ಬಿಜೆಪಿ ಮುಖಂಡ ಶಿವಾನಂದ್ ಆರೋಪ ನಿರಾಧಾರ

KannadaprabhaNewsNetwork |  
Published : Aug 13, 2025, 12:30 AM IST
ಫೋಟೋ: 12 ಹೆಚ್‌ಎಸ್‌ಕೆ 1ಹೊಸಕೋಟೆ ನಗರಸಭೆ ಕಚೇರಿಯಲ್ಲಿ ನಗರಸಭೆ ಅಧ್ಯಕ್ಷ ಆಶಾ ರಾಜಶೇಖರ್ ಸುದ್ದಿಘೋಷ್ಠಿ ನಡೆಸಿ ಅಬಿವೃದ್ದಿ ಕಾರ್ಯಗಳ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಹೊಸಕೋಟೆ: ನಗರಸಭೆಯ ಅಧ್ಯಕ್ಷರು ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಕೇವಲ ಫೇಸ್ಬುಕ್ ವಾಟ್ಸಾಪ್‌ಗೆ ಅಧ್ಯಕ್ಷರು ಸೀಮಿತರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆಆರ್‌ಬಿ ಶಿವಾನಂದ್ ಅವರು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ ಎಂದು ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ತಿಳಿಸಿದರು.

ಹೊಸಕೋಟೆ: ನಗರಸಭೆಯ ಅಧ್ಯಕ್ಷರು ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಕೇವಲ ಫೇಸ್ಬುಕ್ ವಾಟ್ಸಾಪ್‌ಗೆ ಅಧ್ಯಕ್ಷರು ಸೀಮಿತರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆಆರ್‌ಬಿ ಶಿವಾನಂದ್ ಅವರು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ ಎಂದು ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಬಿ ಶಿವಾನಂದ್ ಯಾವ ಉದ್ದೇಶಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೋ ತಿಳಿದಿಲ್ಲ. ಅವರು ನಗರಸಭೆ ಕಚೇರಿಯಲ್ಲಿ ಹಲವಾರು ಬಾರಿ ನನಗೆ ಎದುರುಗಡೆ ಸಿಕ್ಕಾಗ ಯಾವುದೇ ರೀತಿಯ ಸಮಸ್ಯೆ ಬಗ್ಗೆಯೂ ತಿಳಿಸಿಲ್ಲ. ನಾನು ನಗರಸಭೆ ಕಚೇರಿಯಲ್ಲಿದ್ದಾಗ ಯಾವ ನಾಗರಿಕರು ಬಂದರೂ ಅವರಿಗೆ ಸೂಕ್ತ ಮಾಹಿತಿ ನೀಡಿ ಅಧಿಕಾರಿಗಳ ಬಳಿಗೆ ಕಳುಹಿಸಿ ಕೆಲಸ ಮಾಡಿಸಿಕೊಡುತ್ತೇನೆ. ಉಳಿದಂತೆ ನಗರದಲ್ಲಿ ಯಾವ ವಾರ್ಡ್‌ಗಳಿಂದಲೂ ನಾಗರಿಕರು ಕರೆ ಮಾಡಿ ಸಮಸ್ಯೆ ತಿಳಿಸಿದಾಗ ಸಂಬಂಧಪಟ್ಟ ವಾರ್ಡಿನ ಸದಸ್ಯರ ಸಮನ್ವಯತೆ ಸಾಧಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆಯನ್ನು ಬಗೆಹರಿಸುತ್ತಿದ್ದೇನೆ ಎಂದು ಹೇಳಿದರು.

ಟೀ ಕಾಫಿ ಕುಡಿಯಲು ಹೋಗಲ್ಲ: ಯಾವುದೇ ಶಾಲಾ ಕಾಲೇಜುಗಳಲ್ಲಿ ಯಾವುದೇ ಸಮಸ್ಯೆ ಉಂಟಾಗಿ ದೂರವಾಣಿ ಕರೆ ಮಾಡಿದಾಗ ಅಲ್ಲಿಗೆ ಹೋದಾಗ ಸಮಸ್ಯೆ ಬಗೆಹರಿಸುತ್ತೇನೆ. ಸೌಜನ್ಯವಾಗಿ ಅವರು ಟೀ ಕಾಫಿ ಕೊಟ್ಟಾಗ ಕುಡಿಯುವುದು ವಾಡಿಕೆ. ಟೀ ಕಾಫಿ ಕುಡಿಯಲು ನಮ್ಮ ಬಳಿ ಹಣ ಇಲ್ಲ ಎಂದು ಯಾವತ್ತು ಹೋಗಲ್ಲ ಎಂದರು.

೫೦೦ ಬೀದಿ ದೀಪಗಳ ವ್ಯವಸ್ಥೆ ಶೀಘ್ರ:

ಹೊಸಕೋಟೆ ನಗರದಲ್ಲಿ ಬೀದಿ ದೀಪಗಳನ್ನು ಅಳವಡಿಕೆ ಮಾಡಲು ಐದುನೂರು ಬೀದಿ ದೀಪಗಳಿಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಗರದಲ್ಲಿ ಆಯ್ದ ಕಡೆ ಬೀದಿ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕೆಆರ್‌ಬಿ ಶಿವಾನಂದ್ ಬೀದಿ ದೀಪ ಹಾಕಿಸಲು ಯೋಗ್ಯತೆ ಇಲ್ಲ ಎಂದು ಮಾತನಾಡಿದ್ದಾರೆ. ಅವರ ಮಾತನ್ನು ನಾನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಅವರು ಮಾತನಾಡಿದ ರೀತಿಗೆ ನಾನು ಉದ್ವೇಗಕ್ಕೆ ಒಳಗಾಗಿ ಮಾತನಾಡಲ್ಲ. ನಗರದ ಪ್ರಥಮ ಪ್ರಜೆಯಾಗಿರುವ ನಾನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ಪಕ್ಷಭೇದ ಮಾಡದೆ ಪಕ್ಷಾತೀತವಾಗಿ ಎಲ್ಲರ ಸಮಸ್ಯೆಗೆ ಸ್ಪಂದಿಸಬೇಕು. ಆ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ವಿನಾಕಾರಣ ಯಾರು ಕೂಡ ನನ್ನ ಮೇಲೆ ಆರೋಪ ಮಾಡಬಾರದು ಎಂದು ಹೇಳಿದರು.ಫೋಟೋ: 12 ಹೆಚ್‌ಎಸ್‌ಕೆ 1

ಹೊಸಕೋಟೆ ನಗರಸಭೆ ಕಚೇರಿಯಲ್ಲಿ ನಗರಸಭಾಧ್ಯಕ್ಷೆ ಆಶಾರಾಜಶೇಖರ್ ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ