ಈದ್ ಮಿಲಾದ್ ಸಂಭ್ರಮ: ಪ್ರವಾದಿ ಪೈಗಂಬರರ ಜನ್ಮದಿನ

KannadaprabhaNewsNetwork |  
Published : Aug 27, 2026, 01:30 AM IST
ಈದ್  | Kannada Prabha

ಸಾರಾಂಶ

ನಗರದ ಜಾಮಿಯಾ ಮಸೀದಿಯಿಂದ ಆಜಾದ್ ಚೌಕದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಮೆರವಣಿಗೆಯ ಮೂಲಕ ಸಾಗಿ ಕೋಲಾರ ವೃತ್ತದವರೆಗೆ ಹೊರಟು ನಂತರ ಬಾಗೇಪಲ್ಲಿ ವೃತ್ತದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಬಾಗೇಪಲ್ಲಿ ವೃತ್ತದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ । ನಾವೆಲ್ಲರೂ ಎಲ್ಲ ಮತಗಳನ್ನು ಗೌರವಿಸಿ ಬಾಳಬೇಕು: ಗೌಸ್ ಪಾಷಾ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಹಜರತ್ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.

ನಗರದ ಜಾಮಿಯಾ ಮಸೀದಿಯಿಂದ ಆಜಾದ್ ಚೌಕದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಮೆರವಣಿಗೆಯ ಮೂಲಕ ಸಾಗಿ ಕೋಲಾರ ವೃತ್ತದವರೆಗೆ ಹೊರಟು ನಂತರ ಬಾಗೇಪಲ್ಲಿ ವೃತ್ತದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಗೌಸ್ ಪಾಷಾ ಮಾತನಾಡಿ, ಭಾವೈಕ್ಯತೆಯ ನಾಡು ನಮ್ಮ ಭಾರತದೇಶವಾಗಿದ್ದು ಇಲ್ಲಿ ನಾವೆಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು ಒಳ್ಳೆಯ ಸಂಬಂಧ, ಸಹಬಾಳ್ವೆಯೊಂದಿಗೆ ಜೀವನ ನಡೆಸುವುದು ನಮ್ಮ ನೆಲೆಯ ಮಹತ್ವದ ಗುಣವಾಗಿದ್ದು ಅದರಂತೆ ನಾವೆಲ್ಲರೂ ಎಲ್ಲ ಮತಗಳನ್ನು ಗೌರವಿಸಿ ಬಾಳಬೇಕೆಂದರು.

ಪ್ರವಾದಿ ಮಹಮ್ಮದ್ ಪೈಗಂಬರ್ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಾಂತಿಯ ಹಾದಿಯಲ್ಲಿ ಸಾಗಿಸುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದರು. ಹಿಂದೂಗಳು, ಮುಸ್ಲಿಮರು ಸಹೋದರರಿದ್ದಂತೆ. ನಾವೆಲ್ಲರೂ ಒಂದಾಗಿ ಬಾಳುವುದರ ಮೂಲಕ ಹಬ್ಬ ಆಚರಿಸಬೇಕೆಂದು ನುಡಿದರು.

ಪ್ರವಾದಿ ಮುಹಮ್ಮದ್ ಅವರು ಬಡವರ ಹಾಗೂ ಹಸಿವೆ ಹೆಚ್ಚಿನ ಮಹತ್ವ ನೀಡಿದ ಕಾರಣ ಹಬ್ಬದಂದು ಅನ್ನ ಸಂತರ್ಪಣೆ ಮಾಡುವುದು ಸಂಪ್ರದಾಯ.ಉಳ್ಳವರು ಮಸೀದಿಗಳಲ್ಲಿ ಊಟ ಮಾಡಿಸುವುದು ಹಾಗೂ ಬಡವರಿಗೆ ಬಟ್ಟೆ, ನಗದು ದಾನ ಮಾಡುವ ಸಂಪ್ರದಾಯವೂ ಇದೆ. ಅವರ ಅನುಯಾಯಿ ಮುಸ್ಲಿಮರೆಲ್ಲರೂ ಈ ಸಂಪ್ರದಾಯ ಪಾಲನೆ ಮಾಡುತ್ತಾ ಬಂದಿದ್ದಾರೆ

ಹಬ್ಬದ ಅಂಗವಾಗಿ ನಗರದ ಹಲವು ಬೀದಿಗಳು ಹಾಗೂ ಮಸೀದಿಗಳ ಸಂಪರ್ಕಿಸುವ ರಸ್ತೆಯನ್ನು ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.ಪ್ರವಾದಿಯವರನ್ನು ಗೌರವಿಸುವ ಬರಹಗಳನ್ನು ದೀಪದ ಬೆಳಕಿನಲ್ಲಿ ವಿನ್ಯಾಸಗೊಳಿಸಲಾಗಿತ್ತು. ಮೆರವಣಿಗೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

ಜಾಮಿಯಾ ಮಸೀದಿ ಕಮಿಟಿಯ ಎಲ್ಲಾ ಸದಸ್ಯರು ಸೇರಿದಂತೆ ನಗರ ಭಾಗದ ಎಲ್ಲ ಮಸೀದಿಗಳ ಮುಖ್ಯಸ್ಥರು, ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ಚಿತ್ರಶೀರ್ಷಿಕೆ 1 ಮತ್ತು 2: ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಚಿತ್ರಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು