ಬಾಲ್ಯ ವಿವಾಹ : ೮ ಮಂದಿ ವಿರುದ್ದ ಪ್ರಕರಣ ದಾಖಲು

KannadaprabhaNewsNetwork |  
Published : Apr 28, 2025, 11:50 PM IST

ಸಾರಾಂಶ

ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ೧೫ ವರ್ಷದ ಬಾಲಕಿಗೆ ಸುಮಾರು ೨೭ ವರ್ಷದ ಯುವಕನೊಂದಿಗೆ ಬಾಲ್ಯವಿವಾಹ ನೆರವೇರಿಸಿದ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ ೧೦೯೮ಗೆ ದೂರು ದಾಖಲಾಗಿದ್ದು, ಈ ಸಂಬಂಧ ಬಾಲಕಿಯ ಮನೆ ಭೇಟಿ ಮಾಡಲಾಗಿ ವಿವಾಹವು ನೆರವೇರಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ೮ ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ೧೫ ವರ್ಷದ ಬಾಲಕಿಗೆ ಸುಮಾರು ೨೭ ವರ್ಷದ ಯುವಕನೊಂದಿಗೆ ಬಾಲ್ಯವಿವಾಹ ನೆರವೇರಿಸಿದ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ ೧೦೯೮ಗೆ ದೂರು ದಾಖಲಾಗಿದ್ದು, ಈ ಸಂಬಂಧ ಬಾಲಕಿಯ ಮನೆ ಭೇಟಿ ಮಾಡಲಾಗಿ ವಿವಾಹವು ನೆರವೇರಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ೮ ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಬಾಲ್ಯವಿವಾಹವನ್ನು ನೆರವೇರಿಸಿದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ಕಲಂ ೯ ೧, ೧೧ ರಂತೆ ಯುವಕ (ಎ-೧) ಯುವಕನ ತಂದೆ (ಎ-೨) ಯುವಕನ ತಾಯಿ (ಎ-೩) ಅಪ್ರಾಪ್ತ ಬಾಲಕಿಯ ತಂದೆ (ಎ-೪), ಅಪ್ರಾಪ್ತ ಬಾಲಕಿಯ ತಾಯಿ (ಎ-೫) ಅಪ್ರಾಪ್ತ ಬಾಲಕಿಯ ಸಂಬಂಧಿಕರು (ಎ-೬, ಮತ್ತು ಎ-೭) ಬಾಲ್ಯವಿವಾಹ ನೆರವೇರಿಸಿಕೊಟ್ಟ ಪೂಜಾರಿ (ಎ-೮) ಇವರುಗಳ ವಿರುದ್ಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ-೧೦೯೮ ಸಂಯೋಜಕರು ಪ್ರಕರಣ ದಾಖಲಿಸಿದ್ದಾರೆ. ಬಾಲ್ಯವಿವಾಹವು ರಾಜ್ಯದ ಅಭಿವೃದ್ಧಿ ಮಾರಕವಾಗಿರುವ ಸಮಸ್ಯೆಯಾಗಿದ್ದು, ಬಾಲ್ಯವಿವಾಹವನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕ ಪ್ರಜೆಯ ಕರ್ತವ್ಯವಾಗಿರುತ್ತದೆ. ಬಾಲ್ಯವಿವಾಹವು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯವಿವಾಹವು ನಡೆದಲ್ಲಿ ತಂದೆ-ತಾಯಿ, ಸಂಬಂಧಿಕರು, ಪೂಜಾರಿಗಳು, ಕುಮ್ಮಕ್ಕು ನೀಡಿದವರು ಹಾಗೂ ಭಾಗೀದಾರರು ತಪ್ಪಿತಸ್ಥರಾಗಲಿದ್ದು, ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ. ಕಾನೂನು ಪ್ರಕಾರ ೨ ವರ್ಷ ಜೈಲು ಹಾಗೂ ೧ ಲಕ್ಷ ರುಪಾಯಿಗಳ ದಂಡವನ್ನು ವಿಧಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ