ಕನ್ನಡಪ್ರಭ ವಾರ್ತೆ ಶಿಕಾರಿಪುರ
ಶನಿವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ದಿ.ಮೈತ್ರಾ ದೇವಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಜೀವನ ಬಂಗಾರದ ಜೀವನ, ಎಸ್.ಎಸ್.ಎಲ್.ಸಿಯ ವರೆಗೆ ಒಂದು ಘಟ್ಟವಾದರೆ, ಪಿಯುಸಿಯಲ್ಲಿ ಹೊಸ ಕನಸುಗಳೊಂದಿಗೆ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪದವಿಯಲ್ಲಿ ವಿದ್ಯಾರ್ಥಿಗಳ ಸಂತೋಷಕ್ಕೆ ಮಿತಿ ಇರುವುದಿಲ್ಲ ಎಂದ ಅವರು, ವಿದ್ಯಾರ್ಥಿಯ ಯಶಸ್ಸಿನ ಹಿಂದೆ ತಂದೆ ತಾಯಿ ಸಹೋದರ ಸಹೋದರಿಯರ ಪಾತ್ರವನ್ನು ಯುವ ವಿದ್ಯಾರ್ಥಿಗಳು ಮರೆಯಬಾರದೆಂದರು.ಪ.ಪೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಬೇಕೆಂದರು. ಡಾ.ಸರ್ಪ್ರಾಜ್ ಚಂದ್ರಗುತ್ತಿ ವಿಶೇಷ ಉಪನ್ಯಾಸ ನೀಡಿ, ಹಳ್ಳಿಯ ವಿದ್ಯಾರ್ಥಿಗಳು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಸಾಮಾಜಿಕ ಶಿಕ್ಷಣವನ್ನು ಕಲಿಯಿರಿ. ಹೊರಗಿನ ಪ್ರಪಂಚವನ್ನು ಕಣ್ಣು ತೆಗೆದು ನೋಡಿ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಹಾಲಪ್ಪ, ಸದಸ್ಯರಾದ ಕೆ.ಜಿ.ವಸಂತಗೌಡ್ರು,ರುಕ್ಮಿಣಮ್ಮ, ಪ್ರಾಚಾರ್ಯ ಸಿ.ಬಿ. ವೆಂಕಟೇಶ್, ಉಪನ್ಯಾಸಕ ಹೋಭ್ಯಾ ನಾಯ್ಕ್, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಎಚ್.ಪುಟ್ಟಪ್ಪ ಬಿಳವಾಣಿ, ಮಂಜುನಾಥ ಎಂ.ಆರ್, ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಪಿ., ಉಪನ್ಯಾಸಕ ಶಾಂತಲಾ ಜೆ.ಪಿ,ರವಿಕುಮಾರ್ ಆರ್, ಮಹೇಶ್ಚಂದ್ರ ಬಿ.ವಿ,ರೇವಣಪ್ಪ ಎಚ್, ಸತೀಶ್ ಸಿಂದೆ, ಮಧು ಎಂ.ಪಿ, ಡಾ.ಹರೀಶ್ ಕುಮಾರ್, ಜಯಲಕ್ಷ್ಮಿ ಭಟ್, ಪ್ರವೀಣ್ ಕುಮಾರ್, ಡಿ.ಸಂತೋಷ್, ಮಂಜುಳಾ ಚಿಂದಿ, ಪ್ರ.ದ.ಸಹಾಯಕಿ ಕು.ಲತಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.