ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಸುವರ್ಣ ಸಂಸ್ಕೃತಿ ಭವನದದಲ್ಲಿ ಶಿವಮೊಗ್ಗ ರಂಗಾಯಣದಲ್ಲಿ ‘ಗುಣಮುಖ’ ನಾಟಕದ ತುಣುಕೊಂದನ್ನು ಓದುವುದರ ಮೂಲಕ ನಾಟಕ ಅವಲೋಕನ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಕ್ಕೆ ಒಂದು ಮಿತಿ ಇರುತ್ತದೆ. ನೋಡುಗರ ಭಾವನೆ ಅರ್ಥ ಮಾಡಿಕೊಂಡು ಅಭಿನಯ ಮಾಡಬೇಕಾಗುತ್ತದೆ. ನೋಡುವವರು ಮತ್ತು ಅಭಿನಯಿಸುವವರಿಗೆ ಅವಿನಾಭಾವ ಸಂಬಂಧವಿರುತ್ತದೆ. ಕಲೆಯನ್ನು ಹೇಗೆ ಪರಿಚಯ ಮಾಡಿಕೊಳ್ಳಬೇಕು. ಹೇಗೆ ಅರ್ಥೈಸಿಕೊಳ್ಳಬೇಕು. ಭಾಷೆ, ಪ್ರಭಾವ, ಎಲ್ಲವನ್ನೂ ತಿಳಿದು ಬದುಕಿನ ಜೊತೆ ಕೆಲಸ ಮಾಡುವುದೇ ರಂಗ ಕಲೆ ಎಂದರು.
ಕೆಲವೊಂದು ರುಚಿ ಅಥವಾ ರಸಗಳ ಜೊತೆಗೆ ಅಭಿನಯಿಸಬೇಕಾಗುತ್ತದೆ. ಮಾತು, ಮೌನಗಳ ಮೂಲಕ ಸಂವಹನ ಮಾಡಬೇಕಾಗುತ್ತದೆ. ಹಲವಾರು ವಿಭಾಗಗಳಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳನ್ನು ಪ್ರಪಂಚದ ಬೇರೆ ಬೇರೆ ಸಮಸ್ಯೆಗಳನ್ನು ಕೂಡ ಬಿಂಬಿಸುವ ಒಂದೇ ಒಂದು ಮಾಧ್ಯಮ ಅದು ರಂಗಭೂಮಿ ಎಂದರು.ನಟನಾಗಬೇಕೆಂಬ ಆಸೆ ಸಹಜ. ಆದರೆ, ಕಠಿಣ ಪರಿಶ್ರಮ ಬೇಕು. ಮತ್ತು ರಂಗಭೂಮಿ ಎಲ್ಲಾ ಆಕಾರಗಳಲ್ಲಿ ಪರಿಣಿತನಾದಾಗ ಆತ ಪ್ರಬುದ್ಧ ಕಲಾವಿದನಾಗುತ್ತಾನೆ ಎಂದು ಹೇಳಿದರು.
ಇತ್ತೀಚೆಗೆ ಸಾಹಿತ್ಯ ವಿಮರ್ಶಕರು ಕಡಿಮೆಯಾಗುತ್ತಿದ್ದಾರೆ. ರಂಗ ವಿಮರ್ಶೆಗಳು ವರದಿ ರೂಪದಲ್ಲಿ ಬರುತ್ತಿವೆ. ಪ್ರೇಕ್ಷಕನ ಸಹಜ ಖುಷಿ ಅವಲೋಕಿಸುವ ವಿಮರ್ಶೆ ಬರಬೇಕು ಮತ್ತು ಇದು ನಾಟಕದ ಬೇರೆ ಬೇರೆ ಮಜಲು ಅರ್ಥ ಮಾಡಿಕೊಡುತ್ತದೆ ಎಂದರು.