ಕೋಲಸಿರ್ಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

KannadaprabhaNewsNetwork |  
Published : Sep 18, 2024, 01:47 AM IST
ಫೋಟೊಪೈಲ್-೧೭ಎಸ್ಡಿಪಿ೪- ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ವಿಶ್ವೇಶ್ವರ ಹೆಗಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಿದ್ದಾಪುರ, ಯಲ್ಲಾಪುರ ತಾಲೂಕಿನ ವಿವಿಧೆಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಿತು.

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಜರುಗಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದಸ್ಯತ್ವ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರನ್ನು ಕೋಲಸಿರ್ಸಿ ಬಿಜೆಪಿ ಘಟಕದಿಂದ ಗೌರವಿಸಿ ಅಭಿನಂದಿಸಲಾಯಿತು.ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್, ಕೆ.ಆರ್. ವಿನಾಯಕ, ಮಾರುತಿ ನಾಯ್ಕ ಹೊಸೂರು, ಎಸ್.ಕೆ. ಮೇಸ್ತಾ, ತೋಟಪ್ಪ ನಾಯ್ಕ, ವಾಸು ನಾಯ್ಕ ಕೋಲಸಿರ್ಸಿ, ಜಿ.ಬಿ. ನಾಯ್ಕ, ಅಣ್ಣಪ್ಪ ನಾಯ್ಕ ದೊಡ್ಮನೆ, ಚಂದ್ರಹಾಸ ನಾಯ್ಕ, ಆನಂದ ನಾಯ್ಕ, ಗಣಪತಿ ಗೊಂಡ, ಮಹಾಬಲೇಶ್ವರ ನಾಯ್ಕ, ಗೋಪಾಲ ಕೆ.ಎನ್., ಮಧುಕರ ನಾಯ್ಕ, ರಾಘವೇಂದ್ರ ಎನ್. ನಾಯ್ಕ ಇತರರಿದ್ದರು. ವಜ್ರಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಯಲ್ಲಾಪುರ: ತಾಲೂಕಿನಾದ್ಯಂತ ಬಿಜೆಪಿ ಮಂಡಲವು ಸದಸ್ಯತ್ವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ವಜ್ರಳ್ಳಿಯಲ್ಲಿ ಇತ್ತೀಚೆಗೆ ನಡೆದ ಅಭಿಯಾನದಲ್ಲಿ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ, ಜಿಲ್ಲಾ ವಿಶೇಷ ಆಹ್ವಾನಿತರಾದ ಉಮೇಶ ಭಾಗ್ವತ, ಜಿ.ಎನ್. ಗಾಂವ್ಕರ, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಿ.ಆರ್. ಭಾಗ್ವತ, ಶಕ್ತಿ ಕೇಂದ್ರದ ಪ್ರಮುಖರಾದ ದತ್ತ ಭಟ್ಟ, ಶ್ರೀಕಾಂತ ಹೆಬ್ಬಾರ ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿ.ಎನ್. ಭಟ್ಟ, ರಾಮ ಕೋಮಾರ, ನಾಗೇಂದ್ರ ಭಟ್ಟ, ನವೀನ ಕಿರಗಾರೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಮಹೇಶ ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು.

ಗುಳ್ಳಾಪುರದಲ್ಲಿ ನಡೆದ ಅಭಿಯಾನ ಸಭೆಯಲ್ಲಿ ಶಾಂತಾರಾಮ ಸಿದ್ದಿ, ಚಂದ್ರಕಲಾ ಭಟ್ಟ, ಜಿ.ಎನ್. ಗಾಂವ್ಕರ, ಪ್ರಸಾದ ಹೆಗಡೆ, ಶಕ್ತಿ ಕೇಂದ್ರದ ಪ್ರಮುಖರಾದ ಮಹಾಬಲೇಶ್ವರ ಭಟ್ಟ, ನಾರಾಯಣ ಭಟ್ಟ, ವಿಶ್ವೇಶ್ವರ ಭಟ್ಟ ಮತ್ತು ಧನಂಜಯ ಪಿಳ್ಳೆ, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೇಹಳ್ಳಿಯಲ್ಲಿ ಮಂಡಳ ಉಪಾಧ್ಯಕ್ಷ ಗಣಪತಿ ಮುದ್ದೇಪಾಲ, ಸದಸ್ಯತ್ವ ಅಭಿಯಾನದ ಮಹಾಶಕ್ತಿ ಕೇಂದ್ರ ಸಹಯೋಗಿ ಪಕ್ಷದ ಹಿರಿಯ ನಾಯಕ ಗಣಪತಿ ಬೋಳಗುಡ್ಡೆ, ಶಕ್ತಿಕೇಂದ್ರದ ಪ್ರಮುಖ ಶ್ರೀಪತಿ ಮುದ್ದೇಪಾಲ, ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''