ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು,ಬಿಜೆಪಿ ದೇಶದ ಸೇವೆಗೆ ಅವಕಾಶ ಕೊಟ್ಟಿದೆ. ಸರ್ವರ ಹಿತದ ಜೊತೆಗೆ ದೇಶದ ಸಮಗ್ರ ವಿಕಾಸಕ್ಕೆ ಬಿಜೆಪಿ ದುಡಿಯುತ್ತಿದೆ. ಅನೇಕರ ಅವಿರತ ಶ್ರಮ, ಹಲವರ ತ್ಯಾಗ, ಬಲಿದಾನ, ಸಂಘರ್ಷದ ಫಲವಾಗಿ ಇಂದು ಪಕ್ಷ ಹೆಮ್ಮರವಾಗಿ ಬೆಳೆದಿದೆ. ಆದರೆ ತನ್ನದೇ ಆದ ಸಿದ್ಧಾಂತ, ವಿಚಾರಧಾರೆಗಳ ಮೇಲೆ ಗಟ್ಟಿಯಾಗಿ ನಿಂತಿದೆ. ಸಣ್ಣ, ಸಣ್ಣ ಕಾರ್ಯಕರ್ತರಿಗೆ, ಸಾಮಾನ್ಯರಿಗೂ ದೊಡ್ಡ ಅವಕಾಶ ಕೊಡುವ ಏಕೈಕ ಪಕ್ಷವಿದು. ಕಾರ್ಯಕರ್ತರ ಶ್ರಮಕ್ಕೆ ಇಲ್ಲಿ ಮಾತ್ರ ಬೆಲೆಯಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಈ ಸಲ ಬಹಳ ಅರ್ಥಪೂರ್ಣವಾಗಿ ಸಂಸ್ಥಾಪನಾ ದಿನ ಆಯೋಜಿಸಿದ್ದಾರೆ. ಹಿಂದಿನ ಮಾಜಿ ಜಿಲ್ಲಾಧ್ಯಕ್ಷ ದಂಪತಿಗೂ ಸಹ ಆಹ್ವಾನಿಸಿ ಗೌರವಿಸುವ ಮೂಲಕ ಕಾರ್ಯಕ್ರಮಕ್ಕೆ ಭಾವನಾತ್ಮಕ ಸಂದೇಶ ಕೊಟ್ಟಿದ್ದಾರೆ. ಭಾವನೆ, ದೇಶಾಭಿಮಾನ, ಸಂಬಂಧಕ್ಕೆ ಬಿಜೆಪಿಯಲ್ಲಿ ಮಾತ್ರ ಬೆಲೆಯಿದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಮಾತನಾಡಿ, ದೇಶದ ಅಖಂಡತೆ, ದೇಶದ ಪರಮವೈಭವದ ಪುನರುತ್ಥಾನಕ್ಕೆ ಮೊದಲು ಜನಸಂಘ ಅಸ್ತಿತ್ವಕ್ಕೆ ಬಂತು. 1980ರ ಏ.6ರಂದು ಇದು ಬಿಜೆಪಿಯಾಗಿ ರಚನೆಗೊಂಡಿತು. ಅಟಲ್ ಬಿಹಾರಿ ವಾಪೇಯಿ ಬಿಜೆಪಿ ಮೊದಲ ಅಧ್ಯಕ್ಷರಾಗಿ ಹಾಗೂ ಇವರ ಜೊತೆಗೆ ಲಾಲಕೃಷ್ಣ ಆಡ್ವಾಣಿ ಇತರರು ಸೇರಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದರು. ಜನಸಂಘದಿಂದ ನಮ್ಮ ದಾರಿ ಆರಂಭವಾಯಿತು. ಶ್ಯಾಮಾಪ್ರಸಾದ ಮುಖರ್ಜಿ ಕಂಡಿದ ಕನಸು ನನಸು ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಬಿಜೆಪಿ ಬರೀ ಪಕ್ಷವಲ್ಲ ಎಂದರು.
ಈ ವೇಳೆ ಎಲ್ಲ ಮಾಜಿ ಜಿಲ್ಲಾ ಅಧ್ಯಕ್ಷರಿಗೆ ದಂಪತಿ ಸಮೇತವಾಗಿ ಗೌರವ ಸನ್ಮಾನ ಮಾಡಲಾಯಿತು. ದಿ.ನಾರಾಯಣರಾವ ಮನ್ನಳ್ಳಿ ಅವರ ಧರ್ಮಪತ್ನಿ, ದಿ.ಅಶೋಕ ಗುತ್ತೇದಾರ್ ಅವರ ಧರ್ಮಪತ್ನಿ ಆಗಮಿಸಿ ಸನ್ಮಾನ ಸ್ವೀಕರಿಸಿದರು. ಪ್ರಮುಖರಾದ ಜಯಕುಮಾರ ಕಾಂಗೆ, ರಾಜಶೇಖರ ಮೂರ್ತಿ, ಕಿರಣ ಪಾಟೀಲ್ ಹಕ್ಯಾಳ್ ಇತರರಿದ್ದರು. ಪೀರಪ್ಪ ಯರನಳ್ಳೆ ನಿರೂಪಣೆ ಮಾಡಿದರೆ, ಮಾಧವ ಹಸೂರೆ ವಂದಿಸಿದರು.