ರೈಲ್ವೆ ಕಾಮಗಾರಿಯಿಂದ ಬ್ಲಾಕ್‌ ಬರ್ಸ್ಟ್‌: 12 ರೈಲು ವಿಳಂಬ

KannadaprabhaNewsNetwork |  
Published : Jul 29, 2026, 02:15 AM IST
ರೈಲ್ವೆ | Kannada Prabha

ಸಾರಾಂಶ

ಲೋಂಡಾ ಯಾರ್ಡ್‌ನಲ್ಲಿ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ ಬ್ಲಾಕ್‌ ಬರ್ಸ್ಟ್‌ ಆದಕಾರಣ ಈ ಮಾರ್ಗವಾಗಿ ಸಂಚರಿಸಬೇಕಾದ ಬರೋಬ್ಬರಿ 12 ರೈಲುಗಳು ತಡವಾಗಿ ಚಲಿಸಿವೆ.

ಹುಬ್ಬಳ್ಳಿ:

ಲೋಂಡಾ ಯಾರ್ಡ್‌ನಲ್ಲಿ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ ಬ್ಲಾಕ್‌ ಬರ್ಸ್ಟ್‌ ಆದಕಾರಣ ಈ ಮಾರ್ಗವಾಗಿ ಸಂಚರಿಸಬೇಕಾದ ಬರೋಬ್ಬರಿ 12 ರೈಲುಗಳು ತಡವಾಗಿ ಚಲಿಸಿವೆ.

ಲೋಂಡಾ ಯಾರ್ಡ್‌ನಲ್ಲಿ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಮೊದಲು ಎರಡಿದ್ದ ಫ್ಲಾರ್ಟ್‌ಫಾರ್ಮ್‌ನ್ನು ಮೂರಕ್ಕೇರಿಸಲಾಗುತ್ತಿದೆ. ನಿಗದಿತ ಕಾಮಗಾರಿ ವೇಳೆ ಅನಿರೀಕ್ಷಿತವಾಗಿ 8 ಗಂಟೆ ತಡವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಹಲವು ರೈಲುಗಳು ಅಲ್ಲಲ್ಲಿ ನಿಲುಗಡೆಯಾಗಿದ್ದರೆ, ಮತ್ತೆ ಕೆಲ ರೈಲುಗಳ ವೇಳಾಪಟ್ಟಿಯನ್ನೇ ಬದಲಾಯಿಸಲಾಗಿದೆ. 12 ರೈಲುಗಳ ವಿಳಂಬ:

ನಿಜಾಮುದ್ದೀನ್‌-ವಾಸ್ಕೋಡಿಗಾಮಾ ಎಕ್ಸ್‌ಪ್ರೆಸ್- 221 ನಿಮಿಷ, ದಾದರ-ಹುಬ್ಬಳ್ಳಿ ಎಕ್ಸ್‌ಪ್ರೆಸ್- 221 ನಿಮಿಷ, ಬೆಂಗಳೂರು-ಬೆಳಗಾವಿ ಎಕ್ಸ್‌ಪ್ರೆಸ್-355 ನಿಮಿಷ, ಬೆಂಗಳೂರು-ಸಾಂಗ್ಲಿ ಎಕ್ಸ್‌ಪ್ರೆಸ್ -222 ನಿಮಿಷ, ಬೆಂಗಳೂರು-ಜೋಧಪುರ ಎಕ್ಸ್‌ಪ್ರೆಸ್- 237 ನಿಮಿಷ, ಮೈಸೂರು-ಬೆಳಗಾವಿ -245 ನಿಮಿಷ, ದಾದರ-ಪುದುಚೇರಿ ಎಕ್ಸ್‌ಪ್ರೆಸ್ -165 ನಿಮಿಷ, ಮಿರಜ್‌- ಹುಬ್ಬಳ್ಳಿ ಪ್ಯಾಸೆಂಜರ್‌-147 ನಿಮಿಷ, ಸಿಕಂದರಾಬಾದ್‌- ಬೆಳಗಾವಿ -222 ನಿಮಿಷ, ವಾಸ್ಕೋಡಿಗಾಮಾ-ಶಾಲಿಮಾರ್‌ ಎಕ್ಸ್‌ಪ್ರೆಸ್ -123 ನಿಮಿಷ, ತಿರುಪತಿ-ಛತ್ರಪತಿ ಶಾಹು ಮಹಾರಾಜ ಟರ್ಮಿನಲ್‌ ಎಕ್ಸ್‌ಪ್ರೆಸ್ -184 ನಿಮಿಷ, ಅಜ್ಮೀರ್‌-ಬೆಂಗಳೂರು ಎಕ್ಸ್‌ಪ್ರೆಸ್- 158 ನಿಮಿಷ ತಡೆ ಹಿಡಿಯಲಾಗಿತ್ತು.

ಇದಲ್ಲದೇ, ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು -150 ನಿಮಿಷ ತಡವಾಗಿ ಮರು ನಿಗದಿಪಡಿಸಲಾಗಿತ್ತು. ಆದರೆ ಬೆಳಗಾವಿಯಿಂದ -192 ನಿಮಿಷ ತಡವಾಗಿ ಚಲಿಸಿತು. ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಿಂದಲೇ -235 ನಿಮಿಷ ತಡವಾಗಿ ಚಲಿಸಿತು.

ರದ್ದತಿ:

ಈ ನಡುವೆ ಸೋಲ್ಲಾಪುರ- ಧಾರವಾಡ ಪ್ಯಾಸೆಂಜರ್‌ನ್ನು ನವಲೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಿದ್ದರೆ, ಪಂಡರಾಪುರ-ಧಾರವಾಡ ರೈಲನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಮಧ್ಯಾಹ್ನದ ನಂತರ ಸುಗಮ ಸಂಚಾರ ಶುರುವಾಯಿತು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶಕ್ಕಾಗಿ ಸೇವೆ ಮಾಡಲು ಸದಾ ಸಿದ್ಧರಾಗಿ: ಎ.ಬಿ. ಹೆಸರೂರ
ಸೂಡಿ ಗ್ರಾಮ ಪಂಚಾಯಿತಿ ಎದುರು ಕಸ ಸುರುವಿ ಆಕ್ರೋಶ