ಮನೆ ಬಾಗಿಲಿಗೇ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ

KannadaprabhaNewsNetwork |  
Published : Dec 03, 2023, 01:00 AM IST
೨ ಟಿವಿಕೆ ೧ - ತುರುವೇಕೆರೆ ತಾಲ್ಲೂಕಿನ ಜಡೆಯ ಗ್ರಾಮದ ಯೋಗೇಶ್ ಎಂಬುವರ ಮನೆಯ ಬಳಿ ಬಂದಿರುವ ಚಿರತೆ. | Kannada Prabha

ಸಾರಾಂಶ

ತೋಟದ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಜಡಯ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ತೋಟದ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಜಡಯ ಗ್ರಾಮದಲ್ಲಿ ನಡೆದಿದೆ.

ಜಡಯದ ತೋಟದ ಮನೆಯಲ್ಲಿ ಯೋಗೀಶ್, ರಾಟ್ ವೀಲರ್ ಜಾತಿಯ ನಾಯಿ ಸಾಕಿದ್ದರು. ತಡರಾತ್ರಿ ಆರು ಅಡಿಗೂ ಎತ್ತರವಿರುವ ಕಾಂಪೌಂಡ್‌ ಎಗರಿ ಒಳ ಬಂದ ಚಿರತೆ ಓಡಿಸಲು ನಾಯಿ ಪ್ರಯತ್ನಿಸಿದೆ. ನಂತರ ಚಿರತೆ, ನಾಯಿಯನ್ನು ಓಡಿಸಿಕೊಂಡು ಹೋಗಿದೆ.

ಯೋಗೀಶ್ ಅವರ ಸಹೋದರ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಕಾಂಪೌಂಡ್ ಒಳಗೆ ಹಾರಿ ನಾಯಿಯ ಬೇಟೆ ದೃಶ್ಯ ಸೆರೆಯಾಗಿದೆ. ಅರಣ್ಯ ಇಲಾಖೆಯವರು ಬೋನು ಇರಿಸಿ ಚಿರತೆ ಮತ್ತು ಕರಡಿ ಹಿಡಿಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಫೋಟೊ.....

೨ ಟಿವಿಕೆ ೧

ತುರುವೇಕೆರೆ ತಾಲೂಕಿನ ಜಡೆಯ ಗ್ರಾಮದ ಯೋಗೇಶ್ ಅವರ ಮನೆಯ ಬಳಿ ಬಂದಿರುವ ಚಿರತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ