ಕನ್ನಡಪ್ರಭ ವಾರ್ತೆ ಮದ್ದೂರು
ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೊಗದಲ್ಲಿ ನಡೆದ ಎಸ್.ಎಲ್.ಭೈರಪ್ಪರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಭೈರಪ್ಪನವರು ತಮ್ಮ ಜೀವನವನ್ನು ಸಂಪೂರ್ಣ ಸಾಹಿತ್ಯ ಅಭ್ಯಾಸ ಅಧ್ಯಯನ ಬರವಣಿಗೆಗೆ ಅರ್ಪಿಸಿಕೊಂಡವರು. ಗ್ರಾ ಮೀಣ ಹಿನ್ನೆಲೆಯಿಂದ ಬಂದ ಭೈರಪ್ಪ ಅವರು ಶ್ರದ್ದೆ, ಪರಿಶ್ರಮ ಮತ್ತು ಅಧ್ಯಯನಶೀಲತೆ ಬಲದಿಂದಲೆ ಕನ್ನಡದ ಅತ್ಯಂತ ಪ್ರಭಾವಿ ಲೇಖಕರಾಗಿ ಹೊರಹೊಮ್ಮಿದರು ಎಂದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಾರ್ಗದರ್ಶಕ ನ.ಲಿ.ಕೃಷ್ಣ ಮಾತನಾಡಿ, ಭೈರಪ್ಪರ ಕೃತಿಗಳು ಕಾಲವನ್ನು ಮೀರಿ ಜೀವಂತವಾಗಿವೆ ಎಂದು ಗುಣಗಾನ ಮಾಡಿದರು. ಇವರ ನಿಧನದಿಂದ ಕನ್ನಡ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಉಪಾಧ್ಯಕ್ಷ ಯರಗನಹಳ್ಳಿ ಮಹಾಲಿಂಗು, ತಾಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಗ್ರಾಪಂ ಸದಸ್ಯರಾದ ವಿ.ಜೆ.ಸುನಿಲ್ ಕುಮಾರ್, ವಿ.ಎಚ್.ಶಿವಲಿಂಗಯ್ಯ, ಬ್ಯಾಂಕ್ ಚಿಕ್ಕಣ್ಣ, ತುಂಬಕೆರೆ ಸಿದ್ದರಾಮ, ಹೂತಗೆರೆ ಆನಂದ, ಎಂ.ವೀರಪ್ಪ, ಗುಂಡ ಮಹೇಶ್, ಪೂಜಾರಪ್ಪ, ಸೋಂಪುರ ಕುಮಾರ್, ನಿಂಗೇಗೌಡ, ಚಂದ್ರು ಮುಂತಾದವರು ಹಾಜರಿದ್ದರು.
ಹಲಗೂರು:
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಮಾತನಾಡಿ, ತಾನೂ ಬೆಳೆಯುವ ಜೊತೆಗೆ ಇತರೆ ಪ್ರಮುಖ ನಾಯಕರನ್ನು ಬೆಳೆಸುವ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಉಪಾಧ್ಯಾಯರು ಸರಳ ಜೀವಿಯಾಗಿದ್ದರು. ದೀನರ ಏಳಿಗೆಗಾಗಿ ತನ್ನ ಸರ್ವಸ್ವವನ್ನೂ ಮುಡುಪಾಗಿಟ್ಟ ಮಹಾನ್ ನಾಯಕ ಎಂದರು.
ಇದೇ ವೇಳೆ ಕೊನ್ನಾಪುರ ಗ್ರಾಮದ ಬಿಜೆಪಿ ಹಿರಿಯ ಕಾರ್ಯಕರ್ತ ಕರೀಗೌಡರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಸಂಯೋಜಕ ಬಿ.ಎಂ.ಕೃಷ್ಣೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎನ್.ಕೃಷ್ಣ, ಉಪಾಧ್ಯಕ್ಷ ನಾಗೇಗೌಡ, ಹಲಗೂರು ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಚ್.ಬಿ.ರವಿ (ಮೋದಿ ರವಿ), ರೈತ ಮೋರ್ಚಾ ಅಧ್ಯಕ್ಷ ಶಶಿಕುಮಾರ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಚಿಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗಯ್ಯ, ಮುಖಂಡರಾದ ಜಯರಾಮು, ಈರೇಶ್, ಗಂಗಾಧರ್, ಸದಾಶಿವ, ಜಗದೀಶ್ ಬಾಲು ಸೇರಿದಂತೆ ಹಲವರು ಭಾಗವಹಿಸಿದ್ದರು.