ಕನ್ನಡಪ್ರಭ ವಾರ್ತೆ ವಿಜಯಪುರದೇಶದಲ್ಲಿ ಕಳೆದ ೧೦ ವರ್ಷಗಳಿಂದ ಜನರಿಗೆ ಸುಳ್ಳು ಭರವಸೆಗಳ ಸರಮಾಲೆ ನೀಡಿ, ಅಧಿಕಾರದಲ್ಲಿರುವ ಕೇಂದ್ರದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದೀಗ ಜನರು ಅರ್ಥೈಸಿಕೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಮತದಾರರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಇಂಡಿಯಾ ಒಕ್ಕೂಟ ಬೆಂಬಲಿಸಲಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ೧೦೦ಕ್ಕೆ ನೂರರಷ್ಟು ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಸಂಸದರು ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಯಾರ ಕೈಗೂ ಸಿಗದೆ ತಮ್ಮಷ್ಟಕ್ಕೆ ತಾವೇ ರಾಜಕಾರಣ ಮಾಡುತ್ತಿದ್ದು, ಜಿಲ್ಲೆಯ ಜನ ಈ ಬಾರಿ ಅವರ ವಿರುದ್ಧ ಮತದಾನ ಮಾಡಲಿದ್ದು, ಅವರ ಸೋಲು ಶತಸಿದ್ಧ ಎಂದು ಹೇಳಿದರು.ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಬ್ಬೀರ ಜಾಗಿರದಾರ ಮಾತನಾಡಿದರು. ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್, ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಮಹ್ಮದರಫಿಕ್ ಟಪಾಲ್, ಮಾಜಿ ಬಿಡಿಎ ಅಧ್ಯಕ್ಷ ಆಜಾದ್ ಪಟೇಲ್, ಡಿಸಿಸಿ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಮಾಜಿ ವಕ್ಫ್ ಅಧ್ಯಕ್ಷ ಉಸ್ಮಾನ್ ಪಟೇಲ್, ರಾಜ್ಯ ಕಾರ್ಯದರ್ಶಿ ಎಂ.ಎ. ಖತೀಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐ.ಎಂ. ಇಂಡಿಕರ, ಪರ್ವೇಜ್ ಚಟ್ಟರಕಿ, ಅಬ್ದುಲ್ ಜಾನವೇಕರ, ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಅಹ್ಮದ ಬಕ್ಷಿ, ಜಮೀರ್ಅಹ್ಮದ ಬಾಂಗಿ, ಅಬ್ದುಲ್ರಜಾಕ್ ಹೊರ್ತಿ, ಸದ್ದಾಂ ನಾಡೆವಾಲೆ, ಶಪೀಕ ಮನಗೂಳಿ, ಮಹ್ಮದರಫೀಕ್ ಕಾಣೆ, ಅಲ್ತಾಫ್ ಇಟಗಿ, ಮುಬಿನ್ ಶೇಖ್, ಕೈಸರ್ ಇನಾಮದಾರ, ರಾಜು ಚವ್ಹಾಣ, ಅಪ್ಪು ಪೂಜಾರಿ, ರಾಜು ಜಾಧವ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ಪೀರಾ ಜಮಖಂಡಿ ಇತರರು ಇದ್ದರು.