ರಾಂ ಅಜೆಕಾರು
ತುಳುನಾಡಿನ ಕರಕುಶಲ ವಸ್ತುಗಳು ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ, ಅದರಲ್ಲೂ ಎಲ್ಲೆಲ್ಲೂ ಪ್ಲಾಸ್ಟಿಕ್ಮಯವಾಗುತ್ತಿರುವ ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಚೆನ್ನುಬೆಟ್ಟಿನ ಪುಟ್ಟ ಹಳ್ಳಿಯ ಮೂವರು ಸಹೋದರರು ಹಿಂದಿನ ಕಾಲದ ಕೌಶಲ್ಯವನ್ನು ಮುಂದುರಿಸಿ ಬೀಳಿನ ಪುಡಾಯಿಗಳನ್ನು ನಿರ್ಮಿಸುವ ಮೂಲಕ ಜೀವನ ನಡೆಸುವ ಜೊತೆಗೆ ತುಳುನಾಡಿನ ಜನಪದ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ.
ಎಳ್ಳಾರೆಯ ಶಂಕರ, ಶೇಖರ ಮತ್ತು ಭಾಸ್ಕರ ನಿರ್ಮಿಸುವ ಈ ಪುಡಾಯಿಗಳು ಕೇವಲ ಗೊಬ್ಬರದ ಬುಟ್ಟಿಗಳಲ್ಲ, ಅದು ತುಳುನಾಡಿನ ಗ್ರಾಮೀಣ ಜೀವನ ಶೈಲಿಯ ಪ್ರತೀಕವಾಗಿ ಉಳಿದಿದೆ.ದಿನ ನಿತ್ಯದ ಕಾಯಕ:
ಮಳೆ ಇರಲಿ, ಬಿಸಿಲು ಇರಲಿ ಇವರ ಶ್ರಮ ಮಾತ್ರ ನಿಲ್ಲದು. ಪ್ರಕೃತಿಯ ಸವಾಲುಗಳನ್ನು ಎದುರಿಸುತ್ತಾ ಅವರು ತಮ್ಮ ಕೌಶಲ್ಯಭರಿತ ಕೆಲಸವನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ. ಕೋಲದ ಋತುವಿನಲ್ಲಿ ಕೋಲಕ್ಕೆ ಬಣ್ಣ ಹಚ್ಚುತ್ತಾರೆ.
ತುಳುನಾಡಿನಲ್ಲಿ ಮಳೆಗಾಲದಲ್ಲಿ ಈ ಪುಡಾಯಿಗಳಿಗೆ ಅಪಾರ ಬೇಡಿಕೆ ಇದೆ. ಗೊಬ್ಬರವನ್ನು ಹೊರಲು, ಹಸುಗಳಿಗೆ ಹುಲ್ಲು ತುಂಬಿಸಿ ತರಲು ಈ ಪುಡಾಯಿಗಳ ಬಳಕೆ ಹೆಚ್ಚು. ಕೆಲವು ಮನೆಗಳಲ್ಲಿ, ಹೋಂ ಸ್ಟೇಗಳಲ್ಲಿ ಅಲಂಕಾರಿಕ ವಸ್ತುಗಳಾಗಿ ಪುಡಾಯಿಗಳನ್ನು ಇಡುತ್ತಿದ್ದಾರೆ. ಆದರೆ ಇತ್ತೀಚೆಗೆ ಈ ಕಲೆ ಮಾಯವಾಗುತ್ತಿರುವುದು ನೋವಿನ ಸಂಗತಿ.ಯುವ ಸಮುದಾಯ ಈ ಕಾಯಕದಲ್ಲಿ ಆಸಕ್ತಿ ತೋರಿಸುತಿಲ್ಲ. ಪರಿಣಾಮ ತುಳುನಾಡಿನ ಈ ಕರಕುಶಲ ವೃತ್ತಿ ಅಳಿವಿನಂಚಿಗೆ ಸಾಗುತ್ತಿದೆ.
। ಶಂಕರ, ಪುಡಾಯಿ ತಯಾರಕರು