ಜೋಡಿ ತಿಪ್ಪನಹಳ್ಳಿಯಲ್ಲಿ ಕೋರಿಕೆ ಮೇರೆಗೆ ಬಸ್ ನಿಲುಗಡೆ

KannadaprabhaNewsNetwork |  
Published : Sep 03, 2024, 01:33 AM IST
2ಎಚ್ಎಸ್ಎನ್10 : ಜೋಡಿ ತಿಪ್ಪನಹಳ್ಳಿಯಲ್ಲಿ ಕೋರಿಕೆ ಮೇರಿಗೆ ಬಸ್ ನಿಲ್ದಾಣದಲ್ಲಿ ಬಸ್‌ ನಿಲುಗಡೆ ಮಾಡಿರುವುದು. | Kannada Prabha

ಸಾರಾಂಶ

ಜೋಡಿ ತಿಪ್ಪನಹಳ್ಳಿಯಲ್ಲಿ ನಿಗಮದ ಚಿಕ್ಕಮಗಳೂರು ವಿಭಾಗೀಯ ವ್ಯವಸ್ಥಾಪಕರ ಆದೇಶದ ಮೇರೆಗೆ ಕೋರಿಕೆಯ ನಿಲುಗಡೆ ನೀಡಲಾಗುತ್ತಿದೆ. ಈ ಹಳ್ಳಿಗೆ ಸೇರಿದ ಸುಮಾರು ಹತ್ತು ಹದಿನೈದು ಹಳ್ಳಿಗಳ ಸೇರ್ಪಡೆಯಾದ ದೊಡ್ಡ ಕೇಂದ್ರ. ಈ ಸ್ಥಳದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಹೋಗುತ್ತಿದ್ದರು. ಈ ಭಾಗದ ರೈತಾಪಿ ಜನರಿಗೆ ತುಂಬಾ ತೊಂದರೆ ಆಗುತ್ತಿತ್ತು. ಅದರ ಜೊತೆಗೆ ಆಸ್ಪತ್ರೆಗೆ ಹೋಗುವ ಜನತೆಗೆ ತೊಂದರೆಯಾಗಿತ್ತು. ಸ್ವಂತ ಆಟೋ ಮಾಡಿಕೊಂಡು ಹೋಗಬೇಕಾಗಿತ್ತು. ಆದ ಕಾರಣ ಸ್ಥಳೀಯ ಮುಖಂಡರು ಬಂದು ನನ್ನನ್ನು ಸಂಪರ್ಕಿಸಿ ಈ ಸ್ಥಳದಲ್ಲಿ ಕೋರಿಕೆ ನಿಲ್ದಾಣ ಕೇಳಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಸಮೀಪದ ರಾಷ್ಟ್ರೀಯ ಹೆದ್ದಾರಿ ೨೩೪ ಕ್ಕೆ ಹೊಂದಿಕೊಂಡಿರುವ ಜೋಡಿ ತಿಪ್ಪನಹಳ್ಳಿಯಲ್ಲಿ ನಿಗಮದ ಚಿಕ್ಕಮಗಳೂರು ವಿಭಾಗೀಯ ವ್ಯವಸ್ಥಾಪಕರ ಆದೇಶದ ಮೇರೆಗೆ ಕೋರಿಕೆಯ ನಿಲುಗಡೆ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಬೇಲೂರು ಕ್ಷೇತ್ರ ಶಾಸಕ ಎಚ್. ಕೆ. ಸುರೇಶ್ ಮಾತನಾಡುತ್ತ, ಈ ಹಳ್ಳಿಗೆ ಸೇರಿದ ಸುಮಾರು ಹತ್ತು ಹದಿನೈದು ಹಳ್ಳಿಗಳ ಸೇರ್ಪಡೆಯಾದ ದೊಡ್ಡ ಕೇಂದ್ರ. ಈ ಸ್ಥಳದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಹೋಗುತ್ತಿದ್ದರು. ಈ ಭಾಗದ ರೈತಾಪಿ ಜನರಿಗೆ ತುಂಬಾ ತೊಂದರೆ ಆಗುತ್ತಿತ್ತು. ಅದರ ಜೊತೆಗೆ ಆಸ್ಪತ್ರೆಗೆ ಹೋಗುವ ಜನತೆಗೆ ತೊಂದರೆಯಾಗಿತ್ತು. ಸ್ವಂತ ಆಟೋ ಮಾಡಿಕೊಂಡು ಹೋಗಬೇಕಾಗಿತ್ತು. ಆದ ಕಾರಣ ಸ್ಥಳೀಯ ಮುಖಂಡರು ಬಂದು ನನ್ನನ್ನು ಸಂಪರ್ಕಿಸಿ ಈ ಸ್ಥಳದಲ್ಲಿ ಕೋರಿಕೆ ನಿಲ್ದಾಣ ಕೇಳಿದರು. ತಕ್ಷಣವೇ ಚಿಕ್ಕಮಗಳೂರು ವಿಭಾಗದ ವ್ಯವಸ್ಥಾಪಕರೊಂದಿಗೆ ಮಾತನಾಡಿದಾಗ ತಕ್ಷಣವೇ ಆದೇಶವನ್ನು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಳೇಬೀಡಿನ ಟ್ರಾಫಿಕ್ ಅಧಿಕಾರಿ ಅರಣ್ ಕುಮಾರ್ ಹಾಗೂ ಪಕ್ಷದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ