ಬಸವಪ್ರಸಾದ ಶ್ರೀ, ಕೊರಟಗೆರೆ ಮಹಾಲಿಂಗ ಶ್ರೀ, ಶಿರ್ಸಿ ಮಲ್ಲಿಕಾರ್ಜುನ ಶ್ರೀ, ತುರುವೆಕೆರೆ ತಿಪ್ಪೇರುದ್ರ ಶ್ರೀ ಸಮ್ಮುಖ ವಹಿಸಿದ್ದರು.ಭೋವಿ ವಡ್ಡರ ಸಮಾಜದ ಹಿರಿಯರಾದ ಅಶೋಕ ಲಿಂಬಾವಳಿ, ರವಿಪೂಜಾರ, ಬೀಳಗಿ ಚಿನ್ನಪ್ಪ ವಡ್ಡರ, ರಾಮಣ್ಣ ಪಾತ್ರೋಟಿ, ಬ್ರಹ್ಮಋಷಿ ಪಾತ್ರೋಟಿ, ಬದಾಮಿ ಮಂಜುನಾಥ ಕಟ್ಟಿಮನಿ, ಮಹೇಶ ವಡ್ಡರ, ಬಸವರಾಜ ವಡ್ಡರ, ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಗೆ ಐಟಿ ಕಂಪನಿ ತರಲು ಪ್ರಯತ್ನ
ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ