ಶೋಭಾಯಾತ್ರೆ ಪ್ರಯುಕ್ತ ವಿಶ್ವ ಹಿಂದೂ ಪರಿಷತ್‌ನಿಂದ ಬೈಕ್‌ ರ್‍ಯಾಲಿ

KannadaprabhaNewsNetwork |  
Published : Apr 11, 2025, 12:31 AM IST
10ಕೆಎಂಎನ್‌ಡಿ-4ಶೋಭಾಯಾತ್ರೆ ಪ್ರಯುಕ್ತ ಮಂಡ್ಯ ನಗರದಲ್ಲಿ ವಿಶ್ವ ಹಿಂದೂಪರಿಷತ್‌ ಕಾರ್ಯಕರ್ತರು ಬೈಕ್‌ ರ್ಯಾಲಿ ನಡೆಸಿದರು.  | Kannada Prabha

ಸಾರಾಂಶ

ಏ.12ರಂದು ಶೋಭಾಯಾತ್ರೆ ನಡೆಯುವ ಅಂಗವಾಗಿ ಗುರುವಾರ ನಗರದಲ್ಲಿ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ನಗರದಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ಮಂಡ್ಯ ನಗರದ ಶ್ರೀಅರ್ಕೇಶ್ವರ ಸ್ವಾಮಿ ದೇವಸ್ಥಾನದಿಂದ ಬೈಕ್‌ ರ್‍ಯಾಲಿ ಆರಂಭಗೊಂಡಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಏ.12ರಂದು ಶೋಭಾಯಾತ್ರೆ ನಡೆಯುವ ಅಂಗವಾಗಿ ಗುರುವಾರ ನಗರದಲ್ಲಿ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ನಗರದಲ್ಲಿ ಬೈಕ್‌ ರ್‍ಯಾಲಿ ನಡೆಸಿದರು.

ನಗರದ ಶ್ರೀಅರ್ಕೇಶ್ವರ ಸ್ವಾಮಿ ದೇವಸ್ಥಾನದಿಂದ ಬೈಕ್‌ ರ್‍ಯಾಲಿ ಆರಂಭಗೊಂಡಿತು. ಜೈಶ್ರೀರಾಮ್‌, ಲೋಕಮಾತೆ ಸೀತಾಮಾತೆಗೆ ಜೈ, ಜೈ ಭಜರಂಗಬಲಿ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ರ್‍ಯಾಲಿಯು ಗುತ್ತಲು ರಸ್ತೆ, ಸಕ್ಕರೆ ಕಂಪನಿ ವೃತ್ತ, ಚೀರನಹಳ್ಳಿ ರಸ್ತೆ ಮೂಲಕ ಲೇಬರ್ ಕಾಲೋನಿ ಮುಖ್ಯರಸ್ತೆ, ಹಾಲಹಳ್ಳಿ ಮುಖಾಂತರ ಹರಿಶ್ಚಂದ್ರ ಸರ್ಕಲ್ ಹತ್ತಿರ ಬಂದು, ಆಸ್ಪತ್ರೆ ರಸ್ತೆ ಮುಖಾಂತರ ಶ್ರೀಕಾಳಿಕಾಂಬ ದೇವಸ್ಥಾನದ ಮೂಲಕ ಸಾಗಿಬಂದಿತು.

ನಂತರ ಹೊಳಲು ಸರ್ಕಲ್ ಶಂಕರಮಠದ ಮುಖಾಂತರ ಕಲ್ಲಹಳ್ಳಿ, ವಿವಿ ನಗರ, ಮರೀಗೌಡ ಬಡಾವಣೆ, ಕಾಳೇಗೌಡ ಹೈಸ್ಕೂಲ್ ಹತ್ತಿರ ಬಂದು ಎಡಕ್ಕೆ ತಿರುಗಿ ಬನ್ನೂರು ರಸ್ತೆ ಮೂಲಕ ವಿನೋಬ ರಸ್ತೆಗೆ ಆಗಮಿಸಿತು. ಬಳಿಕ ಜಯಚಾಮರಾಜೇಂದ್ರ ವೃತ್ತದಿಂದ ಆರ್.ಪಿ.ರಸ್ತೆ ಮಾರ್ಗವಾಗಿ ನೂರಡಿ ರಸ್ತೆ, ಹೊಸಹಳ್ಳಿ ರಸ್ತೆ - ವಿವಿ ರಸ್ತೆ ಮೂಲಕ ಮಹಾವೀರ ಸರ್ಕಲ್, ವಿವೇಕಾನಂದ ಡಬಲ್ ರೋಡ್ ರಸ್ತೆಯಲ್ಲಿ ಸಾಗುತ್ತಾ ಬೆಸಗರಹಳ್ಳಿ ರಾಮಣ್ಣ ರಸ್ತೆಯಲ್ಲಿ ಮೆರವಣಿಗೆ ಅಂತ್ಯಗೊಂಡಿತು.

ರ್‍ಯಾಲಿಯಲ್ಲಿ ಸಿ.ಟಿ.ಮಂಜುನಾಥ್‌, ರಮೇಶ್‌, ಚಿಕ್ಕಬಳ್ಳಿ ಬಾಲು, ಪ್ರಶಾಂತ್‌, ಚಂದ್ರು, ಯೋಗೇಶ್‌, ವಿರೂಪಾಕ್ಷ, ಸುರೇಶ್‌, ಧನಂಜಯ, ಆಚಾರ್‌ ವಿಶ್ವಕರ್ಮ, ಮಂಜುನಾಥ್ದ್‌ ಇತರರಿದ್ದರು.

ಬೈಕ್‌ ರ್‍ಯಾಲಿ ಹಿನ್ನೆಲೆಯಲ್ಲಿ ಗುತ್ತಲು ರಸ್ತೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಯಾತ್ರೆಯುದ್ದಕ್ಕೂ ಪೊಲೀಸರು ಭದ್ರತೆ ಒದಗಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿದ್ದರು.

ಚನ್ನಕೇಶವ ಮೂರ್ತಿಗೆ ವಿಶೇಷ ಪೂಜೆ

ಕಿಕ್ಕೇರಿ:

ಮಂದಗೆರೆಯ ಚನ್ನಕೇಶವ ದೇಗುಲದಲ್ಲಿ ಚನ್ನಕೇಶವ ಮೂರ್ತಿಗೆ ಭಕ್ತ ಸಮೂಹದಿಂದ ವಿಶೇಷ ಪೂಜೆ, ಅಲಂಕಾರ ಸೇವೆ ಜರುಗಿತು.

ಬೇಲೂರಿನ ಚನ್ನಕೇಶವ ರಥೋತ್ಸವ ಪ್ರಯುಕ್ತ ಬೆಳಗ್ಗೆಯಿಂದ ಇಡೀ ದಿನ ದೇವರಿಗೆ ವಿಶೇಷ ಪೂಜೆ, ಅಲಂಕಾರ ಸೇವೆ, ಹೋಮ ಹವನಾದಿಗಳು ಸುಸೂತ್ರವಾಗಿ ನಡೆಯಿತು. ಕೃಷ್ಣಶಿಲೆಯ ಸುಂದರಚನ್ನಕೇಶವ ಮೂರ್ತಿಗೆ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟದ್ರವ್ಯ ಅಭಿಷೇಕ, ಹೋಮ ಹವನಾದಿಗಳು ನಡೆದವು.

ದೇವರಿಗೆ ವಿವಿಧ ಶೋಡಷೋಪಚಾರ ಪೂಜಾ ವಿಧಿವಿಧಾನ ಸೇವೆ, ವಿವಿಧ ಪರಿಮಳ ಪುಷ್ಪಅಲಂಕಾರ, ಪುಷ್ಪಾರ್ಚನೆ, ವಸ್ತ್ರ, ಆಭರಣ ಅಲಂಕಾರ ಮಾಡಲಾಯಿತು. ಅಷ್ಟೋತ್ತರ ಪಠಣೆ, ಕುಂಕುಮಾರ್ಚನೆ ನೆರವೇರಿತು. ಮಹಾಮಂಗಳಾರತಿ ತೀರ್ಥ ಪ್ರಸಾದ, ಅನ್ನಪ್ರಸಾದ ವಿನಿಯೋಗ ಮಾಡಲಾಯಿತು. ಹಿರಿಯ ಅರ್ಚಕ ಶಿವಪ್ರಸಾದ್ ಅನ್ನಪೂರ್ಣ ದಂಪತಿಗೆ ಗೌರವಿಸಲಾಯಿತು.

ಈ ವೇಳೆ ಭಾಸ್ಕರಸ್ವಾಮಿ, ಕೊಪ್ಪಲು ನಾಗೇಂದ್ರ, ಕೆ.ಎಸ್. ಚಂದ್ರಶೇಖರ್, ಸಿ.ದೀಪಕ್, ರಂಗರಾಮಯ್ಯ, ವೆಂಕಟೇಶ್, ಕೆ.ಎಸ್. ಪರಮೇಶ್ವರಯ್ಯ, ಸುಬ್ಬುಕೃಷ್ಣ, ಸೋಮಶೇಖರ್, ಅರ್ಚಕ ಶಿವಪ್ರಸಾದ್, ಕೆ.ಸುಮಾ, ಕುಸುಮಾ, ಅನುಷಾ, ಭಾಗ್ಯ, ಸ್ವರ್ಣ, ಲಕ್ಷ್ಮೀ, ಅನ್ನಪೂರ್ಣ ಭಕ್ತ ವೃಂದದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?