ನರ್ತನ ಲಹರಿಯಲ್ಲಿ ಗಮನ ಸೆಳೆದ ಚಿಣ್ಣರ ನೃತ್ಯಗಳು

KannadaprabhaNewsNetwork |  
Published : Jan 08, 2025, 12:16 AM IST
81 | Kannada Prabha

ಸಾರಾಂಶ

'ಪ್ರಕೃತಿ ಮತ್ತು ಧರ್ಮ' ಕುರಿತು ವಿಶ್ವೇಶ್ವರನಗರದ ಮಹರ್ಷಿ ಪಿಯು ಕಾಲೇಜು ಪ್ರಾಂಶುಪಾಲ ಎಂ. ಮಹಾದೇವಸ್ವಾಮಿ ಪ್ರವಚನ

ಕನ್ನಡಪ್ರಭ ವಾರ್ತೆ ಮೈಸೂರು

ನೃತ್ಯ ವಿದ್ಯಾಪೀಠ ಅಕಾಡೆಮಿ ಆಫ್‌ ಕ್ಲಾಸಿಕಲ್‌ ಡ್ಯಾನ್ಸ್‌ ಅಂಡ್‌ ಇಂಡಿಯನ್‌ ಆರ್ಟ್ಸ್‌ ವತಿಯಿಂದ ನರ್ತನ ಲಹರಿ- 2025 ಹಾಗೂ ಶಿವಶಕ್ತಿ ಕಾರ್ಯಕ್ರಮವನ್ನು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮಂಗಳವಾರ ಜರುಗಿತು. ಚಿಣ್ಣರು ನಡೆಸಿಕೊಟ್ಟ ನೃತ್ಯಗಳು ಸಭಿಕರನ್ನು ರಂಜಿಸಿದವು.

ಸಿ.ಎನ್‌. ಅನಿತಾ ಅವರ ನೃತ್ಯ ಸಂಯೋಜನೆ ಹಾಗೂ ಮಾರ್ಗದರ್ಶನದಲ್ಲಿ ಧರ್ಮ ಬೋಧನೆ ಮಾಲಿಕೆ- 9 ನಡೆಯಿತು.

''''''''ಪ್ರಕೃತಿ ಮತ್ತು ಧರ್ಮ'''''''' ಕುರಿತು ವಿಶ್ವೇಶ್ವರನಗರದ ಮಹರ್ಷಿ ಪಿಯು ಕಾಲೇಜು ಪ್ರಾಂಶುಪಾಲ ಎಂ. ಮಹಾದೇವಸ್ವಾಮಿ

ಪ್ರವಚನ ನೀಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಯಾಗಿದ್ದರು.

ನೃತ್ಯ ಗಂಗೋತ್ರಿ ಸ್ಕೂಲ್‌ ಆಫ್‌ ಡ್ಯಾನ್ಸ್‌ ನ ನಿರ್ದೇಶಕಿ ಪ್ರೀತಿ ವೆಂಕಟರಾಮು, ಹೊಳೆ ನರಸೀಪುರದ ಸ್ವರ್ಣ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಶೋಭಾ ಬಾಲಕೃಷ್ಣ ಮತ್ತು ಎಲ್‌ ಅಂಡ್‌ ಟೆಕ್ನಾಲಜಿಯ ವ್ಯವಸ್ಥಾಪಕಿ ಜಿ.ಕೆ. ಕಮಲಾ ವಿಶೇಷ ಆಹ್ವಾನಿತರಾಗಿದ್ದರು.

ಸಂಸ್ಥೆಯ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಹಂತದ ವಿದ್ಯಾರ್ಥಿಗಳು ನರ್ತನ ಲಹರಿ-205 ದಾಸ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಸಿ.ಎನ್. ಅನಿತಾ ಅವರೊಂದಿಗೆ ಎನ್‌. ಕೀರ್ತನಾ, ನಿಶ್ಚಿತಾ ಕೃಷ್ಣ ವಿಶೇಷ ಭರತನಾಟ್ಯ ಪ್ರದರ್ಶಿಸಿದರು.ನಯನಾ ನಾಗರಾಜು- ನಟುವಾಂಗ, ಎಸ್‌. ರಕ್ಷಿತಾ- ಹಾಡುಗಾರಿಕೆ, ಜಿ.ಟಿ. ಸ್ವಾಮಿ- ಮೃದಂಗ ಮತ್ತು ತಾಂಡವಮೂರ್ತಿ- ಪಿಟೀಲು ಸಾಥ್‌ ನೀಡಿದರು. ಶ್ರೀ ರಾಜೇಶ್ವರ ವಸ್ತ್ರಾಲಂಕಾರದ ಪ್ರಸಾದನ, ಮಧು ಮಳವಳ್ಳಿ ಅವರ ಬೆಳಕಿನ ವಿನ್ಯಾಸ ಇತ್ತು.

ಎಂ.ಕೆ. ಶೋಭಾ, ಎಸ್. ಅನಘಾ, ವೈಷ್ಣವಿ ಎಲ್. ಅರಸ್‌ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ