ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ದಿಟ್ಟ ಕ್ರಮ

KannadaprabhaNewsNetwork |  
Published : Jun 05, 2026, 01:30 AM IST
ದಿ-4-ಅರ್.ಪಿ.ಟಿ.1ಪಿ: ರಿಪ್ಪನಪೇಟೆ ಪಟ್ಟಣದ ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವರ್ತಕರ ಮತ್ತು ಸಾರ್ವಜನಿಕರ ಸಮಲೋಚನಾ ಸಭೆಯಲ್ಲಿ ವೃತ್ತ ನಿರೀಕ್ಷಕ ಎಂ.ಎಸ್. ಗೌಡರ ಗೌಡಪ್ಪ  ಆಲಿಸಿ ನಂತರ ಮಾತನಾಡಿದರು. | Kannada Prabha

ಸಾರಾಂಶ

ಹೊಸನಗರ-ಶಿವಮೊಗ್ಗ-ಸಾಗರ-ತೀರ್ಥಹಳ್ಳಿ ನಾಲ್ಕು ಮುಖ್ಯ ರಸ್ತೆಯ ಸಂಪರ್ಕದ ವಿನಾಯಕ ವೃತ್ತದಲ್ಲಿ 75 ಅಡಿ ಸುತ್ತಳತೆಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ, ನಾಲ್ಕು ಸಂಪರ್ಕದ ರಸ್ತೆ ವಿಭಜಕದ ಎರಡು ಸೈಡ್‍ನಲ್ಲಿ ದ್ವಿಚಕ್ರ ವಾಹನ ನಿಲುಗಡೆ ಹಾಗೂ ನಾಲ್ಕು ಚಕ್ರದ ವಾಹನಗಳು 100 ಮೀಟರ್ ಅಂತರದಲ್ಲಿ ನಿಲುಗಡೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ವೃತ್ತ ನಿರೀಕ್ಷಕ ಎಂ.ಎಸ್. ಗೌಡರ ಗೌಡಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‌ಪೇಟೆ

ಹೊಸನಗರ-ಶಿವಮೊಗ್ಗ-ಸಾಗರ-ತೀರ್ಥಹಳ್ಳಿ ನಾಲ್ಕು ಮುಖ್ಯ ರಸ್ತೆಯ ಸಂಪರ್ಕದ ವಿನಾಯಕ ವೃತ್ತದಲ್ಲಿ 75 ಅಡಿ ಸುತ್ತಳತೆಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ, ನಾಲ್ಕು ಸಂಪರ್ಕದ ರಸ್ತೆ ವಿಭಜಕದ ಎರಡು ಸೈಡ್‍ನಲ್ಲಿ ದ್ವಿಚಕ್ರ ವಾಹನ ನಿಲುಗಡೆ ಹಾಗೂ ನಾಲ್ಕು ಚಕ್ರದ ವಾಹನಗಳು 100 ಮೀಟರ್ ಅಂತರದಲ್ಲಿ ನಿಲುಗಡೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ವೃತ್ತ ನಿರೀಕ್ಷಕ ಎಂ.ಎಸ್. ಗೌಡರ ಗೌಡಪ್ಪ ತಿಳಿಸಿದರು.

ಪಟ್ಟಣದ ಸ್ಥಳೀಯ ಗ್ರಾಪಂ ಸಭಾಂಗಣದಲ್ಲಿ ಬುಧವಾರ ನಡೆದ ವರ್ತಕರ ಮತ್ತು ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ವರ್ತಕರ ಹಾಗೂ ಸಾರ್ವಜನಿಕರ ಅಹವಾಲು ಆಲಿಸಿ ನಂತರ, ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಹಾಗೂ ತಮ್ಮಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿಗೊಳಿಸಲು ಒಂದು ತಿಂಗಳ ಕಾಲ ನಮ್ಮ ಸಿಬ್ಬಂದಿ ನೇಮಿಸಲಾಗುವುದು ನಂತರ ತಾವು ಲೋಕೋಪಯೋಗಿ ಇಲಾಖೆಯವರು ಬಿಳಿ ಬಣ್ಣದ (ಮಾರ್ಕ್)ಗುರುತು ಹಾಕಿದ ಮೇಲೆ ವೃತ್ತದ ಸುತ್ತಮುತ್ತ ಬಸ್ ಪ್ರಯಾಣಿಕರು ಹತ್ತಿ ಇಳಿಯಲು ಮಾತ್ರ ಅವಕಾಶವಿರುತ್ತದೆ. ಉಳಿದಂತೆ ಓಡಾಡುವ ವಾಹನಗಳ ದಟ್ಟಣೆಯ ಕಾರಣ ನಾಲ್ಕು ಚಕ್ರದ ವಾಹನಗಳನ್ನು ಪ್ರತ್ಯೇಕವಾಗಿ 100 ಮೀಟರ್ ಅಂತರದಲ್ಲಿ ನಿಲ್ಲಿಸುವುದು ಹಾಗೂ ದ್ವಿಚಕ್ರವಾಹನಗಳನ್ನು ಡಿವೈಡರ್‌ನ ಎರಡು ಬದಿಯಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಲಾಗುವುದು. ವಾಹನ ಸವಾರರು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಸಾರಿಗೆ ನಿಯಮದಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವರ್ತಕರ ಪರವಾಗಿ ಎಂ.ಸುರೇಶ್‍ಸಿಂಗ್, ಸುಂದರೇಶ್, ಕೆ.ಬಿ.ನಾಗಭೂಷಣ, ಎಚ್.ಎಸ್.ಸತೀಶ್, ಡಿ.ಸುರೇಶ ಪ್ರಭು, ರಿ.ಸೋಮಶೇಖರ ಮಾತನಾಡಿ, ಸಾಗರ ರಸ್ತೆಯ ವಿಸ್ತರಣೆ ಕಾರ್ಯದಲ್ಲಿ ಸಾಕಷ್ಟು ಲೋಪ ಕಂಡುಬಂದಿದೆ, ನಿಯಮ ಪಾಲಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವ ಬಗ್ಗೆ ಗಮನ ಸೆಳೆದರು.

ಸಾರ್ವಜನಿಕರಾದ ಸುದೀಂದ್ರ ಪೂಜಾರಿ, ಎಂ.ಬಿ.ಮಂಜುನಾಥ, ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಡಿ.ಈ.ಮಧುಸೂದನ್, ಉಬೇದುಲ್ಲಾ ಷರೀಫ್ ಮಾತನಾಡಿ, ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಅಗುವ ತೊಂದರೆ ಮತ್ತು ಇಲಾಖೆಯ ನಿಯಮದಂತೆ ಅನುಸರಿಸಬೇಕಾದ ಕ್ರಮದ ಕುರಿತು ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ತಮ್ಮ ನಿಯಮದಡಿ ಕೈಗೊಳ್ಳುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ, ಹೋಂ ಗಾರ್ಡ್ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಸಲಹೆ ನೀಡಿದರು.ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಸುನೀಲ್, ಪಿಎಸ್‍ಐ ರಾಜುರೆಡ್ಡಿ, ಪ್ರೋಬೆಷನರಿ ಪಿ.ಎಸ್.ಐ.ಶ್ರೀಕಾಂತ್ ಹಾಗೂ ಪಂಚಾಯಿತಿ ಸಿಬ್ಬಂದಿವರ್ಗ ಹಾಜರಿದ್ದರು.

ಪ್ರಾರಂಭದಲ್ಲಿ ಪಿ.ಎಸ್.ಐ.ರಾಜುರೆಡ್ಡಿ ಸ್ವಾಗತಿಸಿ, ಉಮೇಶ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಕೆದಾಟು ಯೋಜನೆಗೆ ತಮಿಳ್ನಾಡು ಅಡ್ಡಿ ಸಲ್ಲ: ವೀರಭದ್ರಸ್ವಾಮಿ
ಈಶ್ವರವನದಲ್ಲಿ ಮಿಯಾವಾಕಿ ಅರಣ್ಯ ಬೆಳೆಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ