ಸುತ್ತೂರುಶ್ರೀಗಳ ಆಶೀರ್ವಾದ ಪಡೆದ ಮರಿತಿಬ್ಬೇಗೌಡ

KannadaprabhaNewsNetwork |  
Published : May 06, 2024, 12:32 AM IST
7 | Kannada Prabha

ಸಾರಾಂಶ

ಈಗಾಗಲೇ ಎರಡು ಸುತ್ತು ಚುನಾವಣೆ ಪ್ರಚಾರ ಮುಗಿಸಿದ್ದೇನೆ, ಈಗಾಗಲೇ 4 ಬಾರಿ ಶಿಕ್ಷಕರು ನನ್ನನ್ನು ಕೈಹಿಡಿದಿದ್ದಾರೆ. 5ನೇ ಬಾರಿಯೂ ಕೂಡ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ನಾಲ್ಕು ಜಿಲ್ಲೆಗಳಲ್ಲಿ ಶಿಕ್ಷಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ

ಕನ್ನಡಪ್ರಭ ವಾರ್ತೆ ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ವಿಧಾನಪರಿಷತ್ತು ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ. 3ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸುತ್ತೂರು ಮಠಕ್ಕೆ ಭಾನುವಾರ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ ಅವರು, ಈಗಾಗಲೇ ಎರಡು ಸುತ್ತು ಚುನಾವಣೆ ಪ್ರಚಾರ ಮುಗಿಸಿದ್ದೇನೆ, ಈಗಾಗಲೇ 4 ಬಾರಿ ಶಿಕ್ಷಕರು ನನ್ನನ್ನು ಕೈಹಿಡಿದಿದ್ದಾರೆ. 5ನೇ ಬಾರಿಯೂ ಕೂಡ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ನಾಲ್ಕು ಜಿಲ್ಲೆಗಳಲ್ಲಿ ಶಿಕ್ಷಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಅವರು ಹೇಳಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಐ.ಟಿ.ಐ. ಪ್ರಸಾದ್, ಜಯರಾಮ್ ಕೀಲಾರ, ಕೆ.ವಿ. ಮಲ್ಲೇಶ್, ಕೆ.ಎಸ್. ಷಡಕ್ಷರಿ, ಟಿ.ಎಸ್. ಬಳ್ಳಾರಿ ಗೌಡ, ಮೂಗೂರು ಕುಮಾರಸ್ವಾಮಿ, ಪ್ರೊ. ಶಂಕರೇಗೌಡ, ಚಾಮರಾಜನಗರ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಪ್ರಭಾಕರ್, ಮಹದೇಶ್ವರ ಸ್ವಾಮಿ, ಶಿವಶಂಕರ್, ಸುದೀಪ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!