ಅಭಿವೃದ್ಧಿಪರ ಪಕ್ಷಕ್ಕೆ ಬಿಹಾರಿಗಳ ಬಹುಪರಾಕ್‌: ಬೆಲ್ಲದ

KannadaprabhaNewsNetwork |  
Published : Nov 15, 2025, 02:00 AM IST
445 | Kannada Prabha

ಸಾರಾಂಶ

ಬಿಹಾರ ಚುನಾವಣೆಗೂ ಪೂರ್ವದಲ್ಲಿ ವೋಟ್‌ ಚೋರಿ ಎಂಬ ಸುಳ್ಳು ಆರೋಪದೊಂದಿಗೆ ಜನರ ದಾರಿ ದಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್‌ ನಾಯಕರು ಮುಂದಾಗಿದ್ದರು. ಜನರು ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಮತ ನೀಡಿದ್ದಾರೆ.

ಹುಬ್ಬಳ್ಳಿ:

ಬಿಹಾರದ ಜನತೆ ಕಾಂಗ್ರೆಸ್‌, ಆರ್‌ಜೆಡಿ ಪಕ್ಷಗಳ ಮೈತ್ರಿಕೂಟವನ್ನು ಧಿಕ್ಕರಿಸಿ ಎನ್‌ಡಿಎಗೆ ಸಂಪೂರ್ಣ ಬಹುಮತ ನೀಡಿದ್ದಾರೆ. ಈ ಗೆಲುವಿನ ಅಭಿಯಾನ ಮುಂದಿನ ಚುನಾವಣೆಗಳಲ್ಲೂ ಮುಂದುವರಿಯಲಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಬಿಹಾರ ಚುನಾವಣೆಗೂ ಪೂರ್ವದಲ್ಲಿ ವೋಟ್‌ ಚೋರಿ ಎಂಬ ಸುಳ್ಳು ಆರೋಪದೊಂದಿಗೆ ಜನರ ದಾರಿ ದಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್‌ ನಾಯಕರು ಮುಂದಾಗಿದ್ದರು. ಜನರು ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಮತ ನೀಡಿದ್ದಾರೆ. ಆದರೆ, ಇದನ್ನು ಅರಗಿಸಿಕೊಳ್ಳಲಾಗದೆ ರಾಹುಲ್‌ ಗಾಂಧಿ, ಅವರ ತಂಡ ಮತ್ತೆ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ದೇಶದ ಜನತೆ ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಜಂಗಲ್ ರಾಜ್ ವ್ಯವಸ್ಥೆಯನ್ನು ಬಿಹಾರಿಗಳು ಮರೆತಿಲ್ಲ ಎಂಬುದು ಈ ಚುನಾವಣೆ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಅವರನ್ನು ನಂಬಿ ರಾಜ್ಯದಲ್ಲಿ ಮೈತ್ರಿಮಾಡಿಕೊಂಡ ಪ್ರಾದೇಶಿಕ ಪಕ್ಷಗಳು ಮುಳುಗಿ ಹೋಗಿವೆ. ಈಗ ಬಿಹಾರದಲ್ಲೂ ಮುಳುಗುತ್ತಿವೆ. ಹೀಗಾಗಿ ರಾಹುಲ್ ಗಾಂಧಿ ತಾವು ಮುಳುಗುವುದಲ್ಲದೇ ಬೇರೆಯವರನ್ನು ಮುಳುಗಿಸಿದ್ದಾರೆ ಎಂದು ಟೀಕಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ