ನಿಯಮಾನುಸಾರ ನಾಗರೀಕರ ಸೇವೆ ಮಾಡಬೇಕು: ಗೌರವ ಸ್ವೀಕರಿಸಿ ಉಪ ತಹಸೀಲ್ದಾರ್ ರವಿ ಸಲಹೆ

KannadaprabhaNewsNetwork |  
Published : Jun 09, 2026, 02:00 AM IST
ಉಪತಹಸೀಲ್ದಾರ್ ಆಗಿ ಯೋಗೇಶ್ ಅಧಿಕಾರ ಸ್ವೀಕರಿಸಿದರು. | Kannada Prabha

ಸಾರಾಂಶ

ಸರ್ಕಾರಿ ನೌಕರರಿಗೆ ಭಯವಿದ್ದರೆ ಮಾತ್ರ ಅವರ ಕರ್ತವ್ಯದಲ್ಲಿ ಯಶಸ್ಸು ಕಾಣಬಹುದು ಎಂದು ಉಪ ತಹಸೀಲ್ದಾರ್ ಆರ್.ರವಿ ಅಭಿಪ್ರಾಯಪಟ್ಟಿದ್ದಾರೆ.

- ನೂತನ ಉಪ ತಹಸೀಲ್ದಾರ್ ಆಗಿ ಯೋಗೇಶ್ ಅಧಿಕಾರ ಸ್ವೀಕಾರ

- - -

ಮಲೇಬೆನ್ನೂರು: ಸರ್ಕಾರಿ ನೌಕರರಿಗೆ ಭಯವಿದ್ದರೆ ಮಾತ್ರ ಅವರ ಕರ್ತವ್ಯದಲ್ಲಿ ಯಶಸ್ಸು ಕಾಣಬಹುದು ಎಂದು ಉಪ ತಹಸೀಲ್ದಾರ್ ಆರ್.ರವಿ ಅಭಿಪ್ರಾಯಪಟ್ಟರು.

ಇಲ್ಲಿನ ನಾಡ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಹಿರಿಯೂರು ತಾಲೂಕು ಧರ್ಮಪುರಕ್ಕೆ ವರ್ಗಾವಣೆಯಾದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಮಾಯಕೊಂಡ, ಗೋಪನಾಳ್, ರಾಮಗಿರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಆಹಾರ ಶಿರಸ್ತೇದಾರ್ ಆಗಿ ಒಟ್ಟು ೩೪ ವರ್ಷ ಸೇವೆ ಮಾಡಿದ್ದೇನೆ. ಸರ್ಕಾರ ವೇತನ ಕೊಡುತ್ತೆ, ನಿಯಮಾನುಸಾರ ನಾಗರೀಕರ ಸೇವೆ ಮಾಡಬೇಕು. ಅನಿವಾರ್ಯವಾದಲ್ಲಿ, ಅಗತ್ಯ ದಾಖಲೆಯಿದ್ದಲ್ಲಿ ಮಾನವೀಯತೆಯಲ್ಲಿಯೂ ಕರ್ತವ್ಯ ಮಾಡಬೇಕು ಎಂದರು.

ಮಲೇಬೆನ್ನೂರು ಸುತ್ತ ೧೫ ವೃತ್ತದ ಗ್ರಾಮಾಡಳಿತ ಅಧಿಕಾರಿಗಳ ೫೭ ಗ್ರಾಮಗಳ ವ್ಯಾಪ್ತಿಯಲ್ಲಿ ಕೋವಿಡ್ ಅವಧಿಯ ಸೇವೆಯು ನಮ್ಮನ್ನು ಮೇಲಾಧಿಕಾರಿಗಳು ಗುರುತಿಸಲು ನೆರವಾಯಿತು. ಕಂದಾಯ ಇಲಾಖೆಯ ಸರ್ವರ ಸಹಕಾರ ಸಕಾಲ ಯೋಜನೆಯ ಕಡತ ವಿಲೇವಾರಿಯಲ್ಲಿ ಜಿಲ್ಲೆಯಲ್ಲಿ 2 ಸಾರಿ ಪ್ರಥಮ ಸ್ಥಾನ ಪಡೆಯಲು ಸಹಕಾರಿಯಾಯಿತು ಎಂದರು.

ಗ್ರಾಮಾಡಳಿತ ಅಧಿಕಾರಿ ವಿಜಯ್‌ ಮಹಂತೇಶ್ ಮಾತನಾಡಿ, ರವಿಯವರ ಅವಧಿಯಲ್ಲಿ ನಾಡ ಕಚೇರಿಯಿಂದ ಅರ್ಧ ಗಂಟೆಯಲ್ಲಿ ಪೌತಿ ಖಾತೆ ಮತ್ತು ವಂಶವೃಕ್ಷ ನೀಡಿದ ದಾಖಲೆಯಿದೆ. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾಗಿ ಹೋರಾಟ ಮಾಡಿ ಕೆಲವರಿಗೆ ಬಡ್ತಿ ನೀಡಿದ್ದು, ನಾಡ ಕಚೇರಿಗೆ ಹೊಸ ಕಟ್ಟಡ ಮಂಜೂರು ಮಾಡಿಸಿದ್ದು ವಿಶೇಷವಾದ ಘಟನೆಗಳಾಗಿವೆ ಎಂದರು.

ರಾಜಸ್ವ ನಿರೀಕ್ಷಕ ಆನಂದ್ ಮಾತನಾಡಿ, ಕಚೇರಿ ಕಾರ್ಯಕ್ಕೆ ರವಿ ಅವರನ್ನು ಬಿಟ್ಟು ಕ್ಷೇತ್ರಮಟ್ಟದಲ್ಲಿ ಮಹಜರ್, ಒತ್ತುವರಿ ತೆರವು, ಅಳತೆ ಇತರೆ ಕಾರ್ಯಕ್ಕೆ ಮೇಲಾಧಿಕಾರಿಗಳ ಜತೆ ನಾವು ಹೋಗುತ್ತಿದ್ದ ಸೇವೆಯನ್ನು ಸ್ಮರಿಸಿದರು.

ಗ್ರಾಮಾಡಳಿತ ಅಧಿಕಾರಿ ಸೌಮ್ಯ, ಅಣ್ಣಪ್ಪ, ರೈತ ಮಂಜು, ಸುರೇಶ್, ಗಂಗಾಧರ್, ಪತ್ರಕರ್ತರಾದ ದೇವರಾಜ್, ಸದಾನಂದ, ರಮೇಶ್, ನಟರಾಜನ್, ಶಿವಕುಮಾರ್ ಮತ್ತಿತರರು ರವಿಯವರ ಕರ್ತವ್ಯವನ್ನು ಮೆಲುಕು ಹಾಕಿದರು. ನೂತನ ಉಪ ತಹಸೀಲ್ದಾರ್ ಆಗಿ ಯೋಗೇಶ್ ಅಧಿಕಾರ ಸ್ವೀಕರಿಸಿದರು.

- - -

-ಚಿತ್ರ-೧: ಉಪ ತಹಸೀಲ್ದಾರ್ ಆಗಿ ಯೋಗೇಶ್ ಅಧಿಕಾರ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ ಸುಧಾಕರ್ ಮಾನವೀಯ ವ್ಯಕ್ತಿತ್ವ ಅಜರಾಮರ: ಡಾ.ಸಿ ಶಿವಲಿಂಗಪ್ಪ
ಎಸ್‌ಐಆರ್ ಮ್ಯಾಪಿಂಗ್ ಕುರಿತು ತರಬೇತಿ