ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು: ಶಾಸಕ ದೊಡ್ಡನಗೌಡ ಪಾಟೀಲ

KannadaprabhaNewsNetwork |  
Published : Oct 01, 2024, 01:43 AM IST
್ದಎ್ವಗವ | Kannada Prabha

ಸಾರಾಂಶ

ಮಗು ಹುಟ್ಟಿದ ತಕ್ಷಣ ತಾಯಿ ಎದೆಹಾಲನ್ನು ಕುಡಿಸಬೇಕು. ಮಗುವಿಗೆ ಕಾಲಕಾಲಕ್ಕೆ ಚುಚ್ಚುಮದ್ದುಗಳನ್ನು ಹಾಕಬೇಕು.

ಕನ್ನಡಪ್ರಭ ವಾರ್ತೆ ಹನುಮಸಾಗರ

ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಒಂದು ತಿಂಗಳ ಪೌಷ್ಟಿಕ ಅಭಿಯಾನ ಹಮ್ಮಿಕೊಂಡಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಸಮೀಪದ ಮನ್ನೇರಾಳ ಗ್ರಾಮದಲ್ಲಿ ಸೋಮವಾರ ನಡೆದ ಹನುಮಸಾಗರ ವಲಯ ಮಟ್ಟದ ಅಂಗನವಾಡಿ ಕೇಂದ್ರಗಳ ಪೌಷ್ಟಿಕತೆ ಅಭಿಯಾನದ ಸಮಾರೋಪದಲ್ಲಿ ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಸೀಮಂತ ಕಾರ್ಯಕ್ರಮದ ಮೂಲಕ ಆರೋಗ್ಯದ ಬಗ್ಗೆ ಹಾಗೂ ಮುಂದಿನ ಶಿಶುಗಳ ಬೆಳವಣಿಗೆಯ ಬಗ್ಗೆ ಎಚ್ಚರಿಕೆ ನೀಡುವರು. ಮನೆಯಲ್ಲಿ ಒಂದು ಮಗು ನಿಭಾಯಿಸಲು ಆಗುವುದಿಲ್ಲ. ಕಾರ್ಯಕರ್ತೆಯರು ಯಾವುದೇ ವೇಳೆಯಲ್ಲಿ ನಾನಾ ಯೋಜನೆಗಳನ್ನು ಸರಿಪಡಿಸಿಕೊಂಡು ತಿದ್ದಿಕೊಂಡು ಹೋಗುತ್ತಾರೆ, ಅವರ ಕಾರ್ಯ ಶ್ಲಾಘನೀಯ. ತಾಯಂದಿರು ಅವರ ಮಾರ್ಗದರ್ಶನ ಪಡೆದು ಲಾಲನೆ, ಪಾಲನೆ ಹಾಗೂ ಪೋಷಣೆ ಮಾಡುವ ಕಾರ್ಯ ಮಾಡಬೇಕು ಎಂದರು.

ಪೋಷಣ್‌ ಅಭಿಯಾನದ ತಾಲೂಕು ಸಂಯೋಜಕಿ ಭಾಗ್ಯಶ್ರೀ ಹೊಸಮನಿ ಮಾತನಾಡಿ, ಅಂಗನವಾಡಿಯಲ್ಲಿ ಅನ್ನಪ್ರಾಶನ, ಶಾಲಾ ಪೂರ್ವ ಶಿಕ್ಷಣ, ಸುಪೋಕ್ಷಣ, ಪೋಷಣ್‌ ಮಾಸಚಾರಣೆ ಇವೆ. ಇವು ವಾರ ಪೂರ್ತಿ ನಡೆಯುತ್ತವೆ. ಮಗು ಹುಟ್ಟಿದ ತಕ್ಷಣ ತಾಯಿ ಎದೆಹಾಲನ್ನು ಕುಡಿಸಬೇಕು. ಮಗುವಿಗೆ ಕಾಲಕಾಲಕ್ಕೆ ಚುಚ್ಚುಮದ್ದುಗಳನ್ನು ಹಾಕಬೇಕು ಎಂದರು.

ಗ್ರಾಪಂ ಸದಸ್ಯ ಸಿದ್ಧಪ್ಪ ಬೆನಕಟ್ಟಿ ಮಾತನಾಡಿ, ಗ್ರಾಮದಲ್ಲಿ ಅಂಗನವಾಡಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಹಲವಾರು ಬಾರಿ ಅಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದ ಇಂತಹ ಮಹತ್ವ ಯೋಜನೆಗಳು ಸರಿಯಾಗಿ ಬಳಕೆ ಆಗಬೇಕು ಎಂದರು.

ಪ್ರಮುಖರಾದ ರುದ್ರಗೌಡ ಗೌಡಪ್ಪನವರ, ಬಸವರಾಜ ಹಳ್ಳೂರ, ಮೇಘರಾಜ ವಜ್ಜಲ, ಯಲ್ಲಪ್ಪ ರಾಯಕರ, ಸಿದ್ದಪ್ಪ ಬೆನಕಟ್ಟಿ, ವೀರೇಶ ಬಡಿಗೇರ, ನಾಗಮ್ಮ, ಶಿವಪ್ಪ ಹುಣಿಶ್ಯಾಳ, ಮೇಘರಾಜ ಪಾವಿ, ಮಾಲತೇಶ ಆಡೂರ, ಯಲ್ಲಪ್ಪ ಗುಣನಾಳ, ಸಂಗಮೇಶ ಗುರಿಕಾರ, ತಾಲೂಕಿನ ಯಮನೂರಪ್ಪ ಕಬ್ಬರಗಿ, ಅಂಗನವಾಡಿ ಸಹಾಯಕಿಯರು, ನಿರ್ದೇಶಕರು ಇತರರು ಇದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸಿಮಂತ, ಮಕ್ಕಳಿಗೆ ಅನ್ನಪ್ರಾಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!