ಮಕ್ಕಳ ಜೀವನ ಗುಣಮಟ್ಟ ಸುಧಾರಣೆಗೆ ಬಾಲ ಸ್ವಾಸ್ಥ್ಯ ಯೋಜನೆ: ಮಂಜುನಾಥ್‌

KannadaprabhaNewsNetwork |  
Published : Mar 08, 2024, 01:49 AM ISTUpdated : Mar 08, 2024, 01:50 AM IST
ಚಿತ್ರ:ಭರಮಸಾಗರ ಸಮೀಪದ ಬೇವಿನಹಳ್ಳಿಯಲ್ಲ ಆಯೋಜಿಸಿದ್ದ ರಾಷ್ಟ್ರೀಯ ಸ್ವಾಸ್ಥ್ಯ ಆರೋಗ್ಯ ಯೋಜನೆ ಕಾರ್ಯಕ್ರಮದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಲುವಾರಿ ರಾಷ್ಟ್ರೀಯ ಸ್ಥಾಸ್ಥ್ಯ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ.

ಸಿರಿಗೆರೆ:ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಲುವಾರಿ ರಾಷ್ಟ್ರೀಯ ಸ್ಥಾಸ್ಥ್ಯ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಇದರ ಮೂಲಕ ಸಮುದಾಯದ ಎಲ್ಲಾ ಮಕ್ಕಳ ಸಮಗ್ರ ಆರೈಕೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.‌ಎಸ್. ಮಂಜುನಾಥ್‌ ತಿಳಿಸಿದರು.

ಭರಮಸಾಗರ ಸಮೀಪದ ಬೇವಿನಹಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಾಸ್ಥ್ಯ ಆರೋಗ್ಯ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಡಿಯಲ್ಲಿ ಹುಟ್ಟಿನ ದೋಷ, ರೋಗ, ನ್ಯೂನತೆ ಮತ್ತು ಬೆಳವಣಿಗೆಯ ವಿಳಂಬ ಮುಂತಾದ ಆರೋಗ್ಯ ನಿರ್ವಹಣೆ ಮಾಡಲಾಗುವುದು ಎಂದರು.

18 ವರ್ಷದ ಮಕ್ಕಳನ್ನು 4 ವಿಭಾಗಗಳನ್ನಾಗಿ ಮಾಡಿ ಅವರ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಕೆಲಸ ಮಾಡಲಾಗುವುದು. ಈ ಸೌಲಭ್ಯವು ಉಚಿತವಾಗಿ ಸಮುದಾಯದ ಎಲ್ಲ ವರ್ಗದ ಜನರಿಗೆ ಸಿಗುತ್ತದೆ. ಇದರಿಂದ ಮಕ್ಕಳ ಆರೋಗ್ಯ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದರು.

ಮಕ್ಕಳ ತಪಾಸಣೆಗೆ ಅನುಕೂಲವಾಗುವಂತೆ, ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ 0ರಿಂದ 6 ವರ್ಷದೊಳಗಿನ ಮಕ್ಕಳನ್ನು ಪರೀಕ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಸರ್ಕಾರಕ್ಕೆ ದಾಖಲಾದ ಮಕ್ಕಳನ್ನು ಪರೀಕ್ಷಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳು ಮುಂದಾಗಿವೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಜಿಲ್ಲೆಯ ೫೩೦ ಅಂಗನವಾಡಿ ಕೇಂದ್ರಗಳಲ್ಲಿ ೨೫,೯೩೩ ಮಕ್ಕಳು, ೪೩೪ ಶಾಲೆಗಳಲ್ಲಿ ೪೫,೨೭೮ ಮಕ್ಕಳು ಇದ್ದು ಅವರನ್ನು ಆರೋಗ್ಯ ತಪಾಸಣೆಗೆ ವರ್ಷದಲ್ಲಿ ಒಂದು ಬಾರಿಯಾದರು ಒಳಪಡಿಸಬೇಕು ಎಂದರು.

ಬೇವಿನಹಳ್ಳಿ ಮತ್ತು ನಂದಿಹಳ್ಳಿ ಗ್ರಾಮಗಳಲ್ಲಿನ ೫ ಅಂಗನವಾಡಿ ಕೇಂದ್ರಗಳ ೧೫೧ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.

ಡಾ.ಮಹೇಂದ್ರ ಕುಮಾರ್, ಡಾ.ಸುಪ್ರಿತಾ, ಶುಶ್ರೂಷಕಿ ಪೂಜಾ, ಸಮುದಾಯ ಆರೋಗ್ಯಾಧಿಕಾರಿ ಬಿ.ಕೆ.ಸುಧಾ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಆಧಿಕಾರಿ ಮಲ್ಲಮ್ಮ, ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ, ಜ್ಯೋತಿಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ನೇತ್ರಾವತಿ ಶಿವಮ್ಮ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ