ಕಟಪಾಡಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ನೂತನ ಮಂದಿರ ನಿರ್ಮಾಣ
ಇಲ್ಲಿನ ಕಟಪಾಡಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದವು ೪೦ನೇ ವರ್ಷದ ಶಬರಿಮಲೆ ಯಾತ್ರೆ ಪೂರೈಸಲಿರುವ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಸುರೇಶ್ ಗುರುಸ್ವಾಮಿ ಮಾರ್ಗದರ್ಶನದಲ್ಲಿ ಇಲ್ಲಿನ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್ ನಗರದಲ್ಲಿ ಈ ನೂತನ ಅಮೃತ ಶಿಲಾಮಯ ಮಂದಿರಕ್ಕೆ ಅಯ್ಯಪ್ಪಸ್ವಾಮಿಯ ವಿಗ್ರಹ ಕೆತ್ತನೆ ಜವಾಬ್ದಾರಿಯನ್ನು ಅಯೋಧ್ಯೆಯ ರಾಮಲಲ್ಲನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ವಹಿಸಿರುವುದು ವಿಶೇಷ.
ಇಲ್ಲಿನ ಪಾಪನಾಶಿನಿ ನದಿ ತೀರನಲ್ಲಿ ಉದ್ಯಮಿ ರಿಶಾನ್ ಟಿ. ದಾನವಾಗಿ ನೀಡಿರುವ ೩೦ ಸೆಂಟ್ಸ್ ನಿವೇಶನದಲ್ಲಿ ಸುಮಾರು ೬ ಕೋಟಿ ರು. ವೆಚ್ಚದಲ್ಲಿಈ ಮಂದಿರ ನಿರ್ಮಾಣಗೊಳ್ಳಲಿದೆ. ಕರಾವಳಿಯಲ್ಲೇ ಪ್ರಪ್ರಥಮವಾಗಿ ಮಕರಾನ್ ಅಮೃತಶಿಲೆಯಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗಳ್ಳಲಿರುವ ಮಂದಿರವು ಮುಂಬರುವ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.
ದಕ್ಷಿಣ ಭಾರತದ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನೊಳಗೊಂಡಿರುವ ಈ ಮಂದಿರಕ್ಕೆ ಉತ್ತರ ಭಾರತದ ರಾಜಸ್ಥಾನ ಸೋಮಪುರದ 3 ತಲೆಮಾರುಗಳ ಶಿಲ್ಪಿಗಳ ಕುಟುಂಬದ ವಸಂತ ಕುಮಾರ್ ಶಾಂತಿಲಾಲ್ ತಂಡ ಮಕರಾನ್ ಅಮೃತ ಶಿಲೆಯ ಕೆತ್ತನೆ ಕೆಲಸ ಆರಂಭಿಸಿದ್ದಾರೆ.
ಎರಡನೇ ಅಯ್ಯಪ್ಪ ವಿಗ್ರಹ !