ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆಯಾ ಇಲಾಖೆಗಳ ಅಧಿಕಾರಿಗಳು ಒಂದೊಂದು ಜವಾಬ್ದಾರಿ ವಹಿಸಿಕೊಳ್ಳಬೇಕು. ಸಣ್ಣಪುಟ್ಟ ತಪ್ಪುಗಳು ಸಹ ನಡೆಯದಂತೆ ಎಲ್ಲರೂ ಗಮನವಹಿಸಿ ಕೆಲಸ ಮಾಡೋಣ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು ಎಂದರು.800 ಶಾಲಾ ಮಕ್ಕಳಿಗೆ ಅಲ್ಪೋಪಹಾರದ ವ್ಯವಸ್ಥೆ, ಶಾಮಿಯಾನ, ವಿವಿಧ ಇಲಾಖೆಗಳು, ಕ್ಷೇತ್ರಗಳಲ್ಲಿ ಸಾಧಿಸಿದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳ ಸಿಬ್ಬಂದಿ ಬೆಳಗ್ಗೆ 8:45ರೊಳಗಾಗಿ ತಮ್ಮ ತಮ್ಮ ಕಚೇರಿಗಳ ಧ್ವಜಾರೊಹಣ ನೆರವೇರಿಸಿ, ತಾಲೂಕು ಧ್ವಜಾರೋಹಣಕ್ಕೆ ಆಗಮಿಸಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ಎ.ಎಸ್.ಮುಜಾವರ ಮಾತನಾಡಿ, ಕಳೆದ 3-4 ಬಾರಿ ಶಾಮಿಯಾನ ಜವಾಬ್ದಾರಿ ನಮಗೆ ಹಾಗೂ ಅರಣ್ಯ ಇಲಾಖೆಯವರಿಗೆ ವಹಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯವರು ಸರಿಯಾಗಿ ಇದಕ್ಕೆ ಸ್ಪಂದಿಸಲಿಲ್ಲ. ಆದ್ದರಿಂದ ಈ ಬಾರಿ ಆಯಾ ಇಲಾಖೆಗಳಿಗೆ ಒಂದೊಂದು ಜವಾಬ್ದಾರಿ ವಹಿಸಿ ಅಂತಾ ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಆನಂದ ಗೌಡರ, ಉಪನೊಂದಣಾಧಿಕಾರಿ ಮಹಾಂತೇಶ ಗಾಣಿಗೇರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಳ್ಳಿಮಠ, ನೀರವಾರಿ ಇಲಾಖೆಯ ಮಂಜುನಾಥ ತಳವಾರ, ಬಾಲಕರ ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ, ಪೊಲೀಸ್ ಇಲಾಖೆಯ ಕಲಾಲ, ಶಿಕ್ಷಣ ಇಲಾಖೆಯ ಉಂಕಿ, ಜ್ಯೋತಿ ಆಲೂರ, ಹೆಸ್ಕಾಂ, ಗೃಹ ರಕ್ಷಕ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.