ಸರ್ವಧರ್ಮ ಶಾಂತಿಪೀಠದ ಆಶ್ರಮದಲ್ಲಿ ಬುದ್ಧ ಪೂರ್ಣಿಮೆ

KannadaprabhaNewsNetwork |  
Published : May 25, 2024, 12:45 AM IST
ಫೋಟೋ 24ಪಿವಿಡಿ6ಪಾವಗಡ,ಬುದ್ದ ಪೌರ್ಣಮಿ ಅಂಗವಾಗಿ ಆನೇಕ ಮಂದಿ ಬಡ ವೃದ್ದ ಮಹಿಳೆಯರಿಗೆ ಸಿದ್ದಾಪುರ ರಾಮಮೂರ್ತಿ ಸ್ವಾಮೀಜಿ ಸೀರೆ ಹಾಗೂ ಅಗತ್ಯ ನೂತನ ವಸ್ತ್ರಗಳನ್ನು ವಿತರಿಸಿ ಶುಭಕೋರಿದರು.24ಪಿವಿಡಿ7ಪಾವಗಡ,ವೈಶಾಖ ಶುದ್ದ ಹುಣಿಮೆಯ ಅಂಗವಾಗಿ ಒ.ಎಸ್‌.ರಮೇಶ್‌ಬಾಬು ಹಾಗೂ ಅರುಣ ದಂಪತಿಗಳಿಂದ ಪಟ್ಟಣದ ಶಾಂತಿ ಬೃಂದಾವನದಲ್ಲಿ ಶ್ರೀ ಲಕ್ಷ್ಮೀ ಸತ್ಯನಾರಾಯಣಪೂಜೆ ಯಶಸ್ವಿಯಾಗಿ ನೆರೆವೇರಿಸಲಾಯಿತು.ಫೋಟೋ 24ಪಿವಿಡಿ8ಪಾವಗಡ,ಅರ್ಚಕ ನರೇಶ್‌ ಹಾಗೂ ಇತರೆ ಭಕ್ತರ ಸಹಕಾರದ ಮೇರೆಗೆ,ಪಟ್ಟಣದ ಅಪ್‌ಬಂಡೆ ಬಳಿ ಇರುವ ಮಾತೆ ಶ್ರೀ ಕಾಳಿಕಾಂಭದೇ‍ವಿಗೆ ವಿಶೇಷ ಪೂಜೆ ನೆರೆವೇರಿಸಲಾಯಿತು.ಈ ವೇಳೆ ನೂರಾರು ಮಂದಿ ಭಕ್ತರು ಬಾಗಿಯಾಗಿದ್ದರು.       | Kannada Prabha

ಸಾರಾಂಶ

ಬುದ್ಧನ ಸಂದೇಶಗಳು ಸರ್ವಕಾಲಕ್ಕೂ ಅನ್ವಯವಾಗಲಿವೆ. ಬುದ್ಧನು ಸಮಾಜದ ಪರಿವರ್ತನೆ ಹಾಗೂ ಬದುಕಿಗೆ ಮಾದರಿಯಾಗುವ ಆನೇಕ ವಿಚಾರಗಳನ್ನು ಸಾರಿದ್ದಾನೆ. ಪ್ರಕೃತಿ ನಾಶ, ಜೀವಕುಲದ ಹಿಂಸೆ, ದುರಾಸೆ, ಆಸೂಯೆ ಇವೆಲ್ಲಾ ಮನುಷ್ಯನ ವಿನಾಶಕ್ಕೆ ಕಾರಣವಾಗುತ್ತವೆ.

ಕನ್ನಡಪ್ರಭ ವಾರ್ತೆ ಪಾವಗಡ

ಸತ್ಯ, ನ್ಯಾಯ, ನೀತಿ ಎಂಬ ಧರ್ಮವನ್ನು ನಾವು ಪಾಲಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಸಂಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡಬೇಕು. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡರೆ ಜೀವನದಲ್ಲಿ ಶಾಂತಿ ಲಭಿಸುತ್ತದೆ ಎಂದು ಇಲ್ಲಿನ ಸರ್ವಧರ್ಮ ಶಾಂತಿಪೀಠದ ಅಧ್ಯಕ್ಷ ಸಿದ್ದಾಪುರ ರಾಮಮೂರ್ತಿ ಸ್ವಾಮೀಜಿ ಸಲಹೆ ನೀಡಿದರು.

ಬುದ್ಧ ಪೂರ್ಣಿಮೆಯ ಅಂಗವಾಗಿ ಗುರುವಾರ ಪಟ್ಟಣದ ಸರ್ವಧರ್ಮ ಶಾಂತಿಪೀಠದ ಆಶ್ರಮದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಿದ ಬಳಿಕ ಅವರು ಮಾತನಾಡಿದರು.

ಬುದ್ಧನ ಸಂದೇಶಗಳು ಸರ್ವಕಾಲಕ್ಕೂ ಅನ್ವಯವಾಗಲಿವೆ. ಬುದ್ಧನು ಸಮಾಜದ ಪರಿವರ್ತನೆ ಹಾಗೂ ಬದುಕಿಗೆ ಮಾದರಿಯಾಗುವ ಆನೇಕ ವಿಚಾರಗಳನ್ನು ಸಾರಿದ್ದಾನೆ. ಪ್ರಕೃತಿ ನಾಶ, ಜೀವಕುಲದ ಹಿಂಸೆ, ದುರಾಸೆ, ಆಸೂಯೆ ಇವೆಲ್ಲಾ ಮನುಷ್ಯನ ವಿನಾಶನಕ್ಕೆ ಕಾರಣವಾಗುತ್ತವೆ.ಆದ್ದರಿಂದ ಪರೋಪಕಾರ, ಸಂಕಷ್ಟದಲ್ಲಿದ್ದವರಿಗೆ ನೆರವು, ಪರಿಸರ ರಕ್ಷಣೆಯಂತಹ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳುವುದರಿಂದ ನೆಮ್ಮದಿಯ ಬದುಕು ಕಾಣಬಹುದು ಎಂದು ತಿಳಿಸಿಕೊಟ್ಟವನು ಬುದ್ಧ. ಅವನ ಆದರ್ಶ ಹಾಗೂ ತತ್ವಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಿವೆ ಎಂದು ತಿಳಿಸಿ, ಸಮಸ್ತ ಜನತೆಗೆ ಬುದ್ಧ ಪೌರ್ಣಿಮೆಯ ಶುಭಾಶಯ ಕೋರಿದರು. ಅನೇಕ ಬಡ ವೃದ್ಧ ಮಹಿಳೆಯರಿಗೆ ವಸ್ತ್ರಗಳನ್ನು ವಿತರಿಸಿ ಶುಭ ಕೋರಿದರು.

ಒ.ಎಸ್‌.ರಮೇಶ್‌ಬಾಬು ಹಾಗೂ ಅರುಣ ದಂಪತಿಯಿಂದ ಪಟ್ಟಣದ ಶಾಂತಿ ಬೃಂದಾವನದಲ್ಲಿ ಯಶಸ್ವಿಯಾಗಿ ಶ್ರೀ ಲಕ್ಷ್ಮೀ ಸತ್ಯನಾರಾಯಣಸ್ವಾಮಿ ಪೂಜೆ ನೆರವೇರಿಸಲಾಯಿತು.ಅನೇಕ ಗೃಹಣಿಯರು, ಶ್ರೀ ಲಕ್ಷ್ಮೀ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡಿದ್ದು, ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ವೈಶಾಖ ಶುದ್ಧ ಹುಣ್ಣಿಮೆ ಅಂಗವಾಗಿ ಗುರುವಾರ ಪಟ್ಟಣದ ಶ್ರೀ ವೆಂಕಟೇಶ್ವರ ಬಡಾವಣೆಯ ಮಾತೆ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ನೂರಾರು ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌