ಪುಟ...4ಕ್ಕೆ.ರಕ್ಷಾ ಬಂಧನಕ್ಕೆ ರಾಖಿ ಖರೀದಿ ಜೋರು !

KannadaprabhaNewsNetwork |  
Published : Aug 28, 2026, 03:15 AM IST
ರಕ್ಷಾ ಬಂಧನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಸಹೋದರತ್ವದ ಸಂಕೇತವಾದ ರಕ್ಷಾ ಬಂಧನಕ್ಕೆ ಇಂಡಿ ನಗರ ಹಾಗೂ ತಾಲೂಕಿನಲ್ಲಿ ರಾಖಿ (ನೂಲು) ಖರೀದಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಮಹಿಳೆಯರು, ಯುವತಿಯರು ರಾಖಿ ಅಂಗಡಿಗಳಿಗೆ ಮುಗಿ ಬಿದ್ದಿದ್ದಾರೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಸಹೋದರತ್ವದ ಸಂಕೇತವಾದ ರಕ್ಷಾ ಬಂಧನಕ್ಕೆ ಇಂಡಿ ನಗರ ಹಾಗೂ ತಾಲೂಕಿನಲ್ಲಿ ರಾಖಿ (ನೂಲು) ಖರೀದಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಮಹಿಳೆಯರು, ಯುವತಿಯರು ರಾಖಿ ಅಂಗಡಿಗಳಿಗೆ ಮುಗಿ ಬಿದ್ದಿದ್ದಾರೆ.

ನಗರದೆಲ್ಲೆಡೆ ಅಂಗಡಿ-ಮುಂಗಟ್ಟುಗಳು ಹಾಗೂ ರಸ್ತೆ ಬದಿಯ ಬಂಡಿಗಳ ಮೇಲೂ ರಾಖಿ ಮಾರಾಟ ನಡೆಯುತ್ತಿದೆ. ವಿವಿಧ ನಮೂನೆಯ, ಆಕರ್ಷಕ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ. ಸಹೋದರರಿಗಾಗಿ ಸಹೋದರಿಯರು ರಾಖಿಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ.

ಇಲ್ಲಿನ ವಿವಿಧೆಗಳಲ್ಲಿನ ಅಂಗಡಿ-ಮುಂಗಟ್ಟು ಹಾಗೂ ರಸ್ತೆ ಬದಿ ತಳ್ಳು ಗಾಡಿಗಳ ಮೇಲೂ ರಾಖಿ ಮಾರಾಟ ಭರ್ಜರಿಯಾಗಿ ನಡೆದಿದೆ. ಇನ್ನು ಹಲವೆಡೆ ಹಬ್ಬದ ನಿಮಿತ್ತವಾಗಿಯೇ ರಸ್ತೆ ಮೇಲೆ ಅಂಗಡಿಗಳನ್ನು ತೆರೆಯಲಾಗಿದೆ. ರಸ್ತೆ ಮೇಲೆ ಟೆಂಟ್ ಹಾಕಿ ರಾಖಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಮಹಿಳೆಯರು ಮುಗಿ ಬಿದ್ದಿದ್ದಾರೆ.

ಬೆಳ್ಳಿ ನೂಲಿನ ರಾಖಿ, ರೇಷ್ಮೆ ದಾರಗಳುಳ್ಳ ರಾಖಿ, ಮುತ್ತಿನ ರಾಖಿ, ಗಣಪ, ಬಾಹುಬಲಿ,ರುದ್ರಾಕ್ಷಿ ಮತ್ತಿತರೆ ಸಣ್ಣ ಮೂರ್ತಿಗಳನ್ನು ಹೊತ್ತ ರಾಖಿಗಳು ಗಮನ ಸೆಳೆಯುತ್ತಿವೆ. ಪೋಸ್ಟ್ ಮತ್ತು ಕೋರಿಯರ್ ಮೂಲಕವೂ ಕಳುಹಿಸಲು ರಾಖಿಗಳು ಲಭ್ಯ ಇವೆ ಎಂದು ಸಂಜು ದಶವಂತ ಮಂಗಳೇಶ್ವರಿ ಗಿಫ್ಟ್ ವ್ಯಾಪಾರಿ ಸಂಜು ತಿಳಿಸಿದರು.

---------------

ಕೊಟ್

ಅಕ್ಕ-ತಂಗಿ ಪವಿತ್ರ ಬಂಧನ:

ರಕ್ಷಾ ಬಂಧನ ಅಕ್ಕ-ತಂಗಿ, ಅಣ್ಣ- ತಮ್ಮಂದಿರ ಪವಿತ್ರ ಹಬ್ಬವಾಗಿದೆ. ಹಬ್ಬದ ದಿನ ಅಣ್ಣ- ತಮ್ಮ ಎಲ್ಲೆ ಇದ್ದರೂ ಅಕ್ಕ- ತಂಗಿಯರ ಬಳಿಗೆ ಹೋಗಿ ರಾಖಿ ಕಟ್ಟಿಕೊಳ್ಳುವ ಮತ್ತು ಅಕ್ಕ-ತಂಗಿಯರು ಅಣ್ಣ-ತಮ್ಮಂದಿರ ಬಳಿಗೆ ತೆರಳಿ ರಾಖಿ ಕಟ್ಟುವುದು ಸಂಪ್ರದಾಯ.ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಸಹೋದರರಿಗೆ ಹಾಗೂ ಸಂಬಂಧಿಗಳಿಗೆ ಗ್ರಾಮೀಣ ಭಾಗದ ಸಹೋದರಿಯರು ಅಂಚೆ ಮೂಲಕ ರಾಖಿ ಕಳಿಸುತ್ತಿದ್ದಾರೆ.

ಜನರು ತಮ್ಮ ಇಷ್ಟಕ್ಕೆ ಅನುಗುಣವಾಗಿ ವಿವಿಧ ಬಗೆಯ ರಾಖಿ ಖರೀದಿಸಲು ಮುಗಿ ಬಿದ್ದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ನೂಲಿನಿಂದ ಹಿಡಿದು ಹಲವಾರು ಬಗೆಯ ರಾಖಿಗಳಿವೆ. ₹20ರಿಂದ ₹280ರವರೆಗೆ ಮಾರಾಟ ಆಗುತ್ತಿವೆ. ಮಾರುಕಟ್ಟೆಯಲ್ಲಿ ಈ ಬಾರಿ ಹೆಚ್ಚಿನ ಸರಕು ಬಂದಿದ್ದು, ಒಳ್ಳೆ ಡಿಸೈನ್‌ಗಳು ಹೊಂದಿದ ರಾಖಿಗಳು ಇವೆ. ನೂಲು, ರುದ್ರಾಕ್ಷಿ, ಮುತ್ತು, ಹೂವು ಮತ್ತಿತರ ಆಕಾರದ ರಾಖಿಗಳು ಗಮನ ಸೆಳೆಯುತ್ತಿವೆ. ಮಕ್ಕಳು ಹಾಗೂ ಹಿರಿಯರಿಗಾಗಿ ವಿಭಿನ್ನ ರೀತಿಯ ರಾಖಿಗಳು ಮಾರಾಟಕ್ಕಿವೆ ಎಂದು ಮಂಗಳೇಶ್ವರಿ, ಗಿಫ್ಟ್ ಸೆಂಟರ್ ನ ಸಂಜೀವ ದಶವಂತ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಜಂಪುರ ಸೇರಿ ಜಿಲ್ಲೆಯ ನಾಲ್ಕು ತಾಲೂಕು ಬರ, ಪಟ್ಟಿಯಲ್ಲಿ ಕಡೂರಿಗಿಲ್ಲ ಜಾಗ
ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ 2 ಗ್ರಾಮಸ್ಥರು