ಆರ್‌ಎಸ್‌ಎಸ್ ಕುರಿತು ಶುಭದ ರಾವ್ ಟೀಕೆ: ಬಿಜೆಪಿ ಆಕ್ರೋಶ

KannadaprabhaNewsNetwork |  
Published : Oct 31, 2025, 03:15 AM IST
ನವೀನ್ ನಾಯಕ್ | Kannada Prabha

ಸಾರಾಂಶ

ಭಾರತವು ಭಕ್ತಿ ಮತ್ತು ಶಕ್ತಿಯ ಆರಾಧನೆಯ ದೇಶ. ಆರ್‌ಎಸ್‌ಎಸ್ ಕಳೆದ ಶತಮಾನದಿಂದ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಸ್ವಯಂಸೇವಕರ ಕೈಯಲ್ಲಿರುವ ಲಾಠಿ ದೌರ್ಜನ್ಯಕ್ಕಾಗಿ ಅಲ್ಲ, ಆತ್ಮರಕ್ಷಣೆ ಹಾಗೂ ಶಿಸ್ತಿನ ಸಂಕೇತವಾಗಿದೆ. ನೂರು ವರ್ಷಗಳ ಇತಿಹಾಸದಲ್ಲೂ ಆರ್‌ಎಸ್‌ಎಸ್ ಹಿಂಸೆಗೆ ಪ್ರಚೋದನೆ ನೀಡಿದ ಉದಾಹರಣೆ ಒಂದೂ ಇಲ್ಲ ಎಂದು ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶುಭದ ರಾವ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ಮಾಡಿದ ಟೀಕೆ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡ ಜಿಹಾದಿಗಳ ಬಗ್ಗೆ ಮಾತನಾಡುವ ಧೈರ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ಆದರೆ ದೇಶಭಕ್ತ ಸಂಘಟನೆಯಾದ ಆರ್‌ಎಸ್‌ಎಸ್ ಕುರಿತು ಲಘು ಮಾತು ಆಡಲು ಮಾತ್ರ ಧೈರ್ಯ ತೋರುತ್ತಿದ್ದಾರೆ ಎಂದು ನವೀನ್ ನಾಯಕ್ ಟೀಕಿಸಿದರು.

ಭಾರತವು ಭಕ್ತಿ ಮತ್ತು ಶಕ್ತಿಯ ಆರಾಧನೆಯ ದೇಶ. ಆರ್‌ಎಸ್‌ಎಸ್ ಕಳೆದ ಶತಮಾನದಿಂದ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಸ್ವಯಂಸೇವಕರ ಕೈಯಲ್ಲಿರುವ ಲಾಠಿ ದೌರ್ಜನ್ಯಕ್ಕಾಗಿ ಅಲ್ಲ, ಆತ್ಮರಕ್ಷಣೆ ಹಾಗೂ ಶಿಸ್ತಿನ ಸಂಕೇತವಾಗಿದೆ. ನೂರು ವರ್ಷಗಳ ಇತಿಹಾಸದಲ್ಲೂ ಆರ್‌ಎಸ್‌ಎಸ್ ಹಿಂಸೆಗೆ ಪ್ರಚೋದನೆ ನೀಡಿದ ಉದಾಹರಣೆ ಒಂದೂ ಇಲ್ಲ ಎಂದರು.

ಆರ್‌ಎಸ್‌ಎಸ್ ವಿರುದ್ಧ ಅಸತ್ಯ ಪ್ರಚಾರ ಮಾಡುವವರು, ಅದನ್ನು ನಿರ್ಬಂಧಿಸಲು ಯತ್ನಿಸುವವರು ತಮ್ಮ ನಿಲುವು ಕುರಿತು ಪುನರ್ವಿಚಾರ ಮಾಡಲಿ. ರಾಷ್ಟ್ರ ಹಿತಕ್ಕಾಗಿ ಶ್ರಮಿಸುವ ಸಂಘಟನೆಗಳ ವಿರುದ್ಧ ಹೀನ ಪ್ರಯತ್ನಗಳು ಜನರಿಂದ ತಿರಸ್ಕೃತವಾಗುತ್ತವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ