ಕನ್ನಡಪ್ರಭ ವಾರ್ತೆ ಹಳೇಬೀಡು
ಈ ಸಂದರ್ಭದಲ್ಲಿ ಬೇಲೂರು ಕ್ಷೇತ್ರ ಶಾಸಕ ಎಚ್. ಕೆ. ಸುರೇಶ್ ಮಾತನಾಡುತ್ತ, ಈ ಹಳ್ಳಿಗೆ ಸೇರಿದ ಸುಮಾರು ಹತ್ತು ಹದಿನೈದು ಹಳ್ಳಿಗಳ ಸೇರ್ಪಡೆಯಾದ ದೊಡ್ಡ ಕೇಂದ್ರ. ಈ ಸ್ಥಳದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಹೋಗುತ್ತಿದ್ದರು. ಈ ಭಾಗದ ರೈತಾಪಿ ಜನರಿಗೆ ತುಂಬಾ ತೊಂದರೆ ಆಗುತ್ತಿತ್ತು. ಅದರ ಜೊತೆಗೆ ಆಸ್ಪತ್ರೆಗೆ ಹೋಗುವ ಜನತೆಗೆ ತೊಂದರೆಯಾಗಿತ್ತು. ಸ್ವಂತ ಆಟೋ ಮಾಡಿಕೊಂಡು ಹೋಗಬೇಕಾಗಿತ್ತು. ಆದ ಕಾರಣ ಸ್ಥಳೀಯ ಮುಖಂಡರು ಬಂದು ನನ್ನನ್ನು ಸಂಪರ್ಕಿಸಿ ಈ ಸ್ಥಳದಲ್ಲಿ ಕೋರಿಕೆ ನಿಲ್ದಾಣ ಕೇಳಿದರು. ತಕ್ಷಣವೇ ಚಿಕ್ಕಮಗಳೂರು ವಿಭಾಗದ ವ್ಯವಸ್ಥಾಪಕರೊಂದಿಗೆ ಮಾತನಾಡಿದಾಗ ತಕ್ಷಣವೇ ಆದೇಶವನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಳೇಬೀಡಿನ ಟ್ರಾಫಿಕ್ ಅಧಿಕಾರಿ ಅರಣ್ ಕುಮಾರ್ ಹಾಗೂ ಪಕ್ಷದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.