- ಸಿಜಿಕೆ ಪ್ರಶಸ್ತಿ ಪ್ರದಾನ- ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರಪ್ಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಬೆಂಗಳೂರಿನ ಕರ್ನಾಟಕ ರಂಗ ಪರಿಷತ್ತು, ಕೂಲಂಬಿಯ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಿಜಿಕೆ ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಸವಣ್ಣ ಅವರನ್ನು ಸರ್ಕಾರ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಾಗ ರಾಜ್ಯದಲ್ಲಿ ಹೆಚ್ಚು ಚರ್ಚೆಗಳಾಗಲಿ, ಸಂತೋಷವಾಗಲಿ ಕೇಳಿಬರಲಿಲ್ಲ. ಆದರೆ, ಬಸವಣ್ಣನವರನ್ನು ನಿಜವಾಗಿಯೂ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಅವರನ್ನು ಪಾಲಿಸಿದ್ದೇ ಆಗಿದ್ದಲ್ಲಿ ಕರ್ನಾಟಕದಲ್ಲಿ ಕೋಮುಭಾವನೆ ಕೆರಳುತ್ತಿರಲಿಲ್ಲ. ಜಾತಿರಹಿತವಾದ ಅಂಥ ವ್ಯಕ್ತಿಯನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳುವಲ್ಲಿ ನಾವು ಎಡವಿದ್ದೇವೆ ಎಂದು ವಿಷಾದಿಸಿದರು.ಮಾನವ ಬಂಧುತ್ವ ವೇದಿಕೆಯಿಂದ ಮುಂದಿನ ತಿಂಗಳು ನಾಗಪಂಚಮಿಯ ಬದಲಿಗೆ ಬಸವಪಂಚಮಿಯನ್ನು ರಾಜ್ಯದ 2 ಸಾವಿರ ಹಳ್ಳಿಗಳಲ್ಲಿ ಆಚರಿಸಲಾಗುತ್ತಿದೆ. ಪೌಷ್ಟಿಕವಾದ ಹಾಲನ್ನು ಕಲ್ಲು ನಾಗರಕೆ ಹಾಕುವ ಬದಲು, ಮಕ್ಕಳಿಗೆ ಕೊಡುವ ಮತ್ತು ಮೌಢ್ಯಾಚರಣೆ ನೆಪದಲ್ಲಿ ಹಾಲನ್ನು ನೆಲಕ್ಕೆ ಹಾಕುವುದು ಬೇಡ ಎನ್ನುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ರೇವಣ ಸಿದ್ದೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎಸ್. ನಾಗರಾಜಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಿಜಿಕೆ ಪ್ರಶಸ್ತಿಯನ್ನು ಚಿಕ್ಕಬೆನ್ನೂರಿನ ರಂಗಕರ್ಮಿ ಜಿ.ಎಚ್. ರುದ್ರೇಶ್ ಅವರಿಗೆ ಹಾಗೂ ಬಸವಜ್ಯೋತಿ ಪ್ರಶಸ್ತಿಯನ್ನು ವಿಭೂತಿ ಬಸವಾನಂದರಿಗೆ ಪ್ರದಾನ ಮಾಡಲಾಯಿತು.
ಅನಂತರ ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಬಾಕ್ಸ್ "ಪ್ರಶಸ್ತಿಗೆ ರಾಜಕೀಯ ಲಾಬಿ ಸಲ್ಲ " ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿ, ನಿಜವಾದ ಕಲಾವಿದರಿಗೆ ಪ್ರಶಸ್ತಿ, ಸನ್ಮಾನಗಳು ಸಿಗುತ್ತಿಲ್ಲ. ಬದಲಿಗೆ ರಾಜಕೀಯ ಲಾಬಿ ಮಾಡಿ ಪ್ರಶಸ್ತಿಗಳನ್ನು ಪಡೆಯುವ ವಾತಾವರಣ ನಿರ್ಮಾಣ ಆಗಿರುವುದು ಖೇದಕರ. ನಾಡಿನ ನಿಜವಾದ ಕಲೆ, ಕಲಾವಿದರು ನಶಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಕಲಾಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದರು.
-20ಕೆಡಿವಿಜಿ41ಃ: