ಕನ್ನಡಪ್ರಭ ವಾರ್ತೆ ಕುಂದಾಪುರ
‘ವೈಜಯಂತಿಪುರ’ ಕಾದಂಬರಿಯು ಕದಂಬ ಅರಸು ಮನೆತನದ ಸ್ಥಾಪಕ ಮಯೂರ ಶರ್ಮನ ಜೀವಿತಕ್ಕೆ ಸಂಬಂಧಿಸಿದ ವಿವಿಧ ಆಕರಗಳನ್ನು ಕಲೆಹಾಕಿ ರಚಿಸಿದ ವಿಶಿಷ್ಟ ಐತಿಹಾಸಿಕ ಕಾದಂಬರಿಯಾಗಿದೆ.
‘ದೇವರಾಗಲು ಮೂರೇ ಗೇಣು’ ಕಾದಂಬರಿಯು ವೈದ್ಯಕೀಯ ರಂಗದಲ್ಲಿ ಐವಿಎಫ್ ತಂತ್ರಜ್ಞಾನವು ಆಗುಮಾಡಿಕೊಟ್ಟ ಸಾಧ್ಯತೆ ಮತ್ತು ಸಮಸ್ಯೆಗಳನ್ನು ಚಿತ್ರಿಸುವ ಮೆಡಿಕೋ-ಸೋಶಿಯಲ್ ಕಾದಂಬರಿಯಾಗಿದೆ.ಈ ಎರಡೂ ಕಾದಂಬರಿಗಳು ತಮ್ಮ ಪ್ರಕಾರಗಳಲ್ಲಿ ಗಮನಾರ್ಹವಾದ ಪ್ರಯತ್ನಗಳೆಂದು ಮೂವರು ತೀರ್ಪುಗಾರರ ಸಮಿತಿಯು ನಿರ್ಣಯಿಸಿರುವುದರಿಂದ ಈ ಎರಡೂ ಕಾದಂಬರಿಗಳನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ ಅವರು ತಿಳಿಸಿರುತ್ತಾರೆ.
ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು 10 ಸಾವಿರ ರು. ನಗದು ಬಹುಮಾನಗಳನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕಾದಂಬರಿಕಾರರಾದ ಸಂತೋಷಕುಮಾರ ಮೆಹೆಂದಳೆ ಮತ್ತು ಡಾ. ಶಾಂತಲರವರಿಗೆ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗುವ ಸಾರ್ವಜನಿಕ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಎನ್. ಭಾಸ್ಕರಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.