ವೇದಿಕೆಗಳಿಂದ ಕನ್ನಡ ಕಟ್ಟುವ ಕೆಲಸ ಆಗುವುದಿಲ್ಲ-ಸಂಗನಬಸವ ಸ್ವಾಮೀಜಿ

KannadaprabhaNewsNetwork |  
Published : May 13, 2024, 12:04 AM IST
ಪೊಟೋ ಪೈಲ್ ನೇಮ್ ೧೨ಎಸ್‌ಜಿವಿ೧     ಶಿಗ್ಗಾವಿ  ಪಟ್ಟಣದ ವಿರಕ್ತ ಮಠದಲ್ಲಿ ತಾಲೂಕ ಕಸಾಪ ಹೋಬಳಿ ಕಸಪಗಳ ಸಯುಕ್ತಶ್ರಯದಲ್ಲಿ ಆಯೋಜಿಸಿದ್ದ  ಕನ್ನಡ ಸಾಹಿತ್ಯ ಪರಿಷÀತ್ ೧೧೦ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿದರು.೧೨ಎಸ್‌ಜಿವಿ೧-೧  ಶಿಗ್ಗಾವಿ ಪಟ್ಟಣದ ವಿರಕ್ತ ಮಠದಲ್ಲಿ ತಾಲೂಕ ಕಸಾಪ ಹೋಬಳಿ ಕಸಾÀಪಗಳ ಸಯುಕ್ತಶ್ರಯದಲ್ಲಿ ಆಯೋಜಿಸಿದ್ದ  ಕನ್ನಡ ಸಾಹಿತ್ಯ ಪರಿಷÀತ್ ೧೧೦ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಕನ್ನಡ ಕಟ್ಟುವ ಕೆಲಸ ವೇದಿಕೆಗಳಿಂದ ಆಗುವುದಿಲ್ಲ. ಮನಸ್ಸುಗಳನ್ನು ಕಟ್ಟುವುದರಿಂದ ಕನ್ನಡ ಹೆಮ್ಮರವಾಗಿ ಬೆಳೆಸಬಹುದಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

ಶಿಗ್ಗಾವಿ: ಕನ್ನಡ ಕಟ್ಟುವ ಕೆಲಸ ವೇದಿಕೆಗಳಿಂದ ಆಗುವುದಿಲ್ಲ. ಮನಸ್ಸುಗಳನ್ನು ಕಟ್ಟುವುದರಿಂದ ಕನ್ನಡ ಹೆಮ್ಮರವಾಗಿ ಬೆಳೆಸಬಹುದಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

ಶಿಗ್ಗಾವಿ ಪಟ್ಟಣದ ವಿರಕ್ತ ಮಠದಲ್ಲಿ ತಾಲೂಕು ಕಸಾಪ ಹೋಬಳಿ ಕಸಾಪಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ೧೧೦ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶುದ್ಧ ಮನಸ್ಸಿನಿಂದ ಮಾಡುವ ಕಾರ್ಯಗಳಲ್ಲಿ ಕನ್ನಡ ಕಟ್ಟುವ ಕಾಯಕ ಒಂದಾಗಿದೆ. ಕನ್ನಡ ಕಟ್ಟಿ ಬೆಳೆಸುವುದು ಜೀವನದ ಉದ್ದೇಶವಾಗಿ ನಾವೆಲ್ಲ ಕೆಲಸ ಮಾಡಿ ಮುಂದಿನ ಪೀಳಿಗೆಗಳಿಗೆ ಮತ್ತಷ್ಟು ಸಮೃದ್ಧ ಕನ್ನಡವನ್ನು ಇಟ್ಟು ಹೋಗಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ವಹಿಸಿ ಮಾತನಾಡಿದರು. ಸಾಹಿತ್ಯದ ವಿವಿಧ ಪ್ರಕಾರಗಳನ್ನು ಬೆಳೆಸುವುದು ಸಾಧನೆಯಾಗಿದೆ. ಸಾಹಿತ್ಯ, ಕಲೆ, ಜಾನಪದ ಸೇರಿದಂತೆ ಕನ್ನಡವನ್ನು ಕಟ್ಟಿ ಬೆಳೆಸಬಹುದಾದ ಕ್ಷೇತ್ರಗಳಲ್ಲಿ ಯುವಕರು ಮುಂದೆ ಬರಬೇಕು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಸೆಯಾಗಿ ನಿಲ್ಲಲಿದೆ. ಪಟ್ಟಣ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡವನ್ನು ಹಮ್ಮಿಕೊಂಡು ಕನ್ನಡವನ್ನು ಕಟ್ಟುವ ಕಾರ್ಯ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಚನ್ನಪ್ಪ ಕುನ್ನೂರ ಶಾಲೆಯ ಪ್ರಾಚಾರ್ಯ ಡಾ. ನಾಗರಾಜ್ ದ್ಯಾಮನಕೊಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು, ಇತಿಹಾಸ ಕುರಿತು ಉಪನ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ಮಲ್ಲಣ್ಣ ರಾಮಗೇರಿ, ಸಿ.ಡಿ. ಯತ್ನಳ್ಳಿ, ಎಂ.ಬಿ. ಹಳೆಮನೆ, ಭಾರತಿ ಚಬ್ಬಿ, ಲತಾ ನಿಡಗುಂದಿ, ಎ.ಕೆ. ಅಧ್ವಾನಿಮo, ಶಂಭು ಕೇರಿ ರಮೇಶ್, ದರ್ಶನ್, ಸುಮಂಗಲ ಅತ್ತಿಗೆರೆ, ಡಿ.ಐ. ಅಂಗಡಿ, ಚೆನ್ನಪ್ಪ ಚೆನ್ನಣ್ಣನವರ್. ಎಂ.ಎನ್. ಬಾರ್ಕೆರ್, ಶಕುಂತಲಾ ಕೊನ್ನವರ್, ಎಸ್.ಎಂ. ಹಾದಿಮನಿ, ಪ್ರತಿಭಾ ಗಾಂಜೀ, ಅಬ್ದುಲ್ ರಜಾಕ್ ತಹಸೀಲ್ದಾರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಆರ್.ಎಸ್. ರಟ್ಟಳ್ಳಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಬಂಕಾಪೂರ ಹೋಬಳಿ ಕಸಾಪ ಅಧ್ಯಕ್ಷ ಎ.ಕೆ. ಅದ್ವಾನಿಮಠ ವಂದಿಸಿದರು.

ಬಸವರಾಜ್ ಶಿಗ್ಗಾವಿ ಹಾಗೂ ಶರೀಫ್ ಮಾಕಪ್ಪನವರ ಕಲಾ ಬಳಗ ಜಾನಪದ ಗೀತೆಗಳನ್ನು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ