ಭೃಗು ಮುನಿ ಗರ್ವಭಂಗ ನಾಟಕ ಪ್ರದರ್ಶನ

KannadaprabhaNewsNetwork |  
Published : Nov 21, 2024, 01:03 AM IST
20ಎಚ್ಎಸ್ಎನ್5 : ಸುರಾಗ ಟ್ರಸ್ಟ್ ಅಧ್ಯಕ್ಷ ಮಂಜು ಮಟ್ಟನವಿಲೆ ಹಾಗೂ ರಂಗಭೂಮಿ ಕಲಾವಿದರಾದ ಪಂಡಿತ್‌ ಕೃಷ್ಣಮೂರ್ತಿ. | Kannada Prabha

ಸಾರಾಂಶ

ಸುರಾಗ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಯಜ್ಞ ಅಥವಾ ಬೃಗು ಮುನಿ ಗರ್ವಭಂಗ ಎಂಬ ಸುಂದರ ಪೌರಾಣಿಕ ನಾಟಕವನ್ನು ನ.೨೩ರಂದು ಬೆಳಗ್ಗೆ ೧೧.೩೦ಗಂಟೆಗೆ ನಡೆಯಲಿದೆ ಎಂದು ಸುರಾಗ ಟ್ರಸ್ಟ್ ಅಧ್ಯಕ್ಷ ಮಂಜು ಮಟ್ಟನವಿಲೆ ಹಾಗೂ ರಂಗಭೂಮಿ ಕಲಾವಿದರಾದ ಪಂಡಿತ್‌ ಕೃಷ್ಣಮೂರ್ತಿ ತಿಳಿಸಿದರು. ದಕ್ಷಯಜ್ಞ ನಾಟಕವನ್ನು ನಮ್ಮ ಟ್ರಸ್ಟ್‌ ವತಿಯಿಂದ ಮಾತ್ರ ಪ್ರದರ್ಶಿಸುತ್ತಿದ್ದು, ಈ ನಾಟಕವನ್ನು ಎರಡನೇ ಬಾರಿಗೆ ನಡೆಸುತ್ತಿದ್ದು ಅಧ್ಯಕ್ಷತೆಯನ್ನು ಶಾಸಕ ಸಿ. ಎನ್‌. ಬಾಲಕೃಷ್ಣ ವಹಿಸುವರು. ಉದ್ಘಾಟನೆಯನ್ನು ರಂಗಭೂಮಿ ಕಲಾವಿದ ಎಂ. ಬಿ. ಗಂಗರಾಜ್ ಪಟೇಲ್ ವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸುರಾಗ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಯಜ್ಞ ಅಥವಾ ಬೃಗು ಮುನಿ ಗರ್ವಭಂಗ ಎಂಬ ಸುಂದರ ಪೌರಾಣಿಕ ನಾಟಕವನ್ನು ನ.೨೩ರಂದು ಬೆಳಗ್ಗೆ ೧೧.೩೦ಗಂಟೆಗೆ ನಡೆಯಲಿದೆ ಎಂದು ಸುರಾಗ ಟ್ರಸ್ಟ್ ಅಧ್ಯಕ್ಷ ಮಂಜು ಮಟ್ಟನವಿಲೆ ಹಾಗೂ ರಂಗಭೂಮಿ ಕಲಾವಿದರಾದ ಪಂಡಿತ್‌ ಕೃಷ್ಣಮೂರ್ತಿ ತಿಳಿಸಿದರು.

ಅವರು ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಪಟ್ಟಣದ ಕರ್ನಾಟಕ ಬ್ಯಾಂಕ್ ಎದುರು ಸುರಾಗ ಸಂಭ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಟಕದಲ್ಲಿ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಲ್ಲಿ ಹಗಲು ನಾಟಕಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ತಾಲೂಕಿನಲ್ಲೆ ದಕ್ಷಯಜ್ಞ ನಾಟಕವನ್ನು ನಮ್ಮ ಟ್ರಸ್ಟ್‌ ವತಿಯಿಂದ ಮಾತ್ರ ಪ್ರದರ್ಶಿಸುತ್ತಿದ್ದು, ಈ ನಾಟಕವನ್ನು ಎರಡನೇ ಬಾರಿಗೆ ನಡೆಸುತ್ತಿದ್ದು ಅಧ್ಯಕ್ಷತೆಯನ್ನು ಶಾಸಕ ಸಿ. ಎನ್‌. ಬಾಲಕೃಷ್ಣ ವಹಿಸುವರು. ಉದ್ಘಾಟನೆಯನ್ನು ರಂಗಭೂಮಿ ಕಲಾವಿದ ಎಂ. ಬಿ. ಗಂಗರಾಜ್ ಪಟೇಲ್ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ. ಎಂ. ರಾಮಚಂದ್ರು, ಸಮಾಜ ಸೇವಕರಾದ ನಾಗರತ್ನಶೇಖರ್, ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿ ಆನಂದ್, ವಕೀಲರ ಸಂಘದ ಅಧ್ಯಕ್ಷ ಸುಂದರ್‌ ರಾಜ್ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಯಶಸ್ವಿಗೊಳಿಸುವಂತೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!