ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ನಾವು ಎಲ್ಲರೂ ಒಂದೇ ಎಂಬ ಭಾವ ಮನಸ್ಸಿನಲ್ಲಿ ಬಂದರೆ ವಿಶ್ವವವೇ ನಮ್ಮ ಬಂಧು ಆಗುತ್ತದೆ. ವಿಶ್ವದಲ್ಲಿರುವ ಎಲ್ಲರೂ ನಮ್ಮ ಬಂಧುಗಳಾಗುತ್ತಾರೆ. ಎಲ್ಲರೂ ಸೇರಿ ಮಹಾಮಹಿಮಾ ಪುರುಷ ಮಹಾಲಿಂಗೇಶ್ವರರ ಜಾತ್ರೆಯನ್ನು ಅದ್ಧೂರಿಯಿಂದ ಆಚರಣೆ ಮಾಡಿ ಎಂದ ಅವರು, ಸೆ.17ರಂದು ಮಹಾಜಟೋತ್ಸವ, 18 ರಂದು ತುಂಬಿದ ತೇರು, 19 ರಂದು ಮರು ರಥೋತ್ಸವ ಮತ್ತು 20 ಜಂಗೀ ನಿಕಾಲಿ ಕುಸ್ತಿಗಳು ಹೀಗೆ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ದಿನ ಶಾಂತಿ ಕಾಪಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪಿ.ಎಸ್ ಐ ಮಧು ಎಲ್. ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಹಿರಿಯರಾದ ಲಕ್ಷ್ಮಣ ಗೌಡ ಪಾಟೀಲ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಹೆಸ್ಕಾ ಅಧಿಕಾರಿ ರಾಜು ಭಾಗೋಜಿ, ಲಕ್ಕಪ್ಪ ಚಮಕೇರಿ, ಜನ್ನಪ್ಪಣ್ಣ ಪಟ್ಟಣಶೆಟ್ಟಿ, ಈರಪ್ಪ ದಿನ್ನಿಮನಿ, ಅರವಿಂದ ಮಾಲಬಸರಿ, ಅಶೋಕ ಅಂಗಡಿ, ಕೃಷ್ಣಗೌಡ ಪಾಟೀಲ, ಹನಮಂತ ಬುರುಡ, ರವಿ ಕುಳ್ಳೋಳ್ಳಿ, ಹನಮಂತ ಬಡಿಗೇರ, ಪ್ರಕಾಶ ಜೀರಗಾಳ, ಸುನೀಲಗೌಡ ಪಾಟೀಲ, ಸಂಜು ಅಂಗಡಿ, ಮಾನಿಂಗಪ್ಪ ತಟ್ಟಿಮನಿ, ಪಾರುಖ ಪಕಾಲಿ, ಪೊಲೀಸ ಸಿಬ್ಬಂದಿ ಜೆ.ಜಿ ಪಾಟೀಲ ಸೇರಿದಂತೆ ಹಲವರು ಇದ್ದರು.---
ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ
ಜಾತ್ರೆಯ 3 ದಿನಗಳು ಬಹಳ ಜನದಟ್ಟನೆಯಿರುವುದರಿಂದ ಮಹಾಲಿಂಗೇಶ್ವರ ದೇವಸ್ಥಾನ, ನಡುಚೌಕಿ ಹೀಗೆ ಇನ್ನೂ ಹಲವಾರು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಸಾಧ್ಯವಾದಷ್ಟು ಪುರಸಭೆಯವರು ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಅಂತಹ ಅವಘಡಗಳು ಸಂಭವಿಸುವ ಸೂಚನೆ ಬಂದರೆ ಕೂಡಲೇ ಠಾಣೆಗೆ ತಿಳಿಸಬೇಕು. ಕಳ್ಳರು ಕಾಕರುಗಳ ಬಗ್ಗೆ ಸಂದೇಹ ಬಂದರೆ ಠಾಣೆಗೆ ತಿಳಿಸಿ ಸಹಕರಿಸಬೇಕು. ಎಲ್ಲರೂ ಒಟ್ಟಾಗಿ ದುಡಿದರೆ ಮಾತ್ರ ಜಾತ್ರೆಯೂ ಅತೀ ಸಂತೋಷದಿಂದ ಜರುಗಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ಠಾಣಾಧಿಕಾರಿ ಕಿರಣ ಸತ್ತಿಗೇರಿ ತಿಳಿಸಿದರು.