ಕಾಲ್ಪನಿಕ ರಾಕೆಟ್ ಮೂಲಕ ಮಕ್ಕಳ ಬಾಹ್ಯಾಕಾಶ ಪಯಣ

KannadaprabhaNewsNetwork |  
Published : Feb 05, 2026, 02:15 AM IST
3ಎಚ್ಎಸ್ಎನ್8 : ಮಣ್ಣಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಸುಮಾರು 90 ನಿಮಿಷಗಳ ಕಾಲ ನಡೆದ ಈ ರೋಚಕ ಸಂವಾದದಲ್ಲಿ, ವಿದ್ಯಾರ್ಥಿಗಳನ್ನು ಕಾಲ್ಪನಿಕ ರಾಕೆಟ್ ಮೂಲಕ ಬಾಹ್ಯಾಕಾಶ ಪಯಣಕ್ಕೆ ಕರೆದೊಯ್ದ ಅವರು, ಭೂಮಿಯ ವಾತಾವರಣದ ಪದರಗಳಿಂದ ಆರಂಭಿಸಿ ಸೌರವ್ಯೂಹದ ಗ್ರಹಗಳ ವೈಚಿತ್ರಗಳು, ನಕ್ಷತ್ರಗಳ ಹುಟ್ಟು-ಸಾವು (ಸೂಪರ್ ನೋವಾ) ಹಾಗೂ ಬ್ರಹ್ಮಾಂಡದ ನಿಗೂಢ ರಹಸ್ಯವಾದ ''''ಕಪ್ಪುಕುಳಿ'''' ಕುರಿತು ಸರಳವಾಗಿ ವಿವರಿಸಿದರು. "ಪ್ರಶ್ನೆ ಕೇಳುವವನೇ ನಿಜವಾದ ವಿಜ್ಞಾನಿ. ನಿಮ್ಮ ಕಾಲುಗಳು ಭೂಮಿ ಮೇಲಿದ್ದರೂ ಮನಸ್ಸು ಆಕಾಶದಾಚೆಗಿನ ಅದ್ಭುತಗಳ ಕಡೆಗೆ ಸದಾ ಚಲಿಸುತ್ತಿರಲಿ " ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಕನ್ನಡಪ್ರಭ ವಾರ್ತೆ ಹಾಸನ

ವಿಶ್ವದ ಅನಂತ ಪಯಣದಲ್ಲಿ ಭೂಮಿಯೆಂಬುದು ಒಂದು ಪುಟ್ಟ ನೀಲಿ ಚುಕ್ಕೆ. ನಾವು ನಕ್ಷತ್ರಗಳ ಧೂಳಿನಿಂದ ಬಂದವರು ಎಂಬ ಅರಿವು ನಮ್ಮಲ್ಲಿ ಮೂಡಿದಾಗ ಮಾತ್ರ ನಮಗೆ ಪರಿಸರದ ಮೇಲೆ ಕಾಳಜಿ ಮತ್ತು ವಿಜ್ಞಾನದ ಬಗ್ಗೆ ಕುತೂಹಲ ಬೆಳೆಯಲು ಸಾಧ್ಯ ಎಂದು ಖ್ಯಾತ ವಿಜ್ಞಾನ ಸಂವಹನಕಾರ ಹಾಗೂ ಬಿ.ಜಿ.ವಿ.ಎಸ್ ಜಿಲ್ಲಾ ಸಮಿತಿ ಸದಸ್ಯ ಅಹಮದ್ ಹಗರೆ ತಿಳಿಸಿದರು.

ಇತ್ತೀಚೆಗೆ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ "ಬ್ರಹ್ಮಾಂಡದ ಅನಂತ ಪಯಣ: ನಮ್ಮ ಮನೆಯಂಗಳದಿಂದ ಕಪ್ಪುಕುಳಿಯವರೆಗೆ " ಎಂಬ ವಿಶೇಷ ವಿಜ್ಞಾನ ಸಂವಾದ ಮತ್ತು ಪಿ.ಪಿ.ಟಿ ಪ್ರಸ್ತುತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಸುಮಾರು 90 ನಿಮಿಷಗಳ ಕಾಲ ನಡೆದ ಈ ರೋಚಕ ಸಂವಾದದಲ್ಲಿ, ವಿದ್ಯಾರ್ಥಿಗಳನ್ನು ಕಾಲ್ಪನಿಕ ರಾಕೆಟ್ ಮೂಲಕ ಬಾಹ್ಯಾಕಾಶ ಪಯಣಕ್ಕೆ ಕರೆದೊಯ್ದ ಅವರು, ಭೂಮಿಯ ವಾತಾವರಣದ ಪದರಗಳಿಂದ ಆರಂಭಿಸಿ ಸೌರವ್ಯೂಹದ ಗ್ರಹಗಳ ವೈಚಿತ್ರಗಳು, ನಕ್ಷತ್ರಗಳ ಹುಟ್ಟು-ಸಾವು (ಸೂಪರ್ ನೋವಾ) ಹಾಗೂ ಬ್ರಹ್ಮಾಂಡದ ನಿಗೂಢ ರಹಸ್ಯವಾದ ''''''''ಕಪ್ಪುಕುಳಿ'''''''' ಕುರಿತು ಸರಳವಾಗಿ ವಿವರಿಸಿದರು. "ಪ್ರಶ್ನೆ ಕೇಳುವವನೇ ನಿಜವಾದ ವಿಜ್ಞಾನಿ. ನಿಮ್ಮ ಕಾಲುಗಳು ಭೂಮಿ ಮೇಲಿದ್ದರೂ ಮನಸ್ಸು ಆಕಾಶದಾಚೆಗಿನ ಅದ್ಭುತಗಳ ಕಡೆಗೆ ಸದಾ ಚಲಿಸುತ್ತಿರಲಿ " ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಜಿ.ವಿ.ಎಸ್ ಹಾಸನ ತಾಲೂಕು ಸಮಿತಿ ಅಧ್ಯಕ್ಷರಾದ ಡಾ. ಎಚ್.ಜಿ. ಮಂಜುನಾಥ್ ಅವರು ಮಾತನಾಡಿ, ಇಕೋ ಕ್ಲಬ್‌ನ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಅಗತ್ಯ ಪ್ರತಿಪಾದಿಸಿದರು. ಪರಿಸರಾನಂದದ ಕುರಿತು ಮಾತನಾಡುತ್ತಾ, ಹಸಿರು ಹೊದಿಕೆಯ ಹೆಚ್ಚಳ, ಮನುಷ್ಯನ ಚಯಾಪಚಯ ಕ್ರಿಯೆ, ದ್ಯುತಿಸಂಶ್ಲೇಷಣೆ ಹಾಗೂ ಸ್ವಚ್ಛತೆಯ ಮಹತ್ವದ ಬಗ್ಗೆ ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ಶಾಲೆಯ ಮುಖ್ಯೋಪಾಧ್ಯಾಯರಾದ ರವೀಶ ವಹಿಸಿದ್ದರು. ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥರಾವ್ ಚೌಹಾಣ್ ಉಪಸ್ಥಿತರಿದ್ದು ಹಿತನುಡಿಗಳನ್ನಾಡಿದರು.

ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಅಶ್ವಾಕ್ ತಬ್ರೈಸ್ ಸ್ವಾಗತ ಕೋರಿದರು. ಇಕೋ ಕ್ಲಬ್ ಮಾರ್ಗದರ್ಶಕಿ ಪೃಥ್ವಿ ನಿರೂಪಣೆ ಮಾಡಿದರು. ಸಣ್ಣಲಿಂಗಗೌಡ ವಂದನಾರ್ಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಕ್ಷಸಿಯ ಆಡಳಿತ ವಿನಾಶವಾಗಿ ಪ್ರಜಾಪ್ರಭುತ್ವ ಗೆಲ್ಲಲಿ
ಕ್ಷೇತ್ರದಲ್ಲಿ 30 ಸಾವಿರ ಅನರ್ಹ ಮತ ರದ್ದಾಗುವ ಸಾಧ್ಯತೆ