ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೊಂಡೋತ್ಸವಕ್ಕೆ ದೇವಸ್ಥಾನದ ಮುಂಭಾಗ ಇರುವ ಕೊಂಡದ ಗುಂಡಿಯ ಬಳಿ ಜೋಡಿಸಲಾಗಿದ್ದ ಭಾರಿ ಸೌದೆಗೆ ಗುರುವಾರ ರಾತ್ರಿ ಬೆಂಕಿ ಹಾಕಲಾಯಿತು. ಶುಕ್ರವಾರ ೧೨.೨೦ ರಿಂದ ೧-೧೫ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ದೇವರ ಕಂಡಾಯ ಹೊತ್ತವರು ಕೊಂಡ ಹಾಯುತ್ತಿದ್ದಂತೆ ಭಕ್ತ ಸಮೂಹ ಧರೆಗೆ ದೊಡ್ಡವರ ಪಾದಕ್ಕೆ ನಮೋ ಎಂದು ಹರ್ಷದ್ಗೋರ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಿಂದ ಕೊಂಡೋತ್ಸವ ನಡೆದಿರಲಿಲ್ಲ, ಆದ್ದರಿಂದ ಈ ಬಾರಿ ಅದ್ಧೂರಿಯಿಂದ ಕೊಂಡೋತ್ಸವ ನಡೆಸಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಬಡಾವಣೆಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ದೇವಸ್ಥಾನದ ಮುಂಭಾಗ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನುಗಳನ್ನು ಆಧುನಿಕ ವಿದ್ಯುತ್ ದೀಪಗಳಿಂದ ಅಲಂಕರಿಸಿ ರಾತ್ರಿ ವೇಳೆ ಕಂಗೊಳಿಸುವಂತೆ ಮಾಡಲಾಗಿತ್ತು,ಗುರುವಾರ ಸಂಜೆ ಸಮಾಜದ ಕುಲಸ್ಥರು ಮತ್ತು ಸತ್ತಿಗೆ ಸೂರ ಪಾನಿಗಳನ್ನು ಭವ್ಯವಾಗಿ ಸ್ವಾಗತಿಸಿದರು, ಶುಕ್ರವಾರ ಬೆಳಗ್ಗೆ ಕಂಡಾಯಗಳನ್ನು ಹೊತ್ತು, ಡೊಡ್ಡರಸಿನ ಕೊಳದ ಬಳಿ ತೆರಳೀ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿಸಲಾಯಿತು. ವಿವಿಧ ಜಾನಪದ ಕಲಾತಂಡಗಳು, ಮಂಟೇಸ್ವಾಮಿ ಗುಡ್ಡರು, ಸತ್ತಿಗೆ ಸೂರಪಾನಿ, ನಾದಸ್ವಾರಗಳೊಂದಿಗೆ ಕಂಡಾಯ ಮೆರವಣಿಗೆ ನಡೆಯಿತು,