ಕನ್ನಡಪ್ರಭ ವಾರ್ತೆ ಪಾಂಡವಪುರ
ಡೇರಿಯ ಹೊಸ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ಬಿ.ಎನ್.ರವಿ, ಶಾಂತ ಯೋಗೇಶ್ ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ಸಹ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರಾಗಿ ಬಿ.ಎನ್.ರವಿ ಹಾಗೂ ಉಪಾಧ್ಯಕ್ಷೆಯಾಗಿ ಶಾಂತಯೋಗೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆನಂದನಾಯ್ಕ ಘೋಷಿಸಿದರು.
ಸಂಘದ ನೂತನ ಅಧ್ಯಕ್ಷ ಬಿ.ಎನ್.ರವಿ, ಉಪಾಧ್ಯಕ್ಷೆ ಶಾಂತಯೋಗೇಶ್ ಅವರನ್ನು ಎಲ್ಲಾ ಮುಖಂಡರು, ನಿರ್ದೇಶಕರು ಅಭಿನಂಧಿಸಿದರು. ಸಿಹಿಹಂಚಿ ಸಂಭ್ರಮಿಸಿದರು. ಡೇರಿ ಗೌರವ ಅಧ್ಯಕ್ಷರಾದ ಯಜಮಾನ್ ಬಸವರಾಜು, ತೆಂಡೆ ಯಜಮಾನರಾದ ಕರೀಸ್ವಾಮಿ, ಮಹೇಂದ್ರ, ಬಿ.ರವಿಕುಮಾರ, ಅಂಗಡಿ ಭದ್ರೇಗೌಡ, ಡೇರಿ ನಿರ್ದೇಶಕರಾದ ಈರೇಗೌಡ, ಗೌಡೇಗೌಡ, ತಿಮ್ಮೇಗೌಡ, ಕೃಷ್ಣೇಗೌಡ, ರಮೇಶ್, ವಸಂತಕುಮಾರ್, ಶೋಭಾಕುಮಾರ್, ಬಿ.ವಿ.ಅರುಣ, ಡೇರಿ ಕಾರ್ಯದರ್ಶಿ ಅಭಿಷೇಕ್, ಪರೀಕ್ಷಕ ರಾಘವೇಂದ್ರ, ಸಹಾಯಕ ಲೋಕೇಶ್ ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.ಬಿಎಸ್ಪಿ ತಾಲೂಕು ಅಧ್ಯಕ್ಷರಾಗಿ ಬಿಲ್ಲೇನಹಳ್ಳಿ ನವೀನ್ ಆಯ್ಕೆಕೆ.ಆರ್.ಪೇಟೆ: ಬಹುಜನ ಸಮಾಜ ಪಕ್ಷದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಬಿಲ್ಲೇನಹಳ್ಳಿ ನವೀನ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಡಿ.ಜಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಜೆ.ಪ್ರದೀಪ್, ಕಾರ್ಯದರ್ಶಿಯಾಗಿ ಜಯರಾಂ ಖಜಾಂಚಿಯಾಗಿ ಮಮತಾ, ತಾಲೂಕು ಸಂಯೋಜಕರಾಗಿ ಗೋವಿಂದರಾಜು, ಉಸ್ತುವಾರಿಯಾಗಿ ಬಿ.ಡಿ.ಪ್ರದೀಪ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.