- ದುರ್ಗಿಗುಡಿ ಬಡಾವಣೆ ಹೂವಾನಾಯ್ಕ ಮನೆಯಲ್ಲಿ ಪುತ್ರಿ ಸ್ವೀಕೃತಿ ಬಲಿ
- ತಂದೆ ಹೂವಾನಾಯ್ಕ, ತಾಯಿ ಸುನೀತಾ ಬಾಯಿ, ಅಜ್ಜಿ ತೀರ್ಥಿಬಾಯಿಗೂ ಸುಟ್ಟಗಾಯ
- ಮಂಗಳವಾರ ಸ್ನಾನಕ್ಕೆ ತೆರಳಿದ್ದಾಗ ಘಟನೆ, ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಸ್ವೀಕೃತಿ ಸಾವು- - -
ಪಟ್ಟಣದ ದುರ್ಗಿಗುಡಿ ಬಡಾವಣೆ ಉತ್ತರ ಭಾಗ ಪ್ರದೇಶದಲ್ಲಿ ವಾಸವಾಗಿದ್ದ ಹೂವಾನಾಯ್ಕ ಎಂಬವರ ಮನೆಯಲ್ಲಿ ಬೆಳಗ್ಗೆ ಸುಮಾರು 11.30ಕ್ಕೆ ಸ್ನಾನದ ಕೋಣೆಯ ಬಾಯ್ಲರ್ ಸ್ಫೋಟಗೊಂಡು 4 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸ್ವೀಕೃತಿ (11) ಬಾಲಕಿ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಪರಿಣಾಮ ಸ್ನಾನ ಮಾಡುತ್ತಿದ್ದ ಸ್ವೀಕೃತಿಗೆ ಬೆಂಕಿ ತಗುಲಿದೆ. ಸಹಾಯಕ್ಕಾಗಿ ಕೂಗಿಕೊಂಡಾಗ ಮನೆಯಲ್ಲೇ ಇದ್ದ ತಂದೆ ಹೂವಾನಾಯ್ಕ, ತಾಯಿ ಸುನೀತಾ ಬಾಯಿ ಹಾಗೂ ಅಜ್ಜಿ ತೀರ್ಥಿಬಾಯಿ ಸ್ನಾನದ ಮನೆಯ ಬಾಗಿಲು ಒಡೆದು ರಕ್ಷಣೆಗಾಗಿ ಸ್ನಾನದ ಕೋಣೆ ಪ್ರವೇಶಿಸಿದ್ದಾರೆ. ಆಗ ಇವರಿಗೂ ಬೆಂಕಿ ತಗುಲಿ ಸುಟ್ಟಗಾಯಗಳಾಗಿವೆ.
ಬದುಕುಳಿದ ಮೂವರೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೂವಾನಾಯ್ಕ ಅವರ ಅಣ್ಣ ಕೇಶನಾಯ್ಕ ಹೊನ್ನಾಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
-8ಎಚ್.ಎಲ್.ಐ1: ಸ್ವೀಕೃತಿ (11)