ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷದ ಹಿಂದಿನ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಜಾತಿ ಗಣತಿ ವರದಿಯನ್ನು ಕೊಟ್ಟಿದ್ದಾರೆ. ನಾವು ವೀರ ಶೈವ ಲಿಂಗಾಯತರು ರಾಜ್ಯದಲ್ಲಿ ಕಡಿಮೆ ಇಲ್ಲ. ಸುಮಾರು 2 ಕೋಟಿ ಜನರಿದ್ದೇವೆ. ಜಾತಿ ಸಮೀಕ್ಷೆ ವರದಿ ಇನ್ನೂ ಸ್ವೀಕಾರ ಮಾಡಿದ್ದಾರಷ್ಟೇ. ಅದನ್ನು ಪಾಸ್ ಮಾಡಿಲ್ಲ ಎಂದರು.
ಜಾತಿ ಗಣತಿಯನ್ನು ತಂದು ಕೊಟ್ಟಿದ್ದಾರೆ, ಇವರು ಪಡೆದಿದ್ದಾರಷ್ಟೇ. ನಮ್ಮದು ವಿರೋಧವಂತೂ ಇದ್ದೇ ಇದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಮುಂದಿನ ನಡೆಯ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮಹಾಸಭಾದಿಂದಲೇ ಜಾತಿ ಸಮೀಕ್ಷಾ ವರದಿ ಮಾಡಿಸುತ್ತೇವೆ. ನಮ್ಮಲ್ಲಿ ಹಣ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ. ನಾವೇ ಹೊಸದಾಗಿ ಗಣತಿ ಮಾಡಿಸುತ್ತೇವೆ ಎಂದು ಅವರು ಸರ್ಕಾರದ ಕ್ರಮಕ್ಕೆ ಅವರು ಸೆಡ್ಡು ಹೊಡೆದರು.ಒಂದು ವೇಳೆ ರಾಜ್ಯ ಸರ್ಕಾರವೇನಾದರೂ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರೆ ಮಹಾಸಭಾದಿಂದ ನಾವೂ ಹೋರಾಟ ಮಾಡುತ್ತೇವೆ. ಒಕ್ಕಲಿಗರು, ಬ್ರಾಹ್ಮಣರು, ವೀರಶೈವ ಲಿಂಗಾಯತರು ಸೇರಿದಂತೆ ಎಲ್ಲರ ವಿರೋಧವೂ ಇದೆ. ಜಾತಿ ಗಣತಿ ವರದಿ ಇನ್ನೂ ಕ್ಯಾಬಿನೆಟ್ಗೆ ಬಂದಿಲ್ಲ. ಅದು ಬಂದಾಗ ನೋಡೋಣ ಎನ್ನುವ ಮೂಲಕ ಜಾತಿ ಗಣತಿ ವರದಿಗೆ ಮಹಾಸಭಾದ ತೀವ್ರ ವಿರೋಧವಿದೆಯೆಂಬ ಸಂದೇಶವನ್ನು ಅವರು ಸಾರಿದರು.